ಬ್ರೇಕಿಂಗ್ ನ್ಯೂಸ್, ಮಂಗಳೂರು: ಈ ಸಲದ ಜಿಲ್ಲಾ ಪ್ರಶಸ್ತಿಯಲ್ಲಿ ಪತ್ರಕರ್ತರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಹಲವು ಮಂದಿ ಪತ್ರಕರ್ತರಿಂದ ವ್ಯಾಪಕ ಖಂಡನೆಗಳು ವ್ಯಾಪ್ತವಾಗುತ್ತಿವೆ. ನಾಲ್ಕು ಮಂದಿ ಪತ್ರಕರ್ತರ ಹೆಸರನ್ನು ಸಂಘ ಶಿಫಾರಸ್ಸು ಮಾಡಿದ್ದರೂ ಒಬ್ಬರನ್ನು ಮಾತ್ರ ಪ್ರಶಸ್ತಿಗೆ ಆಯ್ಕೆ ಮಾಡಿ ಮೂವರನ್ನು ನಿರ್ಲಕ್ಷಿಸಿದ ಜಿಲ್ಲಾಡಳಿತವು ದೃಶ್ಯ ಮಾಧ್ಯಮದವರು ನಾಳೆ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕುತ್ತೇವೆಂದಾಗ ಎಚ್ಛೆತ್ತುಕೊಂಡು ಇನ್ನೊಬ್ಬ ಟಿ. ವಿ. ವರದಿಗಾರನ್ನು ಆಯ್ಕೆ ಪಟ್ಟಿಯಲ್ಲಿ ಸೇರಿಸಿದೆ. ಹೀಗಿದ್ದರೂ ಇನ್ನಿಬ್ಬರನ್ನು ನಿರ್ಲಕ್ಷಿಸಲಾಗಿದೆ. ಜಿಲ್ಲಾಡಳಿತದ ಕತ್ತರಿ ಪ್ರಯೋಗ ಖಂಡನೀಯ. ಇದನ್ನು Mpmla’s news ತೀವ್ರವಾಗಿ ಖಂಡಿಸುತ್ತದೆ. ಇಷ್ಟೆಲ್ಲ ನಡೆಯುವಾಗ ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದರು? ಕತ್ತರಿ ಪ್ರಯೋಗದ ಸೂತ್ರಧಾರಿ ದಿನೇಶ್ ಗುಂಡೂರಾವ್ ಅವರೇ ಇರಬಹುದೇ? ಡಿ. ಸಿ. ಯವರೇ ಪತ್ರಕರ್ತರಿಗೆ ಅನ್ಯಾಯವನ್ನು ತಕ್ಷಣ ಸರಿಪಡಿಸಿ.









































































































































































































