ಕೇರಳ: ವಯನಾಡು ದುರಂತದಲ್ಲಿ 400 ಮಂದಿ ನಾಪತ್ತೆಯಾಗಿದ್ದು,10 ಮಂದಿ ಕನ್ನಡಿಗರು ಸಹಿತ 290 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 82 ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಇಲ್ಲಿಗೆ ಸಹೋದರಿ ಪ್ರಿಯಾಂಕ ಗಾಂಧಿ ಜೊತೆಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು -“ನನ್ನ ತಂದೆಯವರು ತೀರಿಕೊಂಡಾಗ ಆದಷ್ಟೇ ನೋವು, ದುಃಖ ನನಗಾಗುತ್ತಿದೆ “ವೆಂದು ಕಣ್ಣೇರು ಹಾಕಿದ್ದಾರೆ. ಈ ಸಂದರ್ಭದಲ್ಲಿ ಎಐಸಿಸಿಯ ಪ್ರಮುಖ ವೇಣುಗೋಪಾಲ್ ಜೊತೆಗಿದ್ದರು.





















































































































































































