ಭಾನುಪ್ರಕಾಶ್ ಅವರ ಆದರ್ಶ ಕಾರ್ಯಕರ್ತರಿಗೆ ದಾರಿದೀಪವಾಗಿದೆ : ನಳಿನ್ ಕುಮಾರ್ ಕಟೀಲು.

118.1K Views 17 Jun 2024

ಮಂಗಳೂರು : ರಾಜ್ಯದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಎಂ.ಬಿ. ಭಾನುಪ್ರಕಾಶ್ ಅವರು ತಮ್ಮ ಸರಳ ವ್ಯಕ್ತಿತ್ವದಿಂದ ಎಲ್ಲ ಕಾಯಕರ್ತರ ಪ್ರೀತಿಗೆ ಪಾತ್ರರಾದವರು. ವಿಧಾನ ಪರಿಷತ್‌ನ ಸದಸ್ಯರಾಗಿಯೂ ಜನತೆಗೆ ಸೇವೆ ನೀಡಿದ ಹಿರಿಯ ನಾಯಕ. ಪಕ್ಷದ ಎಲ್ಲ ಸ್ತರದ ನಾಯಕರಿಗೆ ಅವರು ಮಾರ್ಗದರ್ಶಕವಾಗಿದ್ದರು. ಅವರ ಅಗಲುವಿಕೆಯಿಂದ ಓರ್ವ ಅನುಭವಿ ನಾಯಕ ಹಾಗೂ ಮಾರ್ಗದರ್ಶಕನನ್ನು ಕಳಕೊಂಡಿದ್ದೇವೆ. ಭಾನುಪ್ರಕಾಶ್ ಅವರ ಆದರ್ಶಗಳು ಬಿಜೆಪಿ ಕಾರ್ಯಕರ್ತರಿಗೆ ಸದಾ ದಾರಿದೀಪವಾಗಿದೆ ಎಂದು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದಾರೆ.

Read More News

Scroll to Top