ಬೆಂಗಳೂರು -ಅನ್ವೇಷಣೆ ಸಾಂಸ್ಕತಿಕ ಅಕಾಡೆಮಿ (ರಿ) ಬೆಂಗಳೂರು ಇವರು ಮಾರ್ಚ್ 2ರ ಬೆಳಿಗ್ಗೆ 10ರಿಂದ ಸಂಜೆ 7.30ರ ವರೆಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಹಕಾರಿ ರತ್ನ, ಹಿರಿಯ ಸಮಾಜ ಸೇವಕ, ರಾಜಕೀಯ ಮುಂದಾಳು, ಪುತ್ತೂರಿನ ಡಾ.ಅಗರಿ ನವೀನ್ ಭಂಡಾರಿ ಬೆಂಗಳೂರು ಇವರಿಗೆ ಸಮಾಜಶ್ರೀ ರಾಜ್ಯಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿ ಸಮಾಜಕ್ಕೆ ಇನ್ನೂ ಹೆಚ್ಚಿನ ಕೊಡುಗೆಯನ್ನು ಡಾ. ಅಗರಿ ನವೀನ್ ಭಂಡಾರಿ ಅವರು ನೀಡಲಿ ಎಂದು ಈ ಸಂದರ್ಭ ಅನ್ವೇಷಣೆ ಸಾಂಸ್ಕತಿಕ ಅಕಾಡೆಮಿ (ರಿ) ಬೆಂಗಳೂರು ಇವರು ಶುಭ ಹಾರೈಸಿದ್ದಾರೆ.
ಸಮಾಜಶ್ರೀ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ನವೀನ್ ಭಂಡಾರಿ ಅವರಿಗೆ Mp mla ನ್ಯೂಸ್ ಅಭಿನಂದನೆ ಸಲ್ಲಿಸುತ್ತದೆ.

























































































































































































