ರಾಜಕೀಯ ವಾರ್ತೆಗಳು

ರಾಜಕೀಯ ವಾರ್ತೆಗಳು

ಇನ್ನು ಏಳು ವರ್ಷದೊಳಗೆ ನಳಿನ್‌ಕುಮಾರ್ ಕಟೀಲ್ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಇದು MPMLA’s ನ್ಯೂಸ್ ಭವಿಷ್ಯ.

ವಿಶೇಷ ವರದಿ-ಡಾ.ಅಶೋಕ್ ಶೆಟ್ಟಿ ಬಿ. ಎನ್.ಮಂಗಳೂರು: ಮಾಜಿ ಸಂಸದ , ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ಇನ್ನು ಏಳು ವರ್ಷದೊಳಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹಲವು ಸಮೀಕ್ಷೆಗಳು ಮತ್ತು ರಾಜಕೀಯ ತಜ್ಞರ ಅಭಿಪ್ರಾಯಗಳನ್ನು ಆಧರಿಸಿ ಸ್ಪಷ್ಟವಾದ ಭವಿಷ್ಯವನ್ನು MPMLA’s ನ್ಯೂಸ್ ಈ ವರದಿಯಲ್ಲಿ ಉಲ್ಲೇಖಿಸಿದೆ.2004ರಲ್ಲಿ ಕೂಡಾ ಭವಿಷ್ಯ ಹೇಳಿತ್ತು. ಕಳೆದ 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತನ್ನದೇ ಛಾಪು ಮೂಡಿಸಿ ಲಕ್ಷಾಂತರ ಓದುಗರನ್ನು ಒಳಗೊಂಡಿರುವ MPMLA’s ನ್ಯೂಸ್ 2004ರಲ್ಲಿ ನಳಿನ್‌ಕುಮಾರ್ ಕಟೀಲ್ ಬಗ್ಗೆ ಅವರು ಎಂಪಿಯಾಗಲಿದ್ದಾರೆ ಎಂದು ಭವಿಷ್ಯ ಹೇಳಿತ್ತು. ಆಗ ನಳಿನ್‌ಕುಮಾರ್ ಕಟೀಲ್ ಅವರು ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿದ್ದರು. 2009ರಲ್ಲಿ ನಳಿನ್‌ಕುಮಾರ್ ಕಟೀಲ್ ಅವರು ಪ್ರಥಮ ಬಾರಿಗೆ ಎಂಪಿಯಾಗುವುದರೊಂದಿಗೆ MPMLA’s ನ್ಯೂಸ್ ಭವಿಷ್ಯ ನಿಜವಾಗಿತ್ತು.

ರಾಜಕೀಯ ವಾರ್ತೆಗಳು

ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ನಿಧನ.

ದೊಡ್ಡಬಳ್ಳಾಪುರ: ತಾಲೂಕಿನ ಹಿರಿಯ ರಾಜಕಾರಣಿ ದಿವಂಗತ ಆರ್.ಎಲ್.ಜಾಲಪ್ಪ ಅವರ ಹಿರಿಯ ಪುತ್ರ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ(78) ಡಿಸೆಂಬರ್15ರ ಭಾನುವಾರ ಬೆಳಿಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮಧ್ಯಾಹ್ನ 11 ಗಂಟೆಗೆ ಪ್ರಾರ್ಥಿವ ಶರೀರ ತೂಬಗೆರೆಗೆ ಬರಲಿದೆ. ಮಾಜಿ ಶಾಸಕ ನರಸಿಂಹ ಸ್ವಾಮಿ ಅವರ ನಿಧನಕ್ಕೆ ವಾಣಿಜ್ಯ ತೆರಿಗೆ ಇಲಾಖೆ ಬೆಂಗಳೂರು ಇದರ ನಿವೃತ್ತ ಸಹಾಯಕ ಆಯುಕ್ತ ಎಸ್. ಕೆ. ಸತ್ಯನಾರಾಯಣ ಬೆಂಗಳೂರು ಅವರು ಸಂತಾಪ ಸೂಚಿಸಿದ್ದಾರೆ

ರಾಜಕೀಯ ವಾರ್ತೆಗಳು

ಕರ್ನಾಟಕದ ಉಪ ಚುನಾವಣೆಯಲ್ಲಿ ನೆಲ ಕಚ್ಚಿದ ಎನ್ ಡಿಎ ಮೈತ್ರಿ ಕೂಟ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ವಿಫಲ.

ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ. ಬಿ. ಎನ್.ಬೆಂಗಳೂರು: ಕರ್ನಾಟಕ ಉಪ ಚುನಾವಣೆಯು ಚನ್ನಪಟ್ಟಣ, ಶಿಗ್ಗಾoವಿ, ಸಂಡೂರ್ ಕ್ಷೇತ್ರಗಳಲ್ಲಿ ನಡೆದಿದ್ದು, ಈ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಬಿಜೆಪಿ -ಜೆಡಿಎಸ್ ಅಂದರೆ ಎನ್ ಡಿಎ ಮೈತ್ರಿ ಕೂಟ ನೆಲ ಕಚ್ಚಿದೆ.ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ದುರ್ಬಲ ನಾಯಕತ್ವ, ಪಕ್ಷದೊಳಗೆ ವಿಜಯೇಂದ್ರ ಸೃಷ್ಟಿಸಿದ ಗುಂಪುಗಾರಿಕೆಯೇ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಈ ಸಲದ ಲೋಕಸಭಾ ಚುನಾವಣೆಯಲ್ಲಿ ಕೂಡಾ ಬಿ ಎಸ್ ವೈ ಮತ್ತು ವಿಜಯೇಂದ್ರ ಇಬ್ಬರು ಸೇರಿಕೊಂಡು ಪಕ್ಷದ ಟಿಕೆಟ್ ಹಂಚುವಿಕೆ ಸಂದರ್ಭದಲ್ಲಿ ನಳಿನ್ ಕುಮಾರ್ ಕಟೀಲು, ಡಿವಿಎಸ್, ಪ್ರತಾಪ್ ಸಿಂಹ ಅವರಂಥ ಸಮರ್ಥರಿಗೆ ಟಿಕೆಟ್ ನೀಡದೆ ಜನ ಟೀಕೆಗೆ ಒಳಗಾಗಿದ್ದರು. ನಳಿನ್ ಕುಮಾರ್ ಕಟೀಲು ಅವರು ರಾಜ್ಯಾಧ್ಯಕ್ಷರಾಗಿದ್ದಾಗ ರಾಜ್ಯದಾದ್ಯoತ ಹಲವು ಬಾರಿ ಪ್ರವಾಸ ಮಾಡಿ ಪಕ್ಷವನ್ನು ಬೇರುಮಟ್ಟದಲ್ಲಿ ಸಂಘಟಿಸಿದ್ದರು. ಇವರ ನಾಯಕತ್ವದಲ್ಲಿ ಬಿಜೆಪಿ ಬಲಿಷ್ಠವಾಗಿತ್ತು. ಆದರೆ, ವಿಜಯೇಂದ್ರ ಪೇಪರ್ ಟೈಗರ್ ಆಗಿದ್ದು, ಈ ಉಪ ಚುನಾವಣೆಯಲ್ಲಿ ಫ್ಲಾಪ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ವಿಜಯೇಂದ್ರರ ಸರ್ವಾಧಿಕಾರಿ ಧೋರಣೆ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ದುರ್ಬಲಗೊಳಿಸುತ್ತಿದೆ ಇದಲ್ಲದೆ,ಎಚ್ ಡಿಕೆ ಜೊತೆಗಿನ ಮೈತ್ರಿ ಬಿಜೆಪಿಗೆ ಮುಳುವಾಗಿ ಪರಿಣಮಿಸಿದೆ ವಿಜಯೇಂದ್ರರನ್ನು ಕೂಡಲೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಆ ಜಾಗದಲ್ಲಿ ಸಮರ್ಥರಿಗೆ ಅವಕಾಶ ನೀಡಬೇಕೆಂಬ ಕೂಗು ಪಕ್ಷದೊಳಗೆ ಕೇಳಿ ಬರುತ್ತಿದೆ.

ಕರ್ನಾಟಕ ವಾರ್ತೆಗಳು, ರಾಜಕೀಯ ವಾರ್ತೆಗಳು

ಕರ್ನಾಟಕ ರಾಜ್ಯದಲ್ಲಿ ಏಪ್ರಿಲ್ 26 ರಂದು ಲೋಕಸಭೆಗೆ ನಡೆದ ಮೊದಲ ಹಂತದ ಚುನಾವಣೆಯ ಮತದಾನದ ಶೇಕಡವಾರು ವಿವರ.

ವಿಶೇಷ ವರದಿ:ಡಾ. ಅಶೋಕ್ ಶೆಟ್ಟಿ ಬಿ. ಎನ್. ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಲೋಕಸಭೆಗೆ ನಡೆದ ಮೊದಲ ಹಂತದ ಚುನಾವಣೆಯ ಮತದಾನದ ಶೇಕಡವಾರು ವಿವರವನ್ನು ಗಮನಿಸಿದರೆ ದ.ಕ. ಬೆಸ್ಟ್, ನಂತರದ ಸ್ಥಾನ ಉಡುಪಿಗೆ ಮತ್ತು ಬೆಂಗಳೂರು ನೀರಸ ಮತದಾನ ಪ್ರಕ್ರಿಯೆ ತೋರಿಸಿದೆ.ಲೋಕಸಭೆ ಕ್ಷೇತ್ರ –ದಕ್ಷಿಣ ಕನ್ನಡ – 72%(2024) 80%(2019)ಉಡುಪಿ – 73%(2024) 78%(2019)ಮೈಸೂರು – 67%(2024) 71%(2019)ಚಾಮರಾಜ ನಗರ- 70%(2024) 77%(2019)ಚಿತ್ರದುರ್ಗ – 68%(2024) 72%(2019)ಹಾಸನ – 72%(2024) 79%(2019)ತುಮಕೂರು – 72%(2024) 79%(2019)ಚಿಕ್ಕಬಳ್ಳಾಪುರ – 72%(2024) 77%(2019)ಮಂಡ್ಯ – 75%(2024) 82%(2019)ಕೋಲಾರ – 73%(2024) 79%(2019)ಬೆಂಗಳೂರು ಗ್ರಾಮಾಂತರ – 62%(2024) 68%(2019)ಬೆಂಗಳೂರು ದಕ್ಷಿಣ- 49%(2024) 55%(2019)ಬೆಂಗಳೂರು ಸೆಂಟ್ರಲ್ – 49%(2024) 56%(2019)ಬೆಂಗಳೂರು ಉತ್ತರ- 51%(2024) 55%(2019)

ರಾಜಕೀಯ ವಾರ್ತೆಗಳು

ಯಡಿಯೂರಪ್ಪ ಬಿಜೆಪಿ ಪಕ್ಷದ ಕುತ್ತಿಗೆ ಹಿಸುಕುತ್ತಿದ್ದಾರೆಂದ ಕೆ.ಎಸ್. ಈಶ್ವರಪ್ಪ.ತಂದೆ-ಮಗನ ರಾಜಕೀಯದ ವಿರುದ್ಧ ದಂಗೆ ಎದ್ದು ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ

ಶಿವಮೊಗ್ಗ: ಯಡಿಯೂರಪ್ಪನವರು ಬಿಜೆಪಿ ಪಕ್ಷದ ಕುತ್ತಿಗೆ ಹಿಸುಕುವ ಕೆಲಸ ಮಾಡುತ್ತಿದ್ದಾರೆ. ಪಕ್ಷದ ನಿಷ್ಠಾವಂತ ಕಾರ‍್ಯಕರ್ತರಿಗೆ,ಪಕ್ಷಕ್ಕಾಗಿ ದುಡಿದವರಿಗೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಕೆ.ಎಸ್. ಈಶ್ವರಪ್ಪ ಗುಡುಗಿದ್ದಾರೆ.ಇವರದ್ದೇನಿದ್ದರೂ, ತಂದೆ-ಮಗನ ರಾಜಕೀಯ. ತಾನು ಅರ್ಹನಾಗಿದ್ದರೂ, ಹಿಂದುಳಿದ ವರ್ಗಕ್ಕೆ ಸೇರಿದ್ದರೂ, ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದರೂ ತನಗೆ ರಾಜ್ಯಾಧ್ಯಕ್ಷ ಸ್ಥಾನಮಾನ ನೀಡಲಿಲ್ಲ ಯಾಕೆ?ಎಲ್ಲವನ್ನು ಲಿಂಗಾಯಿತರಿಗೆ ಕೊಡಬೇಕೆನ್ನುವ ಇವರು ಹಿರಿಯ ಲಿಂಗಾಯಿತ ನಾಯಕರಾದ ಬಸವ ಗೌಡ ಯತ್ನಾಳ್ ಪಾಟೀಲ್ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡಬಹುದಿತ್ತಲ್ಲ? ಬದಲಾಗಿ ತನ್ನ ಮಗನಿಗೇಕೆ ನೀಡಿದರು ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.ಒಕ್ಕಲಿಗರ ನಾಯಕ ಸಿ.ಟಿ. ರವಿಯವರನ್ನು ರಾಜ್ಯಾಧ್ಯಕ್ಷ ಮಾಡಲಿಲ್ಲ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸೀಟು ಕೂಡಾ ಕೊಡಲಿಲ್ಲ.ಕೊಡುಗು-ಮೈಸೂರಿನಲ್ಲಿ ಪ್ರತಾಪ ಸಿಂಹ, ದಕ್ಷಿಣ ಕನ್ನಡದಲ್ಲಿ ನಳಿನ್‌ಕುಮಾರ್ ಕಟಿಲ್, ಬೆಂಗಳೂರು ಉತ್ತರದಲ್ಲಿ ಡಿ.ವಿ. ಸದಾನಂದ ಗೌಡರಿಗೆ ಎಂಪಿ ಟಿಕೇಟ್ ನೀಡದೆ ಸೇಡು ತೀರಿಸಿಕೊಂಡರು.ಹೆಚ್ಚೇಕೆ? ಹಾವೇರಿಯಲ್ಲಿ ತನ್ನ ಮಗ ಕಾಂತೇಶ್‌ಗೆ ಟಿಕೇಟ್ ನೀಡಲಿಲ್ಲ. ಒಟ್ಟಿನಲ್ಲಿ ಬಿಜೆಪಿಯಲ್ಲಿ ಯಡಿಯೂರಪ್ಪ ಕುಟುಂಬ ಮಾತ್ರ ಇರಬೇಕು. ಉಳಿದವರೆಲ್ಲ ನಗಣ್ಯ ಎಂದು ಈಶ್ವರಪ್ಪ ಕಿಡಿ ಕಾರಿದ್ದಾರೆ.ಇದನ್ನೆಲ್ಲ ಪ್ರತಿಭಟಿಸಿ ನಾನು ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರ ಬಿ. ವೈ. ರಾಘವೇಂದ್ರರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಇದು ಕೇಂದ್ರದ ನಾಯಕರಿಗೆ ಗೊತ್ತಾಗಬೇಕು. ಇಡೀ ರಾಜ್ಯದ ಜನ ನನ್ನನ್ನು ಬೆಂಬಲಿಸಿದ್ದಾರೆ.ಮೋದಿ ನನ್ನ ದೇವರು. ನಾನು ಗೆದ್ದು ಎಂಪಿಯಾಗಿ ಮೋದಿಯನ್ನು ಭೇಟಿಯಾಗುತ್ತೇನೆ. ಯಡಿಯೂರಪ್ಪನವರು ಬಿಜೆಪಿ ಪಕ್ಷವನ್ನು ತನ್ನ ಸ್ವಂತದ ಆಸ್ತಿ ಎಂದು ಭಾವಿಸಿದ್ದಾರೆ. ಅದು ಅವರ ಸ್ವಾರ್ಥ ಎಂದು ಈಶ್ವರಪ್ಪ ರೇಗಿದ್ದಾರೆ.ಶಿವಮೊಗ್ಗಕ್ಕೆ ಮೋದಿ ಬರಲಿರುವ ಹಿನ್ನಲೆಯಲ್ಲಿ ಈಶ್ವರಪ್ಪವರ ಬಂಡಾಯವನ್ನು ಶಮನಗೊಳಿಸಲು ರಾಜ್ಯ ಬಿಜೆಪಿ ನಾಯಕರಾದ ಆರ್. ಅಶೋಕ್ ಸೇರಿದಂತೆ ನಾಯಕರನೇಕರು ಅವರ ನಿವಾಸಕ್ಕೆ ತೆರಳಿ ಮನವೊಲಿಸಿದರು. ಫಲಪ್ರದವಾಗಲಿಲ್ಲ.ಕೇವಲ ತನಗೆ ಬೇಕಾದವರಿಗೆ ಎಂಪಿ ಟಿಕೇಟ್ ಕೊಟ್ಟು ತನಗಾದವರಿಗೆ ಕೊಕ್ ಕೊಟ್ಟ ಯಡಿಯೂರಪ್ಪನವರ ಧೋರಣೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈಶ್ವರಪ್ಪ ದಂಗೆ ಎದ್ದಿರುವುದು ಇದನ್ನು ಇನ್ನಷ್ಟು ರೋಚಕ ಹಂತಕ್ಕೆ ತಲುಪುವಂತೆ ಮಾಡಿದೆ.

ರಾಜಕೀಯ ವಾರ್ತೆಗಳು

ಕ್ಯಾಪ್ಟನ್ ಬೃಜೇಶ್ ಚೌಟ ಅವರು ಮೂರು ಲಕ್ಷಕ್ಕೂ ಅಧಿಕ ಅಂತರದ ಮತಗಳಿಂದ ಜಯಗಳಿಸಲಿದ್ದಾರೆ: ನಳಿನ್ ಕುಮಾರ್ ಕಟೀಲ್

ಮಂಗಳೂರು : ಮಂಗಳೂರಿನ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡುತ್ತಾ ಬಿಜೆಪಿ ಸಂಘಟನೆ ಹೇಳಿದಾಗ ಚುನಾವಣೆಯಲ್ಲಿ ನಿಂತುಕೊಂಡೆ .ಮೂರು ಅವಧಿ ಯಶಸ್ವಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ.‌ ಇದೀಗ ಸಂಘಟನೆ ಯಾವುದೇ ಕೆಲಸ ಮಾಡು ಅಂತ ಹೇಳಿದರೆ ಅಷ್ಟೇ ಸಂತೋಷದಿಂದ ಸ್ವೀಕರಿಸುತ್ತೇನೆ. ಈಗ ಸೈನಿಕರಾಗಿ ಸೇವೆ ಸಲ್ಲಿಸಿದ್ದ ಕ್ಯಾಪ್ಟನ್ ಬೃಜೇಶ್ ಚೌಟ ಅವರು ಓರ್ವ ಸಮರ್ಥ ಅಭ್ಯರ್ಥಿ ಆಗಿದ್ದಾರೆ. ಇವರು ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ದಾಖಲಿಸುವುದು ಶತಃಸಿದ್ದ. ನಾವೆಲ್ಲರೂ ಟೀಂ ವರ್ಕ್ ಮಾಡುವ ಮುಖೇನ ಅದನ್ನು ಸಾಧಿಸಬೇಕು. ಜಿಲ್ಲೆಯಲ್ಲಿದ್ದ ಎಲ್ಲಾ ರೀತಿಯ ಗೊಂದಲಗಳು ಅಂತ್ಯಗೊಂಡು ಪ್ರಫುಲ್ಲವಾದ ಬಿಜೆಪಿ ಪರವಾದ ವಾತಾವರಣ ನಿರ್ಮಾಣಗೊಂಡಿದೆ. ಇದೀಗ ನಮ್ಮ ಕೆಲಸ ಚುನಾವಣೆಯನ್ನು ಗೆಲ್ಲುವುದಷ್ಟೇ ಅಲ್ಲಾ, ಗೆಲುವಿನ ಅಂತರ ಹಿಂದಿನ ಎಲ್ಲಾ ರೆಕಾರ್ಡ್ ಅನ್ನು ಬ್ರೇಕ್ ಮಾಡುವಂತೆ ಆಗಬೇಕು ಎಂದು ಹೇಳಿದರು.ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಕುಂಪಲ ಅವರು ಮಾತನಾಡುತ್ತಾ ಇಲ್ಲಿಯವರೆಗೆ ಎಲ್ಲಾ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆದಿರುತ್ತದೆ. ಜವಾಬ್ದಾರಿ ತೆಗೆದುಕೊಂಡಿರುವ ಎಲ್ಲಾ ಕಾರ್ಯಕರ್ತರು ಮುಖಂಡರು ಬಹಳ ಉತ್ಸಾಹದಿಂದ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಸಂತಸ ತಂದಿದೆ. ಬೃಜೇಶ್ ಚೌಟ ಅವರ ಪ್ರವಾಸದ ಸಂದರ್ಭದಲ್ಲಿ ಮತದಾರರ ಹಾಗೂ ಸಾರ್ವಜನಿಕರ ಅಭೂತಪೂರ್ವ ಸ್ಪಂದನೆ ದೊರೆತಿರುವುದು ಹರ್ಷ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದೆ ಈ ಚುನಾವಣಾ ಕಾರ್ಯವನ್ನು ಮುಂದಿನ ಹಂತಕ್ಕೆ ಪರಿಣಾಮಕಾರಿಯಾಗಿ ಬೂತ್ ಮಟ್ಟದವರೆಗೆ ತೆಗೆದುಕೊಂಡು ಹೋಗುವ ಬಗ್ಗೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ವಿವರವಾಗಿ ಚರ್ಚಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.ಈ ಸಭೆಯಲ್ಲಿ ನಿತಿನ್ ಕುಮಾರ್, ಗೋಪಾಲಕೃಷ್ಣ ಹೇರಳೆ, ಪ್ರಸಾದ್ ಕುಮಾರ್, ಶಾಸಕರಾದ ಡಿ. ವೇದವ್ಯಾಸ ಕಾಮತ್, ಮಂಗಳೂರು ಮಹಾನಗರ ಪಾಲಿಕೆ ಮಹಾಪೌರರಾದ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಮಂತ್ರಿ ನಾಗರಾಜ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಹಾಗೂ ಪದಾಧಿಕಾರಿಗಳು ಮುಖಂಡರು ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಸ್ವಾಗತಿಸಿದರು ಹಾಗೂ ಯತೀಶ್ ಆರ್ವಾರ್ ಧನ್ಯವಾದ ಸಮರ್ಪಿಸಿದರು.

ರಾಜಕೀಯ ವಾರ್ತೆಗಳು

ಎಲ್ಲರಂಥಲ್ಲ ನಮ್ಮ ನಳಿನಣ್ಣ

ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ ಬಿ.ಎನ್. ಮಂಗಳೂರು: ಮೂರು ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಎಂಪಿಯಾಗಿ ಒಂದು ಲಕ್ಷ ಕೋಟಿ ರೂಪಾಯಿಗಿಂತಲೂ ಅಧಿಕ ಮೊತ್ತದ ಅನುದಾನವನ್ನು ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ತಂದು ಕೊಟ್ಟ ನಳಿನ್‌ಕುಮಾರ್ ಕಟೀಲು ಅವರನ್ನು ಎಲ್ಲರೂ ಆತ್ಮೀಯತೆಯಿಂದ ಕರೆಯುವುದು ನಳಿನಣ್ಣರೆಂದೇ.ದಣಿವರಿಯದ ನಾಯಕ, ನಿಷ್ಕಳಂಕ, ಹಗರಣ ರಹಿತ ಭ್ರಷ್ಟಾಚಾರ ವಿರೋಧಿ, ಹಿಂದೂತ್ವದ ಜೊತೆಗೆ ಸೌಹಾರ್ದತೆಗೆ ಒತ್ತು ಕೊಟ್ಟ ನಳಿನಣ್ಣ ತನ್ನ ಬಳಿಗೆ ಸಹಾಯ ಕೇಳಿ ಬಂದ ಜನರಿಗೆ ಬರಿಗೈಲಿಯಲ್ಲಿ ವಾಪಾಸ್ಸು ಕಳುಹಿಸಿದವರಲ್ಲ.ನುಡಿದಂತೆ ನಡೆದ ನೇರ ನಡೆನುಡಿಯ ನಿರಾಡಂಬರ ನಾಯಕ ನಳಿನಣ್ಣ ರಾಜ್ಯಾಧ್ಯಕ್ಷರಾಗಿದ್ದಾಗ ಅತೀ ಹೆಚ್ಚು ಬಾರಿ ರಾಜ್ಯ ಸುತ್ತಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಅಂದರೆ ಬೇರುಮಟ್ಟದಿಂದ ಭದ್ರಗೊಳಿಸಿ ಹೆಮ್ಮರವಾಗಿಸಿದವರು.ಅತ್ಯುತ್ತಮ ಭಾಷಣಗಾರ, ವಾಗ್ಮಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಂತೆ ನೇರ ಮಾತುಗಳಿಂದ ಅನ್ಯಾಯದ ಎದುರು ಸಮರ ಸಾರುತ್ತಾ ಬಂದಿರುವ ನಳಿನಣ್ಣ ಒಬ್ಬ ಸಾಮಾನ್ಯ ಕಾರ‍್ಯಕರ್ತನಾಗಿದ್ದವರು ಆರ್‌ಎಸ್‌ಎಸ್ ಸಂಘಟನೆಯಿಂದ ಬಿಜೆಪಿ ಪಕ್ಷಕ್ಕೆ ಬಂದು ಬಿಜೆಪಿ ಹೈಕಮಾಂಡ್‌ನ ಒತ್ತಾಯದ ಮೇರೆಗೆ ಎಂಪಿ ಅಭ್ಯರ್ಥಿಯಾಗಿ 2009 ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಭರ್ಜರಿ ಜಯಭೇರಿ ಬಾರಿಸಿ ಸಂಸದರಾಗಿ ನಂತರ ಮತ್ತೆ 2 ಅವಧಿಗೆ ಒಟ್ಟು ಮೂರು ಬಾರಿ ಲಕ್ಷ ಲಕ್ಷ ಅತ್ಯಧಿಕ ಬಹುಮತಗಳಿಂದ ಗೆದ್ದು ಬಂದಿದ್ದರು. ಅವರು ಎರಡನೇ ಬಾರಿಗೆ ಮತ್ತು ಮೂರನೇ ಬಾರಿಗೆ ಸ್ಪರ್ಧಿಸಿದಾಗ ಕೆಲ ಟಿಕೇಟ್ ಆಕಾಂಕ್ಷಿಗಳು ಅಪಪ್ರಚಾರ ನಡೆಸಿದರು. ಅಪಹಾಸ್ಯಕಾರಿಯಾಗಿ ಟ್ರೋಲ್ ಮಾಡಿಸಿದರು.ಆದರೆ, ಸತ್ಯ ಸ್ಪಷ್ಟವಾಗಿತ್ತು. ಯಾರಿಗೂ ಅನ್ಯಾಯ ಮಾಡದ ನಳಿನಣ್ಣ ಸತತ 3 ಬಾರಿ ಎಂಪಿಯಾದರು. ಜನ ಬಯಸಿದ ಉತ್ತಮ ಸಂಸದರಾಗಿ ಗುರುತಿಸಿಕೊಂಡರು.ಆದರೂ, ಅವರ ಏಳ್ಗೆಯನ್ನು ಸಹಿಸದ ಮಂದಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಾದ್ಯಂತ ಅಪಸ್ವರ ಎಬ್ಬಿಸಿ ಟ್ರೋಲ್ ಮಾಡಿಸಿ ನಳಿನಣ್ಣನ ಇಮೇಜನ್ನು ಹಾಳು ಮಾಡಲು ನೋಡಿದರು.ಈ ನಡುವೆ ಜಾತ್ಯಾತೀತ ಶಕ್ತಿಗಳು ಕೂಡಾ ಉಳಿದವರಿಗಿಂತ ನಳಿನಣ್ಣ ಪರವಾಗಿಲ್ಲ ಎಂದಿದ್ದವು.ಆದರೆ, ಬಿಜೆಪಿ ಪಕ್ಷದ ಹೈಕಮಾಂಡ್ ನಳಿನಣ್ಣನ ಒಳ್ಳೆಯ ಗುಣವನ್ನು ಅವರು ಪಕ್ಷಕ್ಕಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಲೇ ಇಲ್ಲ.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಳಿನಣ್ಣ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾಗ ತನ್ನನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಲು ನಳಿನಣ್ಣ ಅವರೇ ಕಾರಣ ಎಂದು ಯಡಿಯೂರಪ್ಪ ಭಾವಿಸಿದ್ದರು. ಅವರ ಗುರು ಬಿ.ಎಲ್. ಸಂತೋಷ್ ಯಡಿಯೂರಪ್ಪರ ಬದ್ಧ ವೈರಿ.ಈ ಸೇಡಿನಿಂದ ಯಡಿಯೂರಪ್ಪನವರು ನಳಿನಣ್ಣನಿಗೆ ಈ ಸಲ ಎಂಪಿ ಟಿಕೇಟ್ ದೊರಕದಂತೆ ಅಡ್ಡ ಬಂದು ಅದರಲ್ಲಿ ಯಶಸ್ವಿಯಾದರು.ಸೇಡು ತೀರಿಸಿಕೊಂಡರು.ಇದೇ ಯಡಿಯೂರಪ್ಪನವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೇಟ್ ಕೊಡಬಾರದು ಎಂಬ ವಿರೋಧ ಬಂದಾಗ ಶೋಭಾ ಕರಂದ್ಲಾಜೆಗೆ ಬೆಂಗಳೂರು ಉತ್ತರದಲ್ಲಿ ಟಿಕೇಟ್ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು..ತನಗೆ ಟಿಕೇಟ್ ದೊರಕದಾಗ ನಳಿನಣ್ಣ ಯಾವುದೇ ರೀತಿಯ ವಿರೋಧ ಮಾಡಲಿಲ್ಲ. ಆಕ್ಷೇಪ ಮಾಡದೆ ಪಕ್ಷ ನಿಂತ ನೀರಾಗಬಾರದು. ಹೊಸಬರಿಗೆ ಅವಕಾಶ ನೀಡುತ್ತಿರುವುದು ಸ್ವಾಗತಾರ್ಹ ಎಂದಿದ್ದರು.ಇಲ್ಲಿ ಗಮನಿಸತಕ್ಕ ವಿಷಯವೊಂದಿದೆ. ನಳಿನಣ್ಣರನ್ನು ಬೆಂಬಲಿಸುವ ಲಕ್ಷಗಟ್ಟಲೆ ಅಭಿಮಾನಿ ವರ್ಗವಿದೆ. ನಳಿನಣ್ಣರ ಬ್ರಿಗೇಡ್‌ವಿದೆ. ನಳಿನಣ್ಣ ಯಾವತ್ತೂ ಅಧಿಕಾರ ಬಯಸಿದವರಲ್ಲ. 15 ವರ್ಷಗಳ ಹಿಂದೆ ಅಂದರೆ 2009 ರಲ್ಲಿ ಪಕ್ಷ ಅವರಿಗೆ ಅಧಿಕಾರಕ್ಕೆ ಒತ್ತಾಯಪೂರ್ವಕ ಕರೆ ತಂದಿತ್ತು. ಇದೀಗ ಅವರಿಗೆ ಟಿಕೇಟ್ ನೀಡದೆ ಮೆತ್ತಗೆ ಕೂರಿಸಿದೆ. ಈ ಬಗ್ಗೆ ನಳಿನಣ್ಣ ಯಾವುದನ್ನು ಮನಸ್ಸಿಗೆ ಹಚ್ಚಿ ಕೊಳ್ಳದೆ ಬಿಜೆಪಿ ಪರ, ಮೋದಿ ಪರ ತಾನು ಗೆಲುವಿಗಾಗಿ ಶ್ರಮಿಸುವುದಾಗಿ ಹೇಳಿದರು. ಇಲ್ಲಿ ನಳಿನಣ್ಣರ ಬದಲು ಬಿಜೆಪಿ ಹೈಕಮಾಂಡ್ ಕ್ಯಾಪ್ಟನ್ ಬೃಜೇಶ್ ಚೌಟ ಎಂಬ ಸಮರ್ಥ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ.ಸುಮಾರು 4 ತಿಂಗಳ ಹಿಂದೆ ಕ್ಯಾಪ್ಟನ್ ಬೃಜೇಶ್ ಚೌಟರಲ್ಲಿ Mp mla’s ನ್ಯೂಸ್ ನೀವು ಎಂಪಿ ಟಿಕೆಟ್ ಆಕಾಂಕ್ಷಿಯೇ ಎಂದು ಕೇಳಿತ್ತು. ಆವಾಗ ಅವರು “ನಳಿನಣ್ಣ ಇದ್ದಾರಲ್ಲಾ ಅವರಿಗೆ ಟಿಕೇಟು ಸಿಕ್ಕರೆ ನನ್ನದೇನೂ ವಿರೋಧವಿಲ್ಲ. ಒಂದು ವೇಳೆ ನನಗೆ ಪಕ್ಷ ಎಂಪಿ ಟಿಕೇಟ್ ಕೊಟ್ಟರೆ ಸ್ಪರ್ಧಿಸುತ್ತೇನೆ” ಎಂದಿದ್ದರು.ಕ್ಯಾಪ್ಟನ್ ಬೃಜೇಶ್ ಚೌಟ ಅವರು ಮಂಗಳೂರು ಕಂಬಳದ ರೂವಾರಿ. ನಿವೃತ್ತ ಸೇನಾನಿ. ಉತ್ತಮ ಯುವ ನಾಯಕ. ಅವರು ಯಾವತ್ತೂ ಎಂಪಿ ಟಿಕೇಟ್‌ಗಾಗಿ ಲಾಬಿ ನಡೆಸಿದವರಲ್ಲ. ಕಳೆದ ಬಾರಿಯೂ ಅವರಿಗೆ ಟಿಕೆಟ್ ಸಿಗುವುದರಲ್ಲಿತ್ತು. ಆದರೆ,ಈ ಬಾರಿ ಸಿಕ್ಕಿದೆ.ನಳಿನಣ್ಣ ಅವರು ಬೃಜೇಶ್ ಚೌಟರಿಗೆ ಸಿಹಿ ತಿನಿಸಿ ಅವರನ್ನು ಎಂಪಿಯಾಗಿ ಗೆಲ್ಲಿಸುವುದಾಗಿ ಮಾತು ಕೊಟ್ಟಿದ್ದಾರೆ. ಅವರೀಗ ಬೃಜೇಶ್ ಚೌಟರನ್ನು ಮಾತ್ರವಲ್ಲದೆ ರಾಜ್ಯದಲ್ಲಿ ಸ್ಪರ್ಧಿಸುತ್ತಿರುವ ಎಲ್ಲಾ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಶಕ್ತಿ ಮೀರಿ ದುಡಿದು ಕಿಂಗ್ ಮೇಕರ್ ಆಗಬೇಕಾಗಿದೆ.ಎಲ್ಲರಂಥಲ್ಲ ನಮ್ಮ ನಳಿನಣ್ಣ. ಅಧಿಕಾರವಿರಲಿ, ಇಲ್ಲದಿರಲಿ ನಮ್ಮ ನಳಿನಣ್ಣ ಅದ್ವಿತೀಯ ಸಂಘಟಕ. ಜನಸೇವಕ, ಜನನಾಯಕ. ಅವರ ಮುಂದಿನ ರಾಜಕೀಯ ಭವಿಷ್ಯವು ಇನ್ನಷ್ಟು ಉಜ್ವಲವಾಗಿ ಪ್ರಜ್ವಲಿಸಲಿ ಎಂದು ನಳಿನಣ್ಣರ ಅಸಂಖ್ಯಾತ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ರಾಜಕೀಯ ವಾರ್ತೆಗಳು

3 ಲಕ್ಷಕ್ಕೂ ಅಧಿಕ ಮತಗಳಿಂದ ಬಿಜೆಪಿಯಲ್ಲಿ ಕ್ಯಾಪ್ಟನ್ ಬೃಜೇಶ್ ಚೌಟ ಗೆಲ್ಲಲಿದ್ದಾರೆ ಎಂದ ಕೃಷ್ಣ ಪಾಲೆಮಾರ್. ಬಿಜೆಪಿ ಪಾಳಯದಲ್ಲಿ ಅರುಣ್ ಪುತ್ತಿಲ ಸೇರಿದಂತೆ ಪ್ರಮುಖ ನಾಯಕರು ಚೌಟ ಪರ ಬ್ಯಾಟಿಂಗ್.

ಮಂಗಳೂರು: ಬಿಜೆಪಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕ್ಯಾಪ್ಟನ್ ಬೃಜೇಶ್ ಚೌಟ ಆಯ್ಕೆಯಾಗಿರುವುದು ಬಿಜೆಪಿ ಪಾಳಯದಲ್ಲಿ ಹೊಸ ಉಲ್ಲಾಸ, ಉತ್ಸಾಹದ ಜೊತೆಗೆ ಹೊಸ ಅಲೆ ಎಬ್ಬಿಸಿದೆ. ಬೃಜೇಶ್ ಚೌಟ ಅವರು 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಲಿದ್ದಾರೆ. ಅವರನ್ನು ಗೆಲ್ಲಿಸಿ ಕೊಡುತ್ತೇವೆಂದು ಮಾಜಿ ಸಚಿವ ಕೃಷ್ಣ ಪಾಲೆಮಾರ್ ಅವರು ಹೇಳಿದ್ದಾರೆ. ತನಗೆ ಟಿಕೇಟ್ ಸಿಗದಿದ್ದರೂ, ಆ ಬಗ್ಗೆ ತಲೆಕೆಡಿಸಿಕೊಳ್ಳದ ನಳಿನ್‌ಕುಮಾರ್ ಕಟೀಲ್ ಅವರು ತಾನು ಬೃಜೇಶ್ ಚೌಟರ ಗೆಲುವಿಗಾಗಿ ಶಕ್ತಿಮೀರಿ ಶ್ರಮಿಸುವುದಾಗಿ ನುಡಿದಿದ್ದಾರೆ. ಈ ಹಿಂದೆ ತಾನು ಬಂಡಾಯ ಏಳುತ್ತೇನೆಂದು ಸಾರಿದ್ದ ಅರುಣ್ ಪುತ್ತಿಲ ಅವರು ಮಂಗಳೂರಿನಲ್ಲಿ ಬಿಜೆಪಿ ಪಕ್ಷವನ್ನು ಅಧಿಕೃತವಾಗಿ ಸೇರಿ ಬೃಜೇಶ್ ಚೌಟ ಗೆಲುವಿಗಾಗಿ ದುಡಿಯುವುದಾಗಿ ಘೋಷಿಸಿದ್ದಾರೆ. ಒಟ್ಟಿನಲ್ಲಿ ಮಂಗಳೂರಲ್ಲಿ ಬೃಜೇಶ್ ಚೌಟರ ಪರ ಜನ ಅಲೆ ಎದ್ದಿದ್ದು ಪ್ರತಿಸ್ಪರ್ಧಿ ಕಾಂಗ್ರೆಸ್‌ನಲ್ಲಿ ಪದ್ಮರಾಜ್ ಆರ್. ಅವರು ಅಭ್ಯರ್ಥಿಯಾಗಿ ಸ್ಪರ್ಧಿಸುವ ಸುದ್ಧಿ ಇದೆ.

ರಾಜಕೀಯ ವಾರ್ತೆಗಳು

ಟಿಕೆಟ್ ಕೈ ತಪ್ಪುವರ ಬೆಂಬಲಕ್ಕೆ ನಿಂತ ಬಿಎಸ್ ವೈ. ವಿರೋಧವಿರುವ ಹಾಲಿ 7 ಮಂದಿ ಬಿಜೆಪಿ ಸಂಸದರ ಪರ ಯಡಿಯೂರಪ್ಪ ಬ್ಯಾಟಿಂಗ್. ನಾಳೆ ಸಂಜೆಯೊಳಗೆ ಟಿಕೆಟ್ ಹಂಚಿಕೆ ಪ್ರಕ್ರಿಯೆ ಫೈನಲ್. ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲು ಹೆಸರು ಶಿಫಾರಸ್ಸು.

ಬ್ರೇಕಿಂಗ್ ನ್ಯೂಸ್ :ಡಾ. ಅಶೋಕ್ ಶೆಟ್ಟಿ. ಬಿ. ಎನ್. ಬೆಂಗಳೂರು :ಕಳೆದ ಒಂದು ವಾರದಿಂದ ನಳಿನ್ ಕುಮಾರ್ ಕಟೀಲ್ ಅವರಿಗೆ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಸಿಗುವುದಿಲ್ಲವೆಂಬ ಸುದ್ದಿ ಹಬ್ಬಿದ್ದು, ಕ್ಯಾಪ್ಟನ್ ಬೃಜೇಶ್ ಚೌಟ ಅವರಿಗೆ ದಕ್ಷಿಣ ಕನ್ನಡದಿಂದ ಎಂಪಿ ಟಿಕೆಟ್ ಫೈನಲ್ ಆಗಿದೆ ಎಂಬ ಬಗ್ಗೆ ಸುದ್ದಿಯಾಗಿತ್ತು. ಆದರೆ, ಇದೆಲ್ಲ ಗಾಸಿಪ್ ಸುದ್ದಿ ಎಂದು ಬಿಜೆಪಿ ಹೈ ಕಮಾಂಡ್ ನ ಆಪ್ತ ಮೂಲವೊಂದು mpmla’s news tvಗೆ ತಿಳಿಸಿದೆ. ಅದರ ಪ್ರಕಾರ, ಬಿ ಎಸ್ ವೈ ಅವರು ಟಿಕೆಟ್ ಕೈ ತಪ್ಪುವರ ಬೆಂಬಲಕ್ಕೆ ನಿಂತಿದ್ದಾರೆ. ಟಿಕೆಟ್ ಕೊಡಬಾರದೆಂದು ವಿರೋಧವಿರುವ ಬಿಜೆಪಿಯ 7 ಮಂದಿ ಹಾಲಿ ಸಂಸದರ ಪರ ನಿಂತು ಯಡಿಯೂರಪ್ಪ ಅವರು ಬ್ಯಾಟಿಂಗ್ ನಡೆಸುತ್ತಿದ್ದಾರೆ. ಬೆಂಗಳೂರು ಉತ್ತರದಲ್ಲಿ ಡಿ. ವಿ. ಸದಾನಂದ ಗೌಡ, ಮಂಡ್ಯದಲ್ಲಿ ಜೆಡಿಎಸ್ ಪರ, ಮೈಸೂರಿನಲ್ಲಿ ಪ್ರತಾಪ್ ಸಿಂಹ ಪರ,ಉತ್ತರ ಕನ್ನಡದಲ್ಲಿ ಅನಂತ್ ಕುಮಾರ್ ಹೆಗಡೆ ಪರ, ಬೀದರನಲ್ಲಿ ಭಗವಂತ ಖೂಬ ಪರ,ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ಪರ,ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲು ಹೆಸರು ಶಿಫಾರಸ್ಸು ಮಾಡಿ ಬಿಜೆಪಿ ಹೈ ಕಮಾಂಡ್ ಗೆ ತಾನು ಶಿಫಾರಸ್ಸು ಮಾಡಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಸ್ಪಷ್ಟವಾಗಿ ಸೂಚಿಸಿದ್ದಾರೆ. ನಾಳೆ ಮಾರ್ಚ್ 10 ರಂದು ದೆಹಲಿಯಲ್ಲಿ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಮೋದಿ, ನಡ್ಡಾ, ಅಮಿತ್ ಶಾ ಭಾಗವಹಿಸಲಿದ್ದಾರೆ. ಕರ್ನಾಟಕದಿಂದ ಬಿ ಎಸ್ ವೈ ಅವರು ಪಾಲ್ಗೊ ಳ್ಳ ಲಿದ್ದಾರೆ. ನಾಳೆ ಸಂಜೆಯೊಳಗೆ ಬಿಜೆಪಿ ಟಿಕೆಟ್ ಹಂಚಿಕೆ ಪ್ರಕ್ರಿಯೆ ಫೈನಲ್ ಆಗಲಿದೆ. ಕರ್ನಾಟಕದಲ್ಲಿ ಬಿಎಸ್ ವೈ ಸೂಚಿಸಿದ ಅಭ್ಯರ್ಥಿಗಳಿಗೆ ಟಿಕೆಟ್ ನೂರಕ್ಕೆ ನೂರರಷ್ಟು ಗ್ಯಾರಂಟಿಯಾಗಿದ್ದು, ಬಿ. ಎಲ್. ಸಂತೋಷ್ ಅವರ ಕೃಪಾಕಟಾಕ್ಷವೂ ಕಟೀಲ್ ಪರವಿರುವುದ್ದರಿಂದ ನಳಿನ್ ಕುಮಾರ್ ಕಟೀಲು ಅವರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸತತ 4 ನೇ ಬಾರಿಗೆ ಬಿಜೆಪಿಯಿಂದ ಎಂಪಿ ಟಿಕೆಟ್ ಪಡೆದು ಸ್ಪರ್ಧಿಸುವುದು ಸ್ಪಷ್ಟ ಹಾಗೂ ನೂರಕ್ಕೆ ನೂರರಷ್ಟು ಸತ್ಯವೆಂದು ವರದಿಯಾಗಿದೆ. ವಿವಾದ ರಹಿತ, ನಿಷ್ಕಲ್ಮಶ ಮನಸ್ಸಿನ ನೇರ ನಡೆ ನುಡಿಯ ನಿಷ್ಕಳಂಕ ನಾಯಕರಾಗಿರುವ ಕಟೀಲ್ ಅವರು ಯಾವುದೇ ಹಗರಣವಿಲ್ಲದ, ಭ್ರಷ್ಟಾಚಾರವಿಲ್ಲದ ಜನಪರ, ಜನ ಮೆಚ್ಚಿದ ನಾಯಕರಾಗಿದ್ದಾರೆ. 2009 ರಿಂದ 2023 ರ ವರೆಗೆ ಸತತವಾಗಿ 3 ಅವಧಿಗಳಲ್ಲಿ ದಕ್ಷಿಣ ಕನ್ನಡದ ಎಂಪಿಯಾಗಿ ಒಂದು ಲಕ್ಷ ಕ್ಕೂ ಅಧಿಕ ಕೋಟಿ ರೂಪಾಯಿಗಳ ಅನುದಾನವನ್ನು ಕೇಂದ್ರದಿಂದ ತಂದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಲು ಶಕ್ತಿ ಮೀರಿ ದುಡಿದ್ದಾರೆ.ಮಂಗಳೂರನ್ನು ಸ್ಮಾರ್ಟ್ ಸಿಟಿಯಾಗಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅತಿ ಹೆಚ್ಚು ಬಾರಿ ರಾಜ್ಯ ಪ್ರವಾಸ ಮಾಡಿ ರಾಜ್ಯದ ಮೂಲೆ ಮೂಲೆಗಳನ್ನು ಸುತ್ತಿ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸಿ ಬೃಹತ್ ಶಕ್ತಿಶಾಲಿ ಹೆಮ್ಮರವಾಗಿಸಿದ್ದಾರೆ. ಈ ಸಲ ಅವರು ಸ್ಪರ್ಧಿಸಿದಲ್ಲಿ ಮೂರು ಲಕ್ಷ ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಪ್ರಚಂಡ ಜಯಭೇರಿ ಬಾರಿಸುವುದು ಗ್ಯಾರಂಟಿ ಎಂಬ ಸಮೀಕ್ಷೆ ವ್ಯಕ್ತವಾಗಿದೆ. ನಳಿನ್ ಕುಮಾರ್ ಕಟೀಲ್ ಅವರು 4 ನೇ ಬಾರಿಗೆ ಸ್ಪರ್ಧಿಸಿ ಎಂಪಿಯಾಗಿ ಜಯಭೇರಿ ಬಾರಿಸಲೆಂದು mp mla’s news tv ಶುಭ ಹಾರೈಸುತ್ತದೆ.

ರಾಜಕೀಯ ವಾರ್ತೆಗಳು

ಫೆ.17ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ: ಡಿಸಿಎಂ ಡಿ ಕೆ ಶಿವಕುಮಾರ್

ಮುಂದಿನ ಫೆಬ್ರವರಿ 17ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ. ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಮೊದಲು ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸುವ ಬಗ್ಗೆ ತೀರ್ಮಾನಿಸಲಾಗಿತ್ತು. ಆ ಬಳಿಕ ಅದನ್ನು ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಈಗ ಫೆ.17ರಂದು ನಡೆಸಲು ತೀರ್ಮಾನಿಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಈ ಸಮಾವೇಶ ಮಂಗಳೂರಿನಲ್ಲಿ ನಡೆಯಲಿದೆ” ಎಂದು ತಿಳಿಸಿದ್ದಾರೆ.

Scroll to Top