ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ. ಅಧ್ಯಕ್ಷರಾಗಿ ಶಶಿಧರ್ ಪೊಯತ್ತಬೈಲ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆ

111.6K Views 24 Dec 2025

ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಿಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಶಶಿಧರ ಪೊಯ್ಯತ್ತಬೈಲ್, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ , ಉಪಾಧ್ಯಕ್ಷರಾಗಿ ಜನಾರ್ದನ ಮತ್ತು ಮಹಮ್ಮದ್ ಆಸಿಫ್, ಕಾರ್ಯದರ್ಶಿಯಾಗಿ ಸತೀಶ್ ಎ. ಮತ್ತು ಅಬ್ದುಲ್ ಬಶೀರ್, ಕೋಶಾಧಿಕಾರಿಯಾಗಿ ವಜ್ರೇಶ್ವರಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮೋಹನ್ ಕುತ್ತಾರ್ , ವಸಂತ ಎನ್.ಕೊಣಾಜೆ, ಶಿವಶಂಕರ್ ಎಂ, ರಜನಿಕಾಂತ್ ಸಿ, ಗಣೇಶ್ ತಲಪಾಡಿ ಆಯ್ಕೆಯಾಗಿದ್ದಾರೆ.


ಎಲ್ಲಾ ಸ್ಥಾನವೂ ಅವಿರೋಧ ಆಯ್ಕೆಯಾಗಿರುತ್ತದೆ.
ಚುನಾವಣಾಧಿಕಾರಿಯಾಗಿ ಸತೀಶ್ ಇರಾ, ಉಪಚುನಾವಣಾಧಿಕಾರಿಯಾಗಿ ಅಶೋಕ್ ಶೆಟ್ಟಿ ಬಿ.ಎನ್ ಅವರು ಪಾಲ್ಗೊಂಡಿದ್ದರು.

Scroll to Top