ಮಂಗಳೂರು :ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರ (ಮೂಡಾ )ಅಧ್ಯಕ್ಷರಾಗಿ ಕಾಂಗ್ರೆಸ್ ನ ಹಿರಿಯ ರಾಜಕೀಯ ಮುಂದಾಳು ಸದಾಶಿವ ಉಳ್ಳಾಲ್ ಅವರು ಮಾರ್ಚ್ 1 ರಂದು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಇರಾ ಚಂದ್ರಹಾಸ್ ಕರ್ಕೇರ, ಕಾರ್ಪೊರೇಟರ್ ನವೀನ್ ಆರ್. ಡಿ ‘ಸೋಜಾ ಸಹಿತ ಕಾಂಗ್ರೆಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.























































































































































































