ಬಂಟ್ವಾಳ. ಸೆ., 13. ಇಂದುರಾಜಕೀಯ ರಂಗದ ಅಜಾತಶತ್ರು, ಜನಸೇವೆಗೆ ಅಧಿಕಾರ ಮುಖ್ಯವಲ್ಲವೆಂದು ಸಮಾಜಕ್ಕೆ ತಾವೇ ಸ್ವತ,:ಕಾರ್ಯಪ್ರವೃತ್ತರಾಗಿ ತೋರಿಸಿಕೊಟ್ಟ, ದಣಿವರಿಯದ ನಿರಾಡಂಬರ, ನಿಸ್ವಾರ್ಥ, ನಿಷ್ಕಲ್ಮಶ ವ್ಯಕ್ತಿತ್ವದ ಪೂರ್ಣಕಾಲಿಕ ರಾಜಕಾರಣಿ, ಜಾತ್ಯತೀತ ಸೇವಾ ಮನೋಭಾವದ ರಾಜಕೀಯ ಮುತ್ಸದ್ದಿ, ಬಡವರ ಬಂಧು,ಕರ್ನಾಟಕ ಸರಕಾರದ ಮಾಜಿ ಸಚಿವ, ಸೌಹಾರ್ದ ಚಕ್ರವರ್ತಿ ಬೆಳ್ಳಿಪ್ಪಾಡಿ ರಮಾನಾಥ ರೈ ಅವರ 75 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.



ರೈಯವರ ಹುಟ್ಟುಹಬ್ಬದ ಪ್ರಯುಕ್ತ ಬೆಳ್ಳಿಪ್ಪಾಡಿ ರಮಾನಾಥ ರೈ ಹುಟ್ಟುಹಬ್ಬ ಆಚರಣೆ ಸಮಿತಿ, ದಕ್ಷಿಣ ಕನ್ನಡದ ವತಿಯಿಂದ ಸೆ. 13ರ ಭಾನುವಾರ ಅಂದರೆ ಇಂದು ಸಂಜೆ 3 ಗಂಟೆಗೆ ಬಿ. ಸಿ. ರೋಡಿನ ಅಂಬೇಡ್ಕರ್ ಭವನದಲ್ಲಿ ಬೆಳ್ಳಿಪ್ಪಾಡಿ ರಮಾನಾಥ ರೈ ಅವರ 75ನೇ ಹುಟ್ಟುಹಬ್ಬದ ಸಂಭ್ರಮ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮವಿದೆ.
ಬೆಳ್ಳಿಪ್ಪಾಡಿ ರಮಾನಾಥ ರೈ ಅವರ ಹುಟ್ಟುಹಬ್ಬಕ್ಕೆ MP MLA’S NEWS ಮತ್ತು mpmlasnewstv 24×7 ನ್ಯೂಸ್ ಪೋರ್ಟಲ್ ನ ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಶುಭಾಶಯ ಸಲ್ಲಿಸಿದ್ದಾರೆ.
ಚಿತ್ರಗಳು :ತಿಲಕ್, ಮಂಚಿ













































































































































































