ಮಂಗಳೂರು: ಜೂನ್ 29ರ ಪೂವಾ೯ಹ್ನದಂದು ಮಹಾನಗರಪಾಲಿಕೆಯ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿ. ಕುದ್ಮುಲ್ ರಂಗ ರಾವ್ ರವರ ದಿನಾಚರಣೆಯನ್ನು ಮಂಗಳೂರು ಮಹಾನಗರಪಾಲಿಕೆಯ ವತಿಯಿಂದ ಆಚರಿಸಲು ನಿಧ೯ರಿಸಲಾಗಿದ್ದು, ಮೇಯರ್ ಸುಧೀರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಪೂವ೯ ತಯಾರಿಯ ಕುರಿತು ಚಚಿ೯ಸಲಾಯಿತು. ಪಾಲಿಕೆಯ ಸಮಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಾಲಿಕೆಯ ಉಪಮೇಯರ್ ಸುನೀತ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಭರತ್ ಕುಮಾರ್ ಸದಸ್ಯರಾದ ಸಂಧ್ಯಾ ಆಚಾರ್, ಮನೋಜ್ ಕುಮಾರ್ ಮತ್ತು ಮಹಾನಗರಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.





























































































































































































