ಡಿ.18ರಂದು ಸಂಪಿಗೆ ರೆಸಾರ್ಟ್‌ ಉದ್ಘಾಟಿಸಲಿರುವ ಡಾ.ಮೋಹನ್‌ ಆಳ್ವ

118.6K Views 15 Dec 2024

ಕಿನ್ನಿಗೋಳಿ : ಪುತ್ತಿಗೆ ಗ್ರಾಮ ದಲ್ಲಿರುವ ಸಂಪಿಗೆ ರೆಸಾರ್ಟ್ ನ್ನು ಆಳ್ವಾಸ್ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ಮೋಹನ್ ಆಳ್ವ ಅವರು ಡಿಸೆಂಬರ್ 18 ರಂದು ಉದ್ಘಾಟಿಸಲಿದ್ದಾರೆ.

ದಕ್ಷಿಣ ಕನ್ನಡ ಎಂಪಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮೂಡಬಿದ್ರಿ ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಹರ್ಷವರ್ಧನ್ ಪಡಿವಾಳ್, ಕುಲದೀಪ್ ಎಂ, ತಿಮ್ಮಯ್ಯ ಶೆಟ್ಟಿ, ಶ್ರೀಪತಿ ಭಟ್, ಎಂ.ಶ್ರೀಧರ ಆಚಾರ್ಯ, ನಾರಾಯಣ ಪಿಎಂ, ಜಯಶ್ರೀ ಅಮರನಾಥ ಶೆಟ್ಟಿ, ರಾಮಚಂದ್ರ ಆಳ್ವ ಪುರುಷೋತ್ತಮ ಶೆಟ್ಟಿ ಹೊಸಮನೆಗುತ್ತು, ರವೀಂದ್ರ ಎಸ್. ಶೆಟ್ಟಿ ಸಾಯಿ ಪ್ಯಾಲೇಸ್, ಗಜಾನನ ಎನ್. ಪೂಂಜಾ, ಪುರುಷೋತ್ತಮ ಶೆಟ್ಟಿ ಉಡುಪಿ ಮೊದಲಾದ ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ರೆಸಾರ್ಟ್ ಒಂದು ಮೇರುಕೃತಿಯಾಗಿದೆ ಮತ್ತು ಇದನ್ನು ಪ್ರವೀಣ್ ಶೆಟ್ಟಿ (ಅತಿಥಿ & ಕ್ವಾಲಿಟಿ ಗ್ರೂಪ್ ಆಫ್ ರೆಸ್ಟೊರೆಂಟ್ಸ್, ಪುಣೆ) ಪರಿಕಲ್ಪನೆ ಮಾಡಿದ್ದಾರೆ. ಅವರು ಪುಣೆ ಮತ್ತು ಯುಎಇಯಲ್ಲಿ ರೆಸ್ಟೋರೆಂಟ್‌ಗಳ ಸರಣಿಯನ್ನು ಹೊಂದಿದ್ದಾರೆ.
ಅವರು ಹೊರನಾಡ ಕನ್ನಡ ರತ್ನ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ ಸುಧಾಕರ ಶೆಟ್ಟಿಯವರ ಸಹೋದರರಾಗಿದ್ದಾರೆ, ಡಾ. ಸುಧಾಕರ್ ಶೆಟ್ಟಿಯವರು ಸತತ 4 ಬಾರಿ ಕೇಂದ್ರ ಸರಕಾರದ ರಕ್ಷಾ ಮಂತ್ರಿ ಅವಾರ್ಡ್ ಪುರಸ್ಕೃತ ಪುಣೆ ವೈದ್ಯಕೀಯ ತಂಡದ ಸದಸ್ಯರಾಗಿದ್ದು. ಪುಣೆಯ ಬೇಬಿ ಫ್ರೆಂಡ್ ಕ್ಲಿನಿಕ್ ನ ಮಾಲಕರಾಗಿ ಕಳೆದ
36 ವರ್ಷಗಳಿಂದ ಪುಣೆಯಲ್ಲಿ ಮಕ್ಕಳ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಇತ್ತೀಚೆಗೆ ತುಳುನಾಡ ಧನ್ವoತರಿ ಪ್ರತಿಷ್ಟಿತ ಬಿರುದು ಕೂಡಾ ದೊರಕಿರುತ್ತದೆ

ಸಂಪಿಗೆ ರೆಸಾರ್ಟ್ SAPPHIRE- ಬ್ಯಾಂಕ್ವೆಟ್ ಹಾಲ್, ಪೋಲಾರಿಸ್-ದ ಲಾಂಜ್, ಕ್ವಾಲಿಟಿ-ರೆಸ್ಟೋರೆಂಟ್, ಹಾರಿಜಾನ್-ರೂಫ್ ಟಾಪ್ ರೆಸ್ಟೋರೆಂಟ್, SPA ಮತ್ತು ಜಿಮ್, ಮಕ್ಕಳ ಆಟದ ಪ್ರದೇಶ, ಪೂಲ್‌ಸೈಡ್ ವಿಲ್ಲಾಗಳು, ಕಾರ್ಯನಿರ್ವಾಹಕ/ಡಿಲಕ್ಸ್ ಕೊಠಡಿಗಳು ಮತ್ತು ಸೂಟ್‌ಗಳನ್ನು ಹೊಂದಿದೆ.
19/12/2024 ರಿಂದ ಸಾರ್ವಜನಿಕರಿಗೆ ರೆಸಾರ್ಟ್ ತೆರೆದಿರುತ್ತದೆ. ಇದನ್ನು ಹರಿಪ್ರಸಾದ್ ಶೆಟ್ಟಿ (ಅತಿಥಿ ಮತ್ತು ಕ್ವಾಲಿಟಿ ರೆಸ್ಟೋರೆಂಟ್‌ಗಳು, ಪುಣೆ) ತಿಳಿಸಿದ್ದಾರೆ.

Read More News

Scroll to Top