ಮಂಗಳೂರು: ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಕೂಳೂರು ಬೀಡಿಗೆ ಭೇಟಿ ನೀಡಿದರು.

ಮನೆ ಯಜಮಾನ ವಜ್ರ ಕುಮಾರ್ ಕರ್ಣಾಂತಾಯ ಬಲ್ಲಾಳ್ ಅವರು ದೈವಗಳ ಮುಂದೆ ಪದ್ಮರಾಜ್ ಆರ್. ಅವರ ಗೆಲುವಿಗೆ ಪ್ರಾರ್ಥಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ಮಹಾನಗರ ಪಾಲಿಕೆ ಸದಸ್ಯ ಅನಿಲ್ ಕುಮಾರ್, ಬ್ಲಾಕ್ ಅಧ್ಯಕ್ಷರುಗಳಾದ ಸುರೇಂದ್ರ ಕಾಂಬ್ಳಿ, ಪದ್ಮನಾಭ ಕೋಟ್ಯಾನ್, ಗಿರೀಶ್ ಆಳ್ವ, ರೂಪೇಶ್ ರೈ, ದೀಪಕ್ ಪೂಜಾರಿ, ಹಕೀಂ ಕೂಳೂರು, ರಾಜೇಶ್ ಕುಳಾಯಿ, ರಾಜೇಶ್ ದೇವಾಡಿಗ, ಶ್ಯಾಲೆಟ್ ಪಿಂಟೋ, ರೆಹಮಾನ್ ಖಾನ್ ಕುಂಜತ್ತಬೈಲ್, ಗಿರೀಶ್ ಆಳ್ವ, ಪುರುಷೋತ್ತಮ್ ಚಿತ್ರಾಪುರ, ಬಿ.ಎಲ್. ಪದ್ಮನಾಬ್ ಮೊದಲಾದವರು ಉಪಸ್ಥಿತರಿದ್ದರು.


























































































































































































