ಪುತ್ತೂರು, ಸೆ. 7: ವಿಜಯ ಬ್ಯಾಂಕ್ನ ನಿವೃತ್ತ ಅಧಿಕಾರಿ, ಸಾಲೆತ್ತೂರು ಬೈರೋಡಿ ನಿವಾಸಿ ಚಂದ್ರಹಾಸ ಶೆಟ್ಟಿ (76) ಅವರು ಶನಿವಾರ ಉಡುಪಿಯಲ್ಲಿ ನಿಧನರಾದರು.
ಉಡುಪಿಯಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರು ವಿಜಯ ಬ್ಯಾಂಕ್ನಲ್ಲಿ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮೃತರು ಪತ್ನಿ ಶೋಭಾ, ಪುತ್ರ ತೇಜಸ್, ಸೊಸೆ ಸುಶ್ಮಿತಾ,ಭಾವoದಿರರಾದ ನಿವೃತ್ತ ಕರ್ನಲ್ ಅಗರಿ ಜಗಜೀವನ್ ಭಂಡಾರಿ ಮತ್ತು ಆರ್ಬಿಐ ಮಾಜಿ ನಿರ್ದೇಶಕ ಡಾ.ಅಗರಿ ನವೀನ್ ಭಂಡಾರಿ ಸೇರಿದಂತೆ ಅಪಾರ ಬಂಧು -ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಸೆ. 7ರ (ಭಾನುವಾರ) ಬೆಳಿಗ್ಗೆ 11 ಗಂಟೆಗೆ ಮಂಗಳೂರಿನ ಕದ್ರಿಯಲ್ಲಿ ನೆರವೇರಿತ್ತು













































































































































































