ಪ್ರತ್ಯಕ್ಷ ವರದಿ: ಸಂಗೀತ ಸತೀಶ್ ಶೆಟ್ಟಿ.
ಬಂಟ್ವಾಳ:ಬಂಟ್ವಾಳ ತಾಲೂಕಿನ ಹಲವೆಡೆ ರಸ್ತೆ ಬದಿಗಳಲ್ಲಿ ಕೆಲವರು ಪ್ಲಾಸ್ಟಿಕ್ ಕವರ್ ಗಳಲ್ಲಿ ತ್ಯಾಜ್ಯಗಳನ್ನು ಬಿಸಾಡುತ್ತಾರೆ. ಇವುಗಳ ಬಗ್ಗೆ ಎನೂ ಅರಿಯದ ಮುಗ್ದ ಮೂಕ ಪ್ರಾಣೆಗಳು, ಸಾಕು ಪ್ರಾಣೆಗಳು,ದನ ಕರುಗಳು ಇದನ್ನು ಆಹಾರವೆಂದು ತಪ್ಪಾಗಿ ಭಾವಿಸಿ ತಿನ್ನುತ್ತವೆ. ಪರಿಣಾಮ, ಅವುಗಳು ಸಾಯುತ್ತವೆ, ಇನ್ನು ಕೆಲವು ಪ್ರಜ್ಞೆ ತಪ್ಪುತ್ತವೆ. ಪಾಪ, ಮೂಕ ಪ್ರಾಣಿಗಳಿಗೇನು ಗೊತ್ತು ಇದು ಅಪಾಯಕಾರಿ ಪ್ಲಾಸ್ಟಿಕ್ ತ್ಯಾಜ್ಯಗಳೆಂದು. ಈ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ ಪ್ಲಾಸ್ಟಿಕ್ ಕವರ್ ಗಳಲ್ಲಿ ತ್ಯಾಜ್ಯ ಬಿಸಾಡುವುದನ್ನು ನಿಷೇಧಿಸಬೇಕಾಗಿದೆ.
ವೀಡಿಯೋ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ.
https://drive.google.com/file/d/1RBgAOKnhaSIBsbaWWlJ3UDgbvDATRNOx/view?usp=sharing


























































































































































































