ಪುತ್ತೂರು -ಪುತ್ತೂರಿನ ದರ್ಬೆ ಜಂಕ್ಷನ್ ನಲ್ಲಿರುವ ಶಶಿಶಂಕರ ಸದನದಲ್ಲಿ ಕಾಯಕಲ್ಪ ಅರೋಗ್ಯ ಧಾಮವನ್ನು ಪುತ್ತೂರು ನಗರ ಸಭಾ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಗೌರಿಯವರು ಉದ್ಘಾಟಿಸಿ,ಕಾಯಕಲ್ಪ ಚಿಕಿತ್ಸೆಗೆ ಜಗತ್ತಿನಲ್ಲಿಯೇ ಅತೀ ಮಾನ್ಯತೆಯಿದೆಂದರು. ಈ ಸಂದರ್ಭದಲ್ಲಿ ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ,ಅಧ್ಯಕ್ಷ ಪಿ. ಕೆ. ಮಹಮ್ಮದ್, ಉಪಾಧ್ಯಕ್ಷ ಸದಾಶಿವ ಸೇರಿದಂತೆ ಗಣ್ಯರನೇಕರು ಉಪಸ್ಥಿತರಿದ್ದರು. ಮಾಲಕ ಲಕ್ಷ್ಮಣ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ವಸಂತಿ ಕೆ. ಅವರು ಸಹಕರಿಸಿದರು






















































































































































































