ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚಿನ ಸೇಕ್ರೆಡ್ ಹಾರ್ಟ್ ವಾರ್ಡಿನ ಸದಸ್ಯರು ಪುಣ್ಯ ಕ್ಷೇತ್ರ ಭೇಟಿಯ ಅಂಗವಾಗಿ ಉಡುಪಿಯ ಪೆರಂಪಳ್ಳಿ, ಕಲ್ಮಾಡಿ, ಉದ್ಯಾವರ ಮತ್ತಿತರ ಚರ್ಚ್ ಗಳಿಗೆ ಭೇಟಿ ನೀಡಿದರು.
ವಾರ್ಡಿನ ಮುಖ್ಯಸ್ಥರಾದ ಮೊಲಿ ರೊಡ್ರಿಗಸ್, ಪ್ರತಿನಿಧಿಗಳಾದ ಬ್ಯಾಪ್ಟಿಸ್ಟ್ ಡಿ ಕುನ್ಹಾ, ಅನಿಲ್ ಮಸ್ಕರೇನ್ಹಸ್, ರಿಚಾರ್ಡ್ ಮಾರ್ಟಿಸ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಿತು. ವಾರ್ಡಿನ ಸದಸ್ಯರು ಭಾಗವಹಿಸಿದ್ದರು. ಪುಣ್ಯ ಕ್ಷೇತ್ರ ಭೇಟಿಯ ಜತೆಗೆ ಸಮುದ್ರ ತೀರಕ್ಕೂ ಭೇಟಿ ಕೊಟ್ಟು ಪ್ರಕೃತಿ ಸೌಂದರ್ಯವನ್ನು ಸವಿದರು. ಇದೇ ವೇಳೆ ತಮ್ಮ ವಾರ್ಡಿನ ಅಭಿವೃದ್ಧಿ ಬಗ್ಗೆ ಚರ್ಚಿಸಿ ಮುಂದಿನ ಯೋಜನೆಗಳ ರೂಪು ರೇಷೆಗಳ ಬಗೆಗೂ ಸಮಾಲೋಚನೆ ನಡೆಸಿದರು.





















































































































































































