ಮೂಲ್ಕಿ: ಆಷಾಡ ಮಾಸದ ಅಮಾವಾಸ್ಯೆಯಂದು ತುಳುವರು ಸೇವಿಸುವ ಔಷಧೀಯ ಗುಣಗಳುಳ್ಳ ಕಷಾಯವು ಶ್ರೇಷ್ಠವಾಗಿದೆ. ತುಳುನಾಡಿನ ಪ್ರತೀ ಆಚರಣೆಗೂ ಒಂದು ವೈಜ್ಞಾನಿಕ ಮಹತ್ವ ಇದೆ ಎಂದು ಮೂಲ್ಕಿ ಯವವಾಹಿನಿ ಘಟಕ ಅಧ್ಯಕ್ಷೆ ಚರಿಷ್ಮಾ ಶ್ರೀನಿವಾಸ್ ಹೇಳಿದರು.
ಅವರು ಮೂಲ್ಕಿ ಬಸ್ ನಿಲ್ದಾಣದಲ್ಲಿ ನಡೆದ ಮೂಲ್ಕಿ ಯುವವಾಹಿನಿ ಘಟಕದ ಸಂಯೋಜನೆಯಲ್ಲಿ ಲಯನ್ಸ್ ಕ್ಲಬ್ ಮೂಲ್ಕಿ, ಲಿಯೋ ಕ್ಲಬ್ ಮೂಲ್ಕಿ ರೋಟರಿ ಕ್ಲಬ್ ಮೂಲ್ಕಿ, ನವದುರ್ಗಾ ಯುವಕ ವೃಂದ ಕೋಟೆಕೇರಿ, ಮುಲ್ಕಿ ಇದರ ಸಹಕಾರದಲ್ಲಿ ನಡೆದ ಆಟಿಯ (ಆಷಾಡ) ಕಷಾಯದ ಉಚಿತ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೂಲ್ಕಿ ಲಯನ್ಸ್ ಕ್ಲಬ್ನ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು, ವಿನೋದ್ ಸಾಲ್ಯಾನ್, ರೋಟರಿ ಕ್ಲಬ್ ನ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ನವದುರ್ಗಾ ಯುವಕ ವೃಂದ ಕೋಟೆಕೇರಿಯ ಜಯ ಪೂಜಾರಿ, ಯುವವಾಹಿನಿಯ ಸತೀಶ್ ಕಿಲ್ಪಾಡಿ, ಮಾಧವ ಕಿಲ್ಪಾಡಿ, ವಿನಯಕುಮಾರ್ ಮಟ್ಟು, ಭಾಸ್ಕರ ಕೊಕ್ರಾಣಿ, ಲತೀಶ್ ಕುಮಾರ್, ಲಯನ್ಸ್ ನ ಕಿಶೋರ್ ಕುಮಾರ್ ಶೆಟ್ಟಿ, ಸದಾಶಿವ ಹೊಸದುರ್ಗಾ ಮತ್ತಿತರರು ಇದ್ದರು.







































































































































































































