ಡಾ ಕುಲಾಲ್ ಗೆ ಮಂಗಳೂರು ಐಎಂಎ ಯ ರಾಜ್ಯೋತ್ಸವ ಜೀವಮಾನದ ಸಾಧನಾ ಪುರಸ್ಕಾರ

98.2K Views 26 Nov 2024

ವೈದ್ಯಕೀಯ ಸೇವೆಯ ಜೊತೆಗೆ ನಾಡು ನುಡಿ ನೆಲ ಜಲ ಪರಿಸರ ಪ್ರಕೃತಿಯ ಉಳಿವಿಗಾಗಿ ಸಾಹಿತ್ಯ ಸಂಘಟನೆ ಹಾಗೂ ಜನಜಾಗೃತಿಯ ಮೂಲಕ ಮಾಡಿದ ಜೀವಮಾನದ ಸಾಧನೆಗೆ ಮಂಗಳೂರು ವೈದ್ಯಕೀಯಸಂಘ( ಐಎಂಎ) ದ ವತಿಯಿಂದ ಚೊಚ್ಚಲ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ದಕ ಮತ್ತು ಉಡುಪಿ ಜಿಲ್ಲೆಯ ಗಣ್ಯರಾದ ಡಾ. ಶಾಂತರಾಮ್ ಶೆಟ್ಟಿ, ನಾಡೋಜ ಜಿ ಶಂಕರ್, ಬಹುಭಾಷಾ ಚಿತ್ರನಟ ಸುಮನ್ ತಲ್ವಾರ್, ನಿಟ್ಟೆ ವಿವಿಯ ಡಾ ಸತೀಶ್ ಭಂಡಾರಿ, ಆಕಾಶವಾಣಿಯ ವಸಂತ್ ಪೆರ್ಲ, ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಹಾಗೂ ಹಾಲಿ ಅಧ್ಯಕ್ಷರುಗಳಾದ ಪ್ರದೀಪ ಕುಮಾರ್ ಕಲ್ಕೂರ ಮತ್ತು ಡಾ ಶ್ರೀನಾಥ್ ಉಜಿರೆ ಸಹಿತ ಐಎಂಎ ಮಂಗಳೂರು ಶಾಖೆಯ ಹಿರಿ ಕಿರಿಯ ಮತ್ತು ಮಹಿಳಾ ನಾಯಕ ನಾಯಕಿಯರ ಉಪಸ್ಥಿತಿಯಲ್ಲಿ ಜೀವಮಾನದ ಸಾಧನೆಗಾಗಿ ನೀಡಿ ಗೌರವಿಸಲಾಯಿತು.

Read More News

ಆರೋಗ್ಯ ಸಚಿವರ ತವರೂರು ಮಂಗಳೂರಿನ ವೆನ್ ಲಾಕ್ ಬಳಿಯ ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕಳಪೆ ಗುಣಮಟ್ಟದ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್. ರೇಬಿಸ್ ತಡೆಗಟ್ಟುವ ಈ ಇಂಜೆಕ್ಷನ್ ಚುಚ್ಚಿದರೆ ಅಂಥ ಮಕ್ಕಳು 24 ಗಂಟೆ ಐಸಿಯುನಲ್ಲಿ ಇರಬೇಕು. ತುಂಬಾ ರಿಸ್ಕ್. ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಆರೋಗ್ಯ ಸಚಿವರೇ ಉತ್ತರ ನೀಡಬೇಕು. ಖಾದರ್ ಸಾಹೇಬ್ರೆ, ಬಡ ಮಕ್ಕಳು ಏನು ತಪ್ಪು ಮಾಡಿದ್ದಾರೆ. ಅವರಿಗೇಕೆ ಇಂಥ ಕಳಪೆ ಇಂಜೆಕ್ಷನ್?

Scroll to Top