ಮಂಗಳೂರು: ಅಕ್ಟೋಬರ್ 31ರಂದು ಜಿಲ್ಲಾ ಪ್ರಶಸ್ತಿಯ ಪಟ್ಟಿ ಬಿಡುಗಡೆಯಲ್ಲಿ ಒಬ್ಬ ಪತ್ರಕರ್ತರಿಗೆ ಮಾತ್ರ ಪ್ರಶಸ್ತಿ ಘೋಷಿಸಲಾಗಿತ್ತು.
ಆದರೆ, ಪತ್ರಕರ್ತ ಸಂಘದಿಂದ ನಾಲ್ವರು ಪತ್ರಕರ್ತರನ್ನು ಶಿಫಾರಸ್ಸು ಮಾಡಲಾಗಿತ್ತು. ಜಿಲ್ಲಾಡಳಿತದ ಈ ಕ್ರಮ ವ್ಯಾಪಕ ಅಸಮಾಧಾನಗಳಿಗೆ ಕಾರಣವಾದಾಗ ಈ ಬಗ್ಗೆ MPMLA’s ನ್ಯೂಸ್ ಬೆಳಕು ಚೆಲ್ಲಿ ಜಿಲ್ಲಾಧಿಕಾರಿಯವರು ತಕ್ಷಣ ಪತ್ರಕರ್ತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಕೇಳಿಕೊಂಡಿತು. ಅದೇ ರೀತಿ ಪತ್ರಕರ್ತ ಸಂಘದಿಂದಲೂ ಜಿಲ್ಲಾಡಳಿತದ ಗಮನಕ್ಕೆ ತರಲಾಗಿತ್ತು. ಕೂಡಲೇ ಎಚ್ಚೆತ್ತುಗೊಂಡ ಜಿಲ್ಲಾಡಳಿತ ಕೊನೆಗೂ ನಾಲ್ವರು ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸಿತು.


























































































































































































