ಮಂಗಳೂರು,ಎ.20: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ , ಶ್ರೀ ಶಾರದಾ ಪೂಜಾ ಸಮಿತಿ, ಮಂಗಳಾ ಫ್ರೆಂಡ್ಸ್ ಸರ್ಕಲ್ ಊರ್ವಸ್ಟೋರ್ ಹಾಗೂ ಎ ಜೆ ಆಸ್ಪತ್ರೆ ಯ ಜಂಟಿ ಆಶ್ರಯದಲ್ಲಿ ಊರ್ವ ಸ್ಟೋರ್ ನ ಮಾನಸ ಮಂಟಪದ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ರವಿವಾರ ನಡೆಯಿತು.
ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ನ ಅಧ್ಯಕ್ಷ ರೋ. ಬ್ರಾಯನ್ ಪಿಂಟೋ , ರೋಟರಿ ಜಿಲ್ಲೆ 3181 ಅಸಿಸ್ಟೆಂಟ್ ಗವರ್ನರ್ ಕೆ. ಯಂ .ಹೆಗ್ಡೆ , ಎ ಜೆ ದಂತ ಮಹಾ ವಿದ್ಯಾಲಯದ ಸಮುದಾಯ ಸೇವಾ ವಿಭಾಗದ ಮುಖ್ಯಸ್ಥೆ ಡಾ .ವಿಜಯ ಹೆಗ್ಡೆ ಹಾಗೂ ರೋಟರಿ ಪದಾಧಿಕಾರಿಗಳಾದ ರವಿ ಜಲನ್, ಸಾಯಿಬಾಬಾ ರಾವ್, ರಾಜೇಶ್ ಶೆಟ್ಟಿ,ಡೆರಿಲ್ ,ಆರ್ ಒ ಟಿ ಮಂಗಳ ಸ್ಫೋರ್ಟ್ಸ್ ಸರ್ಕಲ್ ಊರ್ವ ಸ್ಟೋರ್ ನ ಅಧ್ಯಕ್ಷ. ರಮೇಶ್ ಶೆಟ್ಟಿ ಮಾಜಿ ರೋಟರಿ ಗವರ್ನರ್ ದೇವ ದಾಸ್ ರೈ, ಜಗನ್ನಾಥ್ ಶೆಟ್ಟಿ, ಜಾಕ್ಸನ್ ಸಲ್ದಾನಾ,ಡೆರಿಲ್ ಸ್ಟೀವನ್ ಡಿಸೋಜ, ಆ್ಯನ್ಸ್ ಪೂರ್ಣಿಮಾ ರೈ, ಪ್ರಮೀಳಾ ಹೆಗ್ಡೆ, ಗೀತಾ ಬಿ ರೈ ಎ ಜೆ ಆಸ್ಪತ್ರೆ ಯ ವೈದ್ಯರು ಗಳು ಉಪಸ್ಥಿತರಿದ್ದರು. ರೋ ರಾಜ್ ಗೋಪಾಲ್ ರೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಕೆ ಯಂ ಹೆಗ್ಡೆ ರೋಟರಿ ಕ್ಲಬ್ ಹಮ್ಮಿ ಕೊಂಡಿರುವ ಸಾಮಾಜಿಕ ಕಾರ್ಯ ಕ್ರಮಗಳ ಮಾಹಿತಿ ನೀಡಿದರು. ಎ ಜೆ ದಂತ ಮಹಾ ವಿದ್ಯಾಲಯದ ಕ. ಕಮ್ಯುನಿಟಿ ದಂತವೈದ್ಯ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಹೆಗ್ಡೆ ಶಿಬಿರದ ಮಹತ್ವವನ್ನು ತಿಳಿಸಿದರು.
ರೋ ಭಾಸ್ಕರ್ ರೈ ಕಟ್ಟ ನಿರೂಪಿಸಿದರು.
ಶಿಬಿರದಲ್ಲಿ ಹೃದಯ ತಪಾಸಣೆ, ಕಣ್ಣು ತಪಾಸಣೆ , ಅಗತ್ಯ ವಿದ್ದವರಿ ಗೆ ಕನ್ನಡಕ ವಿತರಣೆ, ರಕ್ತ ದೊತ್ತಡ ಸೇರಿದಂತೆ ಎಲ್ಲಾ ರೀತಿಯ ವೈದ್ಯಕೀಯ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಯನ್ನು ನೀಡ ಲಾ ಯಿತು. ಶಿಬಿರದಲ್ಲಿ 124 ಫಲಾನುಭವಿಗಳಿಗೆ ಉಚಿತ ತಪಾಸಣೆ ನಡೆಸಲಾಯಿತು.








































































































































































































