ಕೊಂಕಣಿ ಮಾನ್ಯತಾ ದಿನಾಚರಣೆ

105.7K Views 28 Aug 2025

ಶ್ರಮಿಕ ಸಂತ ಜೋಸೆಫ್ ರ‍್ಚ್, ವಾಮಂಜೂರ್‌ನಲ್ಲಿ ಭಾನುವಾರ ಕೊಂಕಣಿ ಮಾನ್ಯತಾ ದಿನವನ್ನು ರ‍್ಷೋಲ್ಲಾಸದಿಂದ ಆಚರಿಸಲಾಯಿತು.
ಈ ಕರ‍್ಯಕ್ರಮವನ್ನು ರ‍್ಚ್ನ್ ಐ.ಸಿ.ವೈ.ಎಮ್ ಸದಸ್ಯರು ಮಾಂಡ್ ಸೊಭಾಣ್ ಸಂಘಟನೆಯ ಸಹಯೋಗದಲ್ಲಿ ಆಯೋಜಿಸಿದ್ದರು. ಕರ‍್ಯಕ್ರಮವು ಐ.ಸಿ.ವೈ.ಎಮ್ (ಭಾರತೀಯ್ ಕಥೊಲಿಕ ಯುವ ಸಂಚಾಲನ) ಸದಸ್ಯರು ಹಡಿದ ಪ್ರರ‍್ಥನಾ ಗೀತೆಯಿಂದ ಪ್ರಾರಂಭವಾಯಿತು. ನಂತರ ಮುಖ್ಯ ಅತಿಥಿ ಅರುಣ್ ರಾಜ್ ರೊಡ್ರಿಗಸ್ ಅವರು ಸಾಂಪ್ರದಾಯಿಕ ಘುಮಟನ್ನು ಬಾರಿಸುವ ಮೂಲಕ ಕರ‍್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ರ‍್ವ ಆಯೋಗಗಳ ಸಂಯೋಜಕ ಅನಿಲ್ ಪಿಂಟೊ ಮಾತನಾಡಿ, ನಮ್ಮ ಮುಂದಿನ ಪೀಳಿಗೆಯನ್ನು ಕೊಂಕಣಿ ಭಾಷೆ ಬಳಸಲು ಉತ್ತೇಜಿಸುವಂತೆ ಕರೆ ನೀಡಿದರು. ಜೊತೆಗೆ ಕರ‍್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರ‍್ಚ್ ರ‍್ಮಗುರು ವಂ. ಜೇಮ್ಸ್ ಡಿಸೋಜಾ ಅವರು, “ಕೊಂಕಣಿ ನಮ್ಮ ಹೆಮ್ಮೆ, ನಮ್ಮ ಅಸ್ತಿತ್ವದ ಮೂಲ. ಕೊಂಕಣಿ ಬೆಳೆಯಲಿ, ಬದುಕಲಿ ಮತ್ತು ಉಳಿಯಲಿ ಎನ್ನುವುದು ಪ್ರತಿಯೊಬ್ಬರ ಜವಾಬ್ದಾರಿ” ಎಂದು ಕರೆ ನೀಡಿದರು.
ಮುಖ್ಯ ಅತಿಥಿ ಅರುಣ್ ರಾಜ್ ರೊಡ್ರಿಗಸ್ ಅವರು ಕೊಂಕಣಿ ಭಾಷೆಗೆ ದೊರೆತ ಮಾನ್ಯತೆ, ಅದರ ಸಂಸ್ಕöÈತಿ ಮತ್ತು ಪರಂಪರೆಯ ಮಹತ್ವವನ್ನು ವಿವರಿಸಿದರು. “ನಮ್ಮ ಮಾತೃಭಾಷೆ ಮತ್ತು ಸಂಸ್ಕöÈತಿಯನ್ನು ಕಾಪಾಡಿ, ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮದೆ” ಎಂದು ಹೇಳಿದರು.
ಮಾನ್ಯತಾ ದಿನಾಚರಣೆಯ ಅಂಗವಾಗಿ ವೈವಿಧ್ಯಮಯ ಸಾಂಸ್ಕöÈತಿಕ ಕರ‍್ಯಕ್ರಮಗಳು ನಡೆಯಿತು. ಕೊಂಕಣಿ ಹಾಡುಗಳು, ಸಾಂಪ್ರದಾಯಿಕ ಘುಮಟ ಗಾಯನ, ಎರಡು ಸಾಂಪ್ರದಾಯಿಕ ಕೊಂಕಣಿ ನೃತ್ಯಗಳು ಹಾಗೂ ಕೊಂಕಣಿ ಒಗಟುಗಳು ಪ್ರೇಕ್ಷಕರ ಮನಗೆದ್ದವು.
ಕರ‍್ಯಕ್ರಮದಲ್ಲಿ ರ‍್ಚಿನ ಸಹಾಯಕ ರ‍್ಮಗುರು ವಂ. ಜೀವನ್ ಶೈಲೇಶ್ ಲೋಬೊ, ಐ.ಸಿ.ವೈ.ಎಮ್ ಸಚೇತಕಿ ಸಿ. ಐಡಾ ಡಿಸೋಜಾ, ರ‍್ಚ್ ಪಾಲನಾ ಸಮಿತಿ ಕರ‍್ಯರ‍್ಶಿ ಲೊವೆಲ್ ಮೊಂತೆರೊ, ರ‍್ವ ಆಯೋಗಗಳ ಸಂಯೋಜಕ ಅನಿಲ್ ಪಿಂಟೊ, ಐ.ಸಿ.ವೈ.ಎಮ್ ಘಟಕಾಧ್ಯಕ್ಷ ಮೆಲ್ರೋಯ್ ಡಿಸೋಜಾ ಉಪಸ್ಥಿತರಿದ್ದರು.
ಐ.ಸಿ.ವೈ.ಎಮ್ ಉಪಾಧ್ಯಕ್ಷೆ ಮಹಿಮ ಡಿಸೋಜಾ ಸ್ವಾಗತಿಸಿ, ಕರ‍್ಯರ‍್ಶಿ ಜಾಸ್ಮಿನ್ ಡಿಸೋಜಾ ವಂದಿಸಿದರು.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top