ಆಂಜೆಲೋರ್‌ ಚರ್ಚ್ ಪಾಲನಾ ಸಮಿತಿಯಿಂದ ‘ಪ್ರಕೃತಿಯಲ್ಲಿ ಒಂದು ದಿನ’ ಕಾರ್ಯಕ್ರಮ

113.7K Views 12 May 2025

ಮಂಗಳೂರಿನ ನಾಗುರಿಯಲ್ಲಿರುವ ಗಾರ್ಡಿಯನ್‌ ಏಂಜಲ್ಸ್‌ ಚರ್ಚ್, ಆಂಜೆಲೋರ್‌, ಇದರ ಚರ್ಚ್ ಪಾಲನಾ ಸಮಿತಿಯ ಸದಸ್ಯರು ‘ಪ್ರಕೃತಿಯಲ್ಲಿ ಒಂದು ದಿನ’ ವನ್ನು ಬ್ರಹ್ಮಾವರದ ರಮಣೀಯ ತಾಣದಲ್ಲಿ ಕಳೆದರು.
ಚರ್ಚ್ ಗಳಲ್ಲಿ ಪ್ರತೀ ಮೂರು ವರ್ಷಗಳಿಗೊಮ್ಮೆ ಚರ್ಚ್ ಪಾಲನಾ ಸಮಿತಿಗೆ ಚುನಾವಣೆ ನಡೆಯುತ್ತಿದ್ದು, ಈ ಸಮಿತಿಯ ಸೇವಾವಧಿ 2025 ಡಿಸೆಂಬರ್ 31 ರ ವರೆಗೆ ಇರುತ್ತದೆ. ‘ಪ್ರಕೃತಿಯಲ್ಲಿ ಒಂದು ದಿನ’ ಕಾರ್ಯಕ್ರಮದಲ್ಲಿ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ಫೆಡ್ರಿಕ್‌ ಮೊಂತೇರೊ, ವಾಸ್ತವ್ಯ ಧರ್ಮಗುರು ವಂ. ಫಾ. ಸ್ಟೇನಿ ಫೆರ್ನಾಂಡಿಸ್‌, ಚರ್ಚ್ ಉಪಾಧ್ಯಕ್ಷ ಪಾವುಲ್‌ ರೊಡ್ರಿಗಸ್‌, ಕಾರ್ಯದರ್ಶಿ ಲೊಲಿನಾ ಡಿ’ಸೋಜಾ, ಸರ್ವ ಆಯೋಗಗಳ ಸಂಚಾಲಕಿ ರೆನಿಟಾ ಮಿನೇಜಸ್‌, ಕಪಿತಾನಿಯೋ ಕಾನ್ವೆಂಟಿನ ಸುಪೀರಿಯರ್‌ ಭಗಿನಿ ಪ್ರೆಸಿಲ್ಲಾ ಮಿನೇಜಸ್‌, ಬೆಲ್ವದೆರೆ ಕಾನ್ವೆಂಟೊನ ಸುಪೀರಿಯರ್ ಭಗಿನಿ ಸ್ಟೆಫಾನಿಯೋ ಕುವೆಲ್ಲೊ, ಕಾಸಾಗಯಾ ಕಾನ್ವೆಂಟಿನ ಸುಪೀರಿಯರ್ ಭಗಿನಿ ಪ್ರಮಿಳಾ ಡಿ’ಸೋಜಾ ಮುಂತಾದವರು ಭಾಗವಹಿಸಿದ್ದರು.
ಈ ಪ್ರಕೃತಿ ಪ್ರವಾಸದ ಸಂದರ್ಭದಲ್ಲಿ ಪ್ರಕೃತಿಯ ಸೌಂದಯರ್ವನ್ನು ಸವಿಯುವುದರ ಜತೆಗೆ ಚರ್ಚ್ ನ ಸಮಗ್ರ ಏಳಿಗೆಗಾಗಿ ಮುಂದಿನ ದಿನಗಳಲ್ಲಿ ಕೈಗೊಳ್ಳ ಬಹುದಾದ ಕಾರ್ಯಕ್ರಮಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಇದೇ ವೇಳೆ ವಿವಿಧ ಆಟೋಟಗಳನ್ನು ಕೂಡಾ ಆಯೋಜಿಸಲಾಗಿತ್ತು.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top