ದರ್ಶನ್ ಸೋಶಿಯಲ್ ಕಲ್ಚರ್ ಅಕಾಡೆಮಿ ಬೆಂಗಳೂರು ಫಿಟ್ ಇಂಡಿಯಾ ಎನ್ ವೈ ಕೆ ಎಸ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರು ಪ್ರತಿ ವರ್ಷ ಆಚರಿಸುವ ಕುವೆಂಪು ರವರ ಸರ್ವ ಜನಾಂಗದ ಶಾಂತಿಯ ತೋಟ ಸಮಾರಂಭದ 99ನೇ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಎನ್ ನಾಗೇಂದ್ರ ರವರ ಗಾಯನ ಕ್ಷೇತ್ರ ಹಾಗೂ ಬಹುಮುಖ ಪ್ರತಿಭೆ ಸಾಧನೆ ಸೇವೆ ಇವುಗಳನ್ನು ಪರಿಗಣಿಸಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವಮಾನವ ಕುವೆಂಪು ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ 2025 ನೀಡಿ ಗೌರವಿಸಿರುತ್ತಾರೆ.


ಈ ಸಂದರ್ಭದಲ್ಲಿ ಹೆಸರಾಂತ ವೈದ್ಯರಾದ ಡಾ. ಅಂಜನಪ್ಪ, ಖ್ಯಾತ ಗಾಯಕರಾದ ಶಶಿಧರ್ ಕೋಟೆ,ಚಲನಚಿತ್ರ ನಟರಾದ ಗಣೇಶ್ ರಾವ್ ಕೆ ಸರ್ಕಾರ್, ನವೀನ್ ಶಂಕರ್,ರಾಜೀವ್ ಹನು,ದೀಪಿಕಾ ಆರಾಧ್ಯ,ಚಲನಚಿತ್ರ ನಿರ್ಮಾಪಕ ಶ್ರೀ ಮಹೇಂದ್ರ ಮುನೋತ್ ಹಾಗೂ DCA ಸಂಸ್ಥೆಯ ಅಧ್ಯಕ್ಷರಾದ ದರ್ಶನ್ ಮತ್ತು ರೇಣುಕಾ ಇವರು ಹಾಜರಿರುತ್ತಾರೆ.























































































































































































