ರಾಜೇಶ್ ಅಮೀನ್ ಮುಲ್ಕಿ ಅವರಿಗೆ ಅಂಬೇಡ್ಕರ್ ಫೆಲೋಶಿಪ್ ನ್ಯಾಷನಲ್ ಅವಾರ್ಡ್

96K Views 20 Jan 2025

ನವದೆಹಲಿ: ಡಿಸೆಂಬರ್ 8 ರಂದು ದೆಹಲಿಯಲ್ಲಿ ನಡೆದ 38ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಆಯುಷ್ ಇಲಾಖೆ ಸರಕಾರಿ ನೌಕರ, ಹಾಯ್ ತುಳುನಾಡು ಪತ್ರಿಕೆ ಸಂಪಾದಕ, ತುಳುನಾಡು ಪ್ರತಿಷ್ಠಾನ (ರಿ) ಮೂಲ್ಕಿ ಇದರ ಸ್ಥಾಪಕಾಧ್ಯಕ್ಷರಾದ, ಲಯನ್ ಸ್ಮಾರ್ಟ್ ಸಿಟಿ ಮಂಗಳೂರು ಇದರ ಸದಸ್ಯರಾದ ಲಯನ್ ರಾಜೇಶ್ ಅಮೀನ್ ಮುಲ್ಕಿ ಅವರಿಗೆ ಬಡವರ ಹಸಿವನ್ನು ನೀಗಿಸುವಲ್ಲಿ ಮಾಡಿರುವ ಕಾರ್ಯ, ಆಪತ್ತಿನಲ್ಲಿರುವವರಿಗೆ ಸಹಾಯ ಮಾಡಿರುವುದಕ್ಕೆ ಇವರು ಸಲ್ಲಿಸಿದ ಅನನ್ಯ ಸೇವೆಯನ್ನು ಪರಿಗಣಿಸಿ ಡಾ. ಬಿ.ಆರ್. ಅಂಬೇಡ್ಕರ್ ಫೆಲೋಶಿಪ್ ನ್ಯಾಷನಲ್ ಅವಾರ್ಡ್ -2024ನ್ನು ನೀಡಿ ಗೌರವಿಸಲಾಗಿದೆ.

Read More News

Scroll to Top