ಕೆ.ಟಿ. ಕಲ್ಲಡ್ಕದ ಸ್ಪೆಶಾಲಿ “ಟಿ”70 ವರ್ಷಗಳ ಸವಿರುಚಿ

95.1K Views 26 Apr 2025

(ಜಯಾನಂದ ಪೆರಾಜೆ)
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಕಲ್ಲಡ್ಕ ಪೇಟೆ ಬಂದಾಗ ನೆನಪಾಗುವುದು ಕಲ್ಲಡ್ಕ ಸ್ಪೆಶಲ್ “ಟಿ” ಅದುವೇ ಕೆ.ಟಿ.
ಒಮ್ಮೆ ಸವಿದವರಿಗೆ ಮತ್ತೆ ಮತ್ತೆ ಸವಿಯ ಬೇಕೆಂಬ ಅಭಿರುಚಿ.ಯಾಕೆಂದರೆ ಕಳೆದ‌ ಎಪ್ಪತ್ತು ವರ್ಷಗಳಲ್ಲಿ ಲಕ್ಷ್ಮೀ ನಿವಾಸ ಸ್ಪೆಶಲ್ ಕೆಟಿ ಸವಿದವರು ಲಕ್ಷಾಂತರ ಮಂದಿ.ವಿದೇಶಿಗರು ಹೊಸ ರುಚಿಯನ್ನು ಸವಿದು ಕೊಂಡಾಡಿದ್ದಾರೆ.


ಸಮಪ್ರಮಾಣದ ಸಕ್ಕರೆ,ಚಾ ಹುಡಿಯ ಡಿಕಾಕ್ಷನ್ ,ದಪ್ಪ ಹಾಲಿನಲ್ಲಿ ಸೇರಿದಾಗ ಟೀ ರೆಡಿ. ಹಾಲಿನ ಮೇಲೆ ತೇಲಾಡುವ ಟಿ ಡಿಕಾಕ್ಷನ್ ನೋಡುವುದೇ ಒಂದು ಆನಂದ. ಸವಿದಾಗ ಪರಮಾನಂದ. ಕುಡಿದವರು ಯಾರೇ ಆಗಲಿ ಈ ಪಾಕಕ್ಕೆ ಜಯ್ ಎನ್ನದವರಿಲ್ಲ.
ಕಲ್ಲಡ್ಕ ಶ್ರೀರಾಮ ಮಂದಿರದ ಪ್ರವೇಶ ದ್ವಾರದಲ್ಲಿಯೇ ಲಕ್ಷ್ಮೀ ಗಣೇಶ ಹೊಟೇಲ್ ಇದೀಗ ಭಾರೀ ಫೇಮಸ್. ಕಲ್ಲಡ್ಕ ಬಂದವರು ವಾಹನ ನಿಲ್ಲಿಸಿ ಕೆ.ಟಿ.ಹೊಟೇಲ್ಗೆ ಭೇಟಿ ನೀಡುವುದು ಸಂಪ್ರದಾಯವಾಗಿ ಬಿಟ್ಟಿದೆ. ರಾಷ್ಟ್ರೀಯ ಹೆದ್ದಾರಿ ಮೇಲೆ ರಾಜ್ಯದಲ್ಲಿಯೇ ವಿಶಿಷ್ಟವಾದ ಓವರ್ ಬ್ರಿಡ್ಜ್ ನಿರ್ಮಾಣವಾಗುತ್ತಿದ್ದು ಇನ್ನೂ ಕೆಲವೇ ದಿನಗಳಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ಕೆಳಗಡೆ ದಶಕಗಳ ಇತಿಹಾಸವಿರುವ ಕಪ್ಪುಬಿಳಿ ಚಾ “ಕೇಟಿ” ನೀವೊಮ್ಮೆ ಸವಿಯಲೇ ಬೇಕು.ಬೇಕಾದರೆ ರಿಂ ಜಿಂ ಕಾಫಿಯೂ ಇದೆ.

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top