ಬೆಂಗಳೂರು – ಕರ್ನಾಟಕದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಂಪುಟದ ನೂತನ ಸಚಿವರಾಗಿ 20 ಮಂದಿ ಲೋಕಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರಿಂದ ಆಗಸ್ಟ್ 3 ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಸಚಿವ ಸಂಪುಟದಲ್ಲಿ ದಿನೇಶ್ ಗುಂಡೂರಾವ್ ಅವರು ಅವಕಾಶ ವಂಚಿತರಾದರೆ, ಜಮೀರ್ ಅಹ್ಮದ್ ಅವರು ಸ್ಥಾನ ಪಡೆದುಕೊಂಡಿದ್ದಾರೆ. ಇದರೊಂದಿಗೆ ಸಂಪುಟದ ಗಾತ್ರ 34ಕ್ಕೆ ಏರಿದೆ. ನೂತನ ಸಚಿವರ ಆಯ್ಕೆಯಲ್ಲಿ ರಾಹುಲ್ ಗಾಂಧಿ
ಯವರೇ ನೇರವಾಗಿ ಅಂತಿಮ ತೀರ್ಮಾನ ವಹಿಸಿದ್ದು, ಹೊಸ ಮುಖಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ







































































































































































































