ಜನಾಭಿಪ್ರಾಯ ವರದಿ: ಡಾ.ಅಶೋಕ್ ಶೆಟ್ಟಿ ಬಿ.ಎನ್.
ಮಂಗಳೂರು: ಅಧಿಕಾರವಿರಲಿ. ಇಲ್ಲದಿರಲಿ, ನಳಿನ್ಕುಮಾರ್ ಕಟೀಲು ಅವರೇ ನಿಜವಾದ ಜನನಾಯಕ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ.

ಮೊನ್ನೆ ಬೋಳಿಯಾರ್ ಪ್ರಕರಣದಲ್ಲಿ ಆಸ್ಪತ್ರೆಗೆ ಸೇರಿದ ಬಿಜೆಪಿ ಕಾರ್ಯಕರ್ತರನ್ನು ಕಟೀಲು ಅವರು ಭೇಟಿಯಾಗಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡ ರೀತಿ ಅವರೊಬ್ಬ ನಿಜವಾದ ಜನನಾಯಕ ಎಂಬುವುದನ್ನು ಜನ ಎಲ್ಲೆಡೆ ಅವರನ್ನು ಶ್ಲಾಘಿಸುವಂತೆ ಮಾಡಿದೆ.
ಮೂರು ಬಾರಿ ದಕ್ಷಿಣ ಕನ್ನಡದ ಎಂಪಿಯಾಗಿ 2 ಲಕ್ಷಕ್ಕೂ ಅಧಿಕ ಕೋಟಿ ರೂಪಾಯಿ ಅನುದಾನವನ್ನು ತಂದಿದ್ದ ನಿಷ್ಕಳಂಕ ನಾಯಕ ಕಟೀಲು ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ ಅತೀ ಹೆಚ್ಚು ಬಾರಿ ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ತಳಮಟ್ಟದಲ್ಲೇ ಕಟ್ಟಿ ಬಲಿಷ್ಠವಾಗಿಸಿದ್ದರು.

ಕಟೀಲು ಅವರ ವರ್ಚಸ್ಸನ್ನು ಸಹಿಸಲಾಗದೆ ಹೊಟ್ಟೆ ಉರಿ ನಂಜು ಮತ್ಸರದಿಂದ ಅಪಪ್ರಚಾರ ನಡೆಸಿದ ಕೈಲಾಗದ ಮಂದಿ ಕಟೀಲು ಅವರಿಗೆ ನಾಲ್ಕನೇ ಬಾರಿಗೆ ಎಂಪಿ ಟಿಕೇಟು ಸಿಗದಿದ್ದಾಗ ಸಂತೋಷದಿಂದ ಹಿಗ್ಗಿ ಹೋಗಿದ್ದರು.
ಇದರ ಜೊತೆಗೆ, ಯಡಿಯೂರಪ್ಪನವರು ಕಟೀಲ್ ಅವರಿಗೆ ಟಿಕೇಟ್ ಸಿಗದಂತೆ ಮಾಡಿ ಕಟೀಲ್ರವರ ಬೆಳವಣಿಗೆಯನ್ನು ಚಿವುಟಲು ನೋಡಿದ್ದರು.

ಆದರೆ, ಕಟೀಲು ಅವರು ಎಲ್ಲವನ್ನು ಸಹಿಸಿಕೊಂಡರು. ಯಾರ ಮೇಲೂ ಕೋಪಗೊಳ್ಳದೆ ಜಾಣ ನಡೆ ಅನುಸರಿಸಿದರು.
ಪ್ರಸ್ತುತ,ಕಟೀಲು ಅವರು ಮಾಜಿ ಸಂಸದ.ಆದರೆ,ಅವರ ಬಳಿ ಬರುವ ಜನ ಸಾಗರ ಕಡಿಮೆಯಾಗಲಿಲ್ಲ.ಕಟೀಲು ಅವರಿಗೆ ಲಕ್ಷ ಲಕ್ಷ ಅಭಿಮಾನಿಗಳಿದ್ದು,ಕಟೀಲು ಅವರು ಅಧಿಕಾರವಿರಲಿ, ಇಲ್ಲದಿರಲಿ ನಿಜವಾದ ಜನನಾಯಕ ಎಂಬ ಜನಾಭಿಪ್ರಾಯಗಳು Mp mla’s ನ್ಯೂಸ್ಗೆ ವ್ಯಕ್ತವಾಗಿವೆ.
ಚಿತ್ರಗಳು :ಸತೀಶ್ ಕಾಪಿಕಾಡ್

















































































































































































