ಧರ್ಮಸ್ಥಳ-ಗೃಹ ರಕ್ಷಕ ದಳದಲ್ಲಿ ಗೃಹರಕ್ಷಕ ಅಧಿಕಾರಿಯಾಗಿ ಕಳೆದ 38ವರ್ಷಗಳಿಂದ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಸುರೇಶ್ ಶೇಟ್ ಅಸೈಗೋಳಿ ಅವರಿಗೆ ಧರ್ಮಸ್ಥಳ ಲಕ್ಷದೀಪದಲ್ಲಿ ಕಳೆದ 4 ದಶಕಗಳಿಂದ ಸಲ್ಲಿಸಿದ ವಿಶಿಷ್ಟ ಧಾರ್ಮಿಕ ಸೇವೆಗಾಗಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಬೆಳ್ಳಿಪದಕ ನೀಡಿ ಸನ್ಮಾನಿಸಿರುತ್ತಾರೆ. ಈ ಹಿಂದೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅವರು ಸುರೇಶ್ ಶೇಟ್ ಅವರಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಿರುತ್ತಾರೆ. ರೋಟರಿ ಕ್ಲಬ್ ಸೇರಿದಂತೆ ಹಲವಾರು ಸಂಘ – ಸಂಸ್ಥೆಗಳು ಸುರೇಶ್ ಶೇಟ್ ಅವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಸನ್ಮಾನಿಸಿವೆ. ಸುರೇಶ್ ಶೇಟ್ ಅವರು ಆಸೈಗೋಳಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಸದ್ರಿ ಕ್ಷೇತ್ರದಲ್ಲಿ ಜೀರ್ಣೋದ್ಧಾರ, ಅಭಿವೃದ್ಧಿ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸಿರುತ್ತಾರೆ. ನೇರ ನಡೆ ನುಡಿಯ ನಿಷ್ಕಳಂಕ ವ್ಯಕ್ತಿತ್ವದ ಸುರೇಶ್ ಶೇಟ್ ಅವರು ನಮ್ಮ ಸಮಾಜ ಕಂಡಿರುವ ತುಳುನಾಡಿನ ಹೆಮ್ಮೆಯ ಸುಪುತ್ರರಾಗಿದ್ದಾರೆ





















































































































































































