ಮಂಗಳೂರು: ಇಂದು ನೆಹರು ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಪತ್ರಕರ್ತರಿಗೆ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪುಷ್ಪರಾಜ್ ಬಿ.ಎನ್. (ವಾರ್ತಾ ಭಾರತಿ), ರಾಜೇಶ್ ರಾವ್ (ನಮ್ಮ ಕುಡ್ಲ), ಸುಖಪಾಲ್ ಪೊಳಲಿ (ಪಬ್ಲಿಕ್ ಟಿ.ವಿ.), ಮತ್ತು ಐ.ಬಿ. ಸಂದೀಪ್ ಕುಮಾರ್ (ಹೊಸದಿಗಂತ) ಇವರು ಇಂದು ಜಿಲ್ಲಾ ಪ್ರಶಸ್ತಿ ಪಡೆದ ಪತ್ರಕರ್ತರಾಗಿದ್ದಾರೆ. ಪ್ರಶಸ್ತಿ ಪುರಸ್ಕೃತರಿಗೆ MPMLA’s ನ್ಯೂಸ್ ಶುಭ ಹಾರೈಸುತ್ತದೆ.









































































































































































































