ಆಂಜೆಲೋರ್ ಚರ್ಚ್ ನಲ್ಲಿ ನಾಯಕತ್ವ ತರಬೇತಿ ಶಿಬಿರ

113.8K Views 2w ago

ಮಂಗಳೂರು: ಮಂಗಳೂರಿನ ನಾಗುರಿ ಯಲ್ಲಿ ಇರುವ ಆಂಜೆಲೋರ್ ಚರ್ಚ್ ನಲ್ಲಿ ಕ್ಯಾಥೋಲಿಕ್ ಸಭಾ ಆಂಜೆಲೋರ್ ಘಟಕ ಮತ್ತು ಯುವಜನ ಆಯೋಗದ ನೇತೃತ್ವದಲ್ಲಿ ನಾಯಕತ್ವ ತರಬೇತಿ ಶಿಬಿರ ನಡೆಯಿತು.
ಚರ್ಚ್ ನ ಯುವಜನರಿಗೆ ನಾಯಕತ್ವ ಮತ್ತು ಕಾರ್ಯಕ್ರಮ ನಿರ್ವಹಣೆ ಕುರಿತಂತೆ ತರಬೇತಿ, ಸರಕಾರಿ ನೌಕರಿಗೆ ಸೇರುವ ಬಗ್ಗೆ ಪ್ರೇರೇಪಣೆ ನೀಡಲಾಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ
ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ಫೆಡ್ರಿಕ್ ಮೊಂತೇರೊ, ವಂದನೀಯ ಫಾ . ಅವಿಲ್ ಮಸ್ಕರೇನ್ಹಸ್, ಚರ್ಚ್ ಉಪಾಧ್ಯಕ್ಷ ಮತ್ತು ಕಾರ್ಯದರ್ಶಿ, ಕ್ಯಾಥೋಲಿಕ್ ಸಭಾ ಅಧ್ಯಕ್ಷ ಪಾವ್ಲ್ ರೊಡ್ರಿಗಸ್ ಅವರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮನು ಬಂಟ್ವಾಳ್, ಡೆನ್ನಿಸ್ ಡಿ ಸಿಲ್ವಾ, ಸುರೇಶ್ ಎಂ. ಎಸ್., ಜೂಲಿಯೆಟ್ ಫೆರ್ನಾಂಡಿಸ್ ಅವರು ಭಾಗವಹಿಸಿ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

Read More News

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಗೆ ಯಾರಾಗಲಿದ್ದಾರೆ ನೂತನ ಅಧ್ಯಕ್ಷ. ಚುನಾವಣೆ ಪ್ರಕ್ರಿಯೆಯಲ್ಲಿ ಕಾರ್ಯಕರ್ತರ ಬೆಂಬಲ ಯಾರಿಗೆ? ಕಾಂಗ್ರೆಸ್ ಹೈಕಮಾಂಡ್ ಮೊತ್ತ ಮೊದಲ ಬಾರಿಗೆ ಅಲ್ಪ ಸಂಖ್ಯಾತ ಸಮುದಾಯದ ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆ ಬಗ್ಗೆ Mp MLA’s News exclusive Report

Scroll to Top