ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ 3 ದಿನಗಳ ಧ್ಯಾನ ಕೂಟ ಸೋಮವಾರ ಆರಂಭವಾಗಿದೆ.
ಶಿವಮೊಗ್ಗ ಧರ್ಮ ಪ್ರಾಂತ್ಯದ ಕ್ಯಾರಿಸ್ಮಾಟಿಕ್ ಧ್ಯಾನ ಕೂಟ ತಂಡದ ಪ್ರಮುಖರಾದ ಹಾಗೂ ಉತ್ತಮ ಪ್ರವಚನಕಾರರೂ ಆಗಿರುವ ವಂದನೀಯ ಫಾದರ್ ಫ್ರಾಂಕ್ಲಿನ್ ಡಿ ಸೋಜಾ ಅವರು ಧ್ಯಾನ ಕೂಟವನ್ನು ಉದ್ಘಾಟಿಸಿ ಈ ಕಾರ್ಯಕ್ರಮದಿಂದ ಭಕ್ತರಿಗೆ ಆಧ್ಯಾತ್ಮಿಕವಾಗಿ ಪ್ರಯೋಜನ ದೊರೆಯಲಿದೆ ಎಂದರು. ಈ ಸಂದರ್ಭದಲ್ಲಿ ಚರ್ಚಿನ ಪ್ರಧಾನ ಧರ್ಮ ಗುರು ವಂದನೀಯ ಫಾ. ಆಲ್ಬನ್ ಡಿ ಸೋಜಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಸರ್ವ ಆಯೋಗಗಳ ಸಂಚಾಲಕ ಜೊಸ್ಲಿನ್ ಲೋಬೊ ಉಪಸ್ಥಿತರಿದ್ದರು.ಧ್ಯಾನ ಕೂಟವು ಮಾರ್ಚ್ 31 ರಿಂದ ಏಪ್ರಿಲ್ 2 ರ ತನಕ ಪ್ರತಿ ದಿನ ಸಂಜೆ 5.30 ರಿಂದ ರಾತ್ರಿ 8.15 ರ ವರೆಗೆ ನಡೆಯಲಿದೆ.


















































































































































































