ಬಂಟ್ಸ್ ಪ್ರೀಮಿಯರ್ ಲೀಗ್ 2025 ಬ್ರೋಷರ್ ಬಿಡುಗಡೆ

102.6K Views 1 Jan 2025

ಮಂಗಳೂರು: ಅಡ್ಯಾರ್ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಫೆ.7,8,9ರಂದು ನಡೆಯಲಿರುವ ಯುವ ಬಂಟರ ಸಂಘ ಮಂಗಳೂರು ಇದರ ವತಿಯಿಂದ ನಡೆಯಲಿರುವ ಬಂಟ್ಸ್ ಪ್ರೀಮಿಯರ್ ಲೀಗ್ 2025, ಸೀಸನ್ -2 ಟಿ-10 ಮಾದರಿಯ ಕ್ರಿಕೆಟ್ ಪಂದ್ಯಾವಳಿಯ ಬ್ರೋಷರನ್ನು ನಗರದ ವುಡ್ ಲ್ಯಾಂಡ್ ಸಭಾಂಗಣದಲ್ಲಿ ಇತ್ತೀಚೆಗೆ ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ರವಿರಾಜ ಶೆಟ್ಟಿಯವರು ಬಿಡುಗಡೆ ಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಿಪಿಎಲ್ ಟೂರ್ನಿಯ ಸಲಹೆಗಾರರಾದ ರಾಜ್ ಗೋಪಾಲ ರೈ ಮಾತನಾಡುತ್ತಾ,ಬಂಟ್ಸ್ ಪ್ರೀಮಿಯರ್‌ ಲೀಗ್ ಮೂಲಕ ಯುವ ಬಂಟರ ಜೊತೆ ಬಂಟ ಸಮಾಜದ ಸಂಘಟನೆ ಕ್ರೀಡೆ ಸಹಕಾರಿ ಯಾಗಲಿ.ಬಂಟ ಸಮಾಜ ತಮ್ಮ ಸಮಾಜದ ಅಭಿವೃದ್ಧಿಯ ಜೊತೆ ಇತರ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದ ಸಮಾಜ ನಾವು ಬೆಳೆಯುತ್ತಾ ಇತರರನ್ನು ಬೆಳೆಸೋಣ ಎಂದರು,ಕಾವೂರು ಬಂಟರ ಸಂಘದ ಅಧ್ಯಕ್ಷ ಹಾಗೂ ಕ್ರೀಡಾ ಪಟು ಆನಂದ ಶೆಟ್ಟಿಯವರು ಮಾತನಾಡುತ್ತಾ,ಕುಟುಂಬ,ಬಾಂಧವ್ಯ ಸಂಬಂಧ ಶಿಥಿಲವಾಗುತ್ತಿರುವ ಈ ಕಾಲ ಘಟ್ಟದಲ್ಲಿ ಕ್ರೀಡೆ ನಮ್ಮೆಲ್ಲರನ್ನು ಒಂದು ಗೂಡಿಸುವ ನಿಟ್ಟಿನಲ್ಲಿ ಮತ್ತು ದೈಹಿಕ ಮಾನಸಿಕ ಆರೋಗ್ಯ ದೃಷ್ಟಿಯಿಂದಲೂ ಕ್ರೀಡೆ ಒಂದು ಸಾಧನ ಎಂದರು. ಹಿರಿಯ ಪತ್ರಕರ್ತರಾದ ಭಾಸ್ಕರ ರೈ ಕಟ್ಟ,ಪುಷ್ಪ ರಾಜ್ ಬಿ.ಎನ್ ಶುಭ ಹಾರೈಸಿದರು, ರಾಜೇಶ್ ದಡ್ಡಂಗಡಿ ಉಪಸ್ಥಿತರಿದ್ದರು. ಬಿಪಿಎಲ್ ಟೂರ್ನಿಯ ಸಂಘಟಕರಾದ ಸಚಿನ್ ರೈ ಸ್ವಾಗತಿಸಿ,ಪ್ರಸಾದ್ ಶೆಟ್ಟಿ ಬಿಪಿಎಲ್ ಟೂರ್ನಿಯ ಮಾಹಿತಿ ನೀಡಿ ವಂದಿಸಿದರು.

Read More News

ಆರೋಗ್ಯ ಸಚಿವರ ತವರೂರು ಮಂಗಳೂರಿನ ವೆನ್ ಲಾಕ್ ಬಳಿಯ ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕಳಪೆ ಗುಣಮಟ್ಟದ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್. ರೇಬಿಸ್ ತಡೆಗಟ್ಟುವ ಈ ಇಂಜೆಕ್ಷನ್ ಚುಚ್ಚಿದರೆ ಅಂಥ ಮಕ್ಕಳು 24 ಗಂಟೆ ಐಸಿಯುನಲ್ಲಿ ಇರಬೇಕು. ತುಂಬಾ ರಿಸ್ಕ್. ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಆರೋಗ್ಯ ಸಚಿವರೇ ಉತ್ತರ ನೀಡಬೇಕು. ಖಾದರ್ ಸಾಹೇಬ್ರೆ, ಬಡ ಮಕ್ಕಳು ಏನು ತಪ್ಪು ಮಾಡಿದ್ದಾರೆ. ಅವರಿಗೇಕೆ ಇಂಥ ಕಳಪೆ ಇಂಜೆಕ್ಷನ್?

Scroll to Top