ಮಂಗಳೂರು,ಮೇ.24;ಮಂಗಳೂರು ರೋಟರಿ ಸೆಂಟ್ರಲ್ ವತಿಯಿಂದ ಆಳ್ವಾಸ್ ಕಾಲೇಜು ಮೂಡುಬಿದಿರೆ ಇಲ್ಲಿನ ವಿದ್ಯಾರ್ಥಿರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಯುವ ಕ್ರೀಡಾ ಪ್ರತಿಭೆ ಅಥ್ಲೆಟ್ ದೀಕ್ಷಿತ ರಾಮಕೃಷ್ಣ ಗೌಡ ಇವರನ್ನು ರವಿವಾರ ನಗರದ ಸಿ ವ್ಯೂವ್ ಹೊಟೇಲ್ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ್ ರೈ ಕಟ್ಟ , ಕಾರ್ಯದರ್ಶಿ ವಿಕಾಸ್ ಕೋಟ್ಯಾನ್ , ರೋಟರಿ 3180 ಜಿಲ್ಲಾ ಮಾಜಿ ಗವರ್ನರ್ ಡಾ ದೇವದಾಸ್ ರೈ , ಝೋನಲ್ ಲೆಫ್ಟಿನೆಂಟ್ ರವಿ ಜಲನ್ ,ಕೋಶ ಧಿಕಾರಿ ರಾಜೇಶ್ ಸೀತಾರಾಂ, ನಿಕಟ ಪೂರ್ವ ಅಧ್ಯಕ್ಷ ಬ್ರಾಯನ್ ಪಿಂಟೋ, ನಿಯೋಜಿತ ಅಧ್ಯಕ್ಷ ರವೀಂದ್ರ ಬಿ. ಎನ್. , ರೋಟರಿ ಸದಸ್ಯ ರಾದ ಗೀತಾ ಬಿ ರೈ, ರೂಪಾ ಶೆಟ್ಟಿ, , ನೀಲo ಜಲನ್ , ಆರತಿ ಶೇಟ್ ರೂಪ ಶೆಟ್ಟಿ ,ಡಾ. ಜ್ಯೋತಿ ,ವಿದ್ಯಾ.ಆರ್ ವೀಣಾ , ಪ್ರಮೀಳಾ ಶೆಟ್ಟಿ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು





















































































































































































