79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಕಲ್ಲಡ್ಕ ಗಾಂಧಿ ಮೈದಾನದಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಪದ್ಮನಾಭ ರೈ ಅವರು ಧ್ವಜಾರೋಹಣ ಮಾಡುವುದರ ಮೂಲಕ ನೆರವೇರಿಸಲಾಯಿತು.


ಅಧ್ಯಕ್ಷತೆಯನ್ನು ಸೂರಜ್ ಬೀಡಿ ಮಾಲಕರಾದ ಹುಸೈನ್ ಕಲ್ಲಡ್ಕ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಕಲ್ಲಡ್ಕ ಹಿರಿಯ ಪ್ರಾಥಮಿಕ ಶಾಲಾಭಿವೃದ್ಫಿ ಸಮಿತಿ ಅಧ್ಯಕ್ಷರಾದ ಮಧುಸೂದನ್ ಐತಲ್, ಮಾಜಿ ಪಂಚಾಯತ್ ಸದಸ್ಯರು ಹಿರಿಯ ಮುಖಂಡರಾದ ಅಬೂಬಕ್ಕರ್ ಮುರಾಬೈಲ್, ಬಂಟ್ವಾಳ nsui ಉಪಾಧ್ಯಕ್ಷರಾದ ಶ್ರೀವತ್ಸಹ ಶೆಣೈ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕಿರಣ್ ಕಲ್ಲಡ್ಕ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಮಹಮ್ಮದ್ ಶಾಫಿ ಹಾಗೂ ನರಸಿಂಹ ಮಡಿವಾಳ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು ಮತ್ತು ಅನೇಕ ಗಣ್ಯರು ಭಾಗವಹಿಸಿದರು.









































































































































































































