ಬೋಂದೆಲ್‌ ಸಂತ ಲಾರೆನ್ಸ್ ಚರ್ಚ್ ನಲ್ಲಿ ಸಂತರ ಹಬ್ಬ: ನವೇನಾ ಕಾರ್ಯಕ್ರಮ ಆರಂಭ

95.7K Views 9 Aug 2025

ಮಂಗಳೂರು: ಬೋಂದೆಲ್‌ ಸಂತ ಲಾರೆನ್ಸ್ ಚರ್ಚ್ ನಲ್ಲಿ ಸಂತರ ಹಬ್ಬವನ್ನು ಆಗಸ್ಟ್ 10 ರಂದು ವಿಜೃಂಭಣೆಯಿಂದ ಆಚರಿಸಲಾಗುವುದು. ಆ ಪ್ರಯುಕ್ತ 9 ದಿನಗಳ ನವೇನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ಬಲಿಪೂಜೆ, ಪರಮ ಪ್ರಸಾದದ ಅರಾಧನೆ, ವ್ಯಾಧಿಷ್ಟರಿಗಾಗಿ ಪ್ರತ್ಯೇಕ ಪ್ರಾರ್ಥನೆ ನಡೆಸಲಾಗುತ್ತದೆ. ಆಗಸ್ಟ್ 8 ರಂದು ಬಲಿಪೂಜೆಯ ಸಂದರ್ಭದಲ್ಲಿ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಗಾಯನ ತಂಡವು ಭಕ್ತಿ ಗೀತೆಗಳ ಗಾಯನವನ್ನು ನೆರವೇರಿಸಿ ಕೊಟ್ಟಿತು. ಗಾಯನ ಮಂಡಳಿಯ ಅಧ್ಯಕ್ಷೆ ಲಿಝಿ ಫೆರ್ನಾಂಡಿಸ್, ಸದಸ್ಯರಾದ ಚಾರ್ಲ್ಸ್ ಡಿ’ಮೆಲ್ಲೊ, ಮಾರಿಯೊ ರೇಗೊ, ವಿನೊಲಾ ಪಿಂಟೊ, ಲ್ಯಾನಿಸ್‌ ಡಿ’ ಸೋಜಾ, ಆಲೀಶಾ ಮೊಂತೇರೊ, ರೆನಿಶಾ ಡಿ’ಸೋಜಾ, ಜೆನಿಟಾ ರೇಗೊ, ಈತನ್‌ ಮೊಂತೇರೊ, ಜನಿಶಾ ಫೆರ್ನಾಂಡಿಸ್, ಜೆಸಿಂತಾ ಕ್ರಾಸ್ತಾ, ಪಾಲ್ದನೆ ಚರ್ಚ್ ಉಪಾಧ್ಯಕ್ಷ ಎಲಿಯಾಸ್‌ ಫೆರ್ನಾಂಡಿಸ್‌, ಮುಕ್ಕ ಹೋಲಿ ಸ್ಪಿರಿಟ್‌ ಚರ್ಚ್ ಧರ್ಮಗುರು ವಂದನೀಯ ಫಾ. ಸ್ಟ್ಯಾನಿ ಪಿಂಟೊ, ಬೋಂದೆಲ್‌ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ಆ್ಯಂಡ್ರೂ ಲಿಯೋ ಡಿ’ಸೋಜಾ, ಬೋಂದೆಲ್‌ ಚರ್ಚ್ ಗಾಯನ ಮಂಡಳಿಯ ಸಂಚಾಲಕಿ ಜಾಸ್ಮಿನ್‌ ಡಿ’ಸೋಜಾ ಉಪಸ್ಥಿತರಿದ್ದರು.

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top