ಅಬುಧಾಬಿ: ಲೋಕೋಪಕಾರ ಮತ್ತು ನಾವೀನ್ಯತೆಗಳ ಪರಂಪರೆಯಿಂದ ಜೀವನ ಮತ್ತು ಉದ್ಯಮಗಳನ್ನು ಪರಿವರ್ತಿಸಿದ ಒಬ್ಬ ಉದಾತ್ತ ವ್ಯಕ್ತಿ, ದೂರದೃಷ್ಟಿಯ ನಾಯಕನ ಅಗಲಿಕೆಗೆ ನಾವು ಶೋಕಿಸುತ್ತೇವೆ. ನಮ್ಮ ಹೃತ್ಪೂರ್ವಕ ಸಂತಾಪಗಳು.ಓಂ ಶಾಂತಿ ಎoದು ಭಾರತದ ಪ್ರಖ್ಯಾತ ಉದ್ಯಮಿ, ಕೊಡುಗೈ ದಾನಿ ರತನ್ ಟಾಟಾ ಅವರ ನಿಧನಕ್ಕೆ ವಿಶ್ವದ ಅನಿವಾಸಿ ಭಾರತೀಯರ ಅತೀ ದೊಡ್ಡ ಸಂಘಟನೆಯಾದ ಇಂಡಿಯನ್ ಸೋಷಿಯಲ್ ಅಂಡ್ ಕಲ್ಚರಲ್ ಸೆಂಟರ್ ಅಬುಧಾಬಿಯ ಅಧ್ಯಕ್ಷರಾದ ಮಿತ್ರಂಪಾಡಿ ಜಯರಾಮ ರೈಯವರು ಸಂತಾಪ ಸೂಚಿಸಿದ್ದಾರೆ.





















































































































































































