ಡಾ. ಅಶೋಕ್ ಶೆಟ್ಟಿ ಬಿ. ಎನ್. ಸಹಿತ 15 ಮಂದಿ ಸಾಧಕರಿಗೆ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪೆನಿ ಮತ್ತು ಆಕ್ಸಿಸ್ ಬ್ಯಾಂಕ್ ಸಹಯೋಗದಲ್ಲಿ ಸೇವಾರತ್ನ ಪ್ರಶಸ್ತಿ ಪ್ರದಾನ.

98K Views 7 Dec 2024

ಮಂಗಳೂರು: ಮಾಕ್ಸ್ ಲೈಫ್ ಇನ್ಶೂರೆನ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ಸಹಯೋಗದಲ್ಲಿ ಪತ್ರಕರ್ತ ಡಾ. ಅಶೋಕ್ ಶೆಟ್ಟಿ ಬಿ. ಎನ್ ಸಹಿತ 15 ಮಂದಿ ಸಾಧಕರಿಗೆ ಅತ್ತಾವರದ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿ ಕಚೇರಿಯಲ್ಲಿ ಡಿಸೆಂಬರ್ 6 ರ ಸಂಜೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಸನ್ಮಾನ ಕಾರ್ಯಕ್ರಮದಲ್ಲಿ ZVP ಸುಧಾಕರ್ ಶೆಟ್ಟಿ, ARM ಸತೀಶ್ ಮೆನನ್, ಕಚೇರಿ ಮುಖ್ಯಸ್ಥ ಅರುಣ್ ವಿ.ಎಸ್., ಬ್ರಾಂಚ್ ಮೆನೇಜರ್ ಗಣೇಶ್ ಆಚಾರ್ಯ, ಟೈನಿಂಗ್ ಮೆನೇಜರ್ ಸಚಿನ್ ಕೆ.ಎಸ್., ಸೀನಿಯರ್ ಪಾರ್ಟನರ್ (ಸೇಲ್ಸ್) ಶಶಿಧರ್, ಸೀನಿಯರ್ ಮೆನೇಜರ್ ಪ್ರಜ್ವಲ್ ಕೋಟ್ಯಾನ್ ಹಾಗೂ ಅಸೋಸಿಯೇಟ್ ಡೆವೆಲಪ್‌ಮೆಂಟ್ ಮೆನೇಜರ್ ಪ್ರಕಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Read More News

Scroll to Top