ಕಬ್ಬಿಣದ ರಾಡು ಬಿದ್ದು ನೀರಿನ ಟ್ಯಾಂಕ್ ಮತ್ತು ಮನೆಯ ಫೈಬರ್ ಶೀಟ್ ಸಂಪೂರ್ಣ ಹಾನಿ. ಮನೆ ಮಂದಿ ಪ್ರಾಣಾಪಾಯದಿಂದ ಪಾರು. ಚಿಲಿಂಬಿ ಬಳಿ ನಡೆದ ಘಟನೆ.

99.7K Views 25 Jul 2024

ಮಂಗಳೂರು : ಚಿಲಿಂಬಿ ಶಾರದಾ ನಿಕೇತನದ ಎದುರುಗಡೆ ಸಿಸ್ಟರ್ ಲೂಸಿ ಡಿಸೋಜ ಅವರು ಶ್ರೀನಿಧಿ ಅಪಾರ್ಟ್ಮೆಂಟ್ ನಲ್ಲಿ ವಾಸ್ತವ್ಯ ವಿದ್ದು ,ನಿನ್ನೆ ರಾತ್ರಿ 9.15 ಗಂಟೆ ಸುಮಾರಿಗೆ ಸುರಿದ ಬಿರುಸು ಮಳೆಗೆ ಇವರ ಪಕ್ಕದ ಕಟ್ಟಡದ ಮೇಲಿದ್ದ ಕಬ್ಬಿಣದ ಶೀಟ್ ಮತ್ತು ಕಬ್ಬಿಣದ ರಾಡು ಬಿದ್ದು ನೀರಿನ ಟ್ಯಾಂಕ್ ಮತ್ತು ಕಾಂಕ್ರೀಟ್ ಮನೆಯ ಫೈಬರ್ ಶೀಟ್ ಸಂಪೂರ್ಣ ಹಾನಿಗೊಳಗಾಗಿದ್ದು, ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂದಾಜು ನಷ್ಟ 25 ಸಾವಿರವೆಂದು ವರದಿಯಾಗಿದೆ. ಲೂಸಿ ಡಿಸೋಜ ಅವರು ನಿವೃತ್ತ ನರ್ಸ್ ಆಗಿದ್ದು, ಪಾರ್ಟ್ ಟೈಮ್ ಹೋಮ್ ನರ್ಸಿಂಗ್ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕೆಂದು Mp mla’s ನ್ಯೂಸ್ ವಿನಂತಿಸುತ್ತದೆ.

Read More News

Scroll to Top