ಪೆರುವಾಯಿ ಚರ್ಚ್ ನಲ್ಲಿ ಫಾತಿಮಾ ಮಾತೆಯ ವಾರ್ಷಿಕ ಹಬ್ಬ ಆಚರಣೆ

99.7K Views 1w ago

ಬಂಟ್ವಾಳ: ಫಾತಿಮಾ ಮಾತೆ ಜಗತ್ತಿನಲ್ಲಿ ಕಾಣಿಸಿಕೊಂಡ ದಿನದ ಪ್ರಯುಕ್ತ ವಿಟ್ಲದ ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಬುಧವಾರ
ಫಾತಿಮಾ ಮಾತೆಯ ವಾರ್ಷಿಕ ಹಬ್ಬ ಆಚರಿಸಲಾಯಿತು.
ಹಬ್ಬದ ದಿವ್ಯಬಲಿಪೂಜೆಯನ್ನು ಮಂಗಳೂರಿನ ಬಿಜೈ ಚರ್ಚ್‌ನ ಸಹಾಯಕ ಧರ್ಮಗುರುಗಳಾದ  ವಂ. ಜೀವನ್‌ ಡಿಸೋಜಾ ನೆರವೇರಿಸಿದರು. 


ಬಳಿಕ ಪ್ರವಚನದಲ್ಲಿ, ಮೇರಿ ಮಾತೆಯು 1917 ರ ಮೇ 13ರಂದು ಪೋರ್ಚುಗಲ್‌ನ ಫಾತಿಮಾ ಎಂಬಲ್ಲಿ ಲೂಸಿಯಾ, ಫ್ರಾನ್ಸಿಸ್ಕೋ ಮತ್ತು ಜೆಸಿಂತಾ ಎಂಬ ಮೂವರು ಮಕ್ಕಳಿಗೆ ಕುರಿಗಳನ್ನು ಮೇಯಿಸುತ್ತಿದ್ದಾಗ ಕಾಣಿಸಿಕೊಂಡರು. ಆ ವೇಳೆ ಅವರು ಪ್ರಾರ್ಥನೆ, ಜಪಮಾಲೆ ಪಠಣ ಮಾಡುವಂತೆ ಕರೆ ನೀಡಿದರು. ಫಾತಿಮಾ ಮಾತೆಯ ಮೂಲಕ ನಮಗೆ ಅನೇಕ ಒಳಿತುಗಳಾಗುತ್ತಿವೆ. ಹಿಂದಿನ ವರ್ಷ ಅವರ ಮೂಲಕ ದೊರೆತ ಕೃಪಾಶೀರ್ವಾದಗಳಿಗೆ ಕೃತಜ್ಞತೆ ಸಲ್ಲಿಸಲು ಸೂಕ್ತ ಸಮಯವಾಗಿದ್ದು, ನಮ್ಮ ಜೀವನದಲ್ಲಿ ದೊರೆತ ಆಶೀರ್ವಾದಗಳ ಸಿಂಹಾವಲೋಕನಕ್ಕೆ ಸೂಕ್ತ ಅವಕಾಶವೆಂದರು.

ಬಲಿಪೂಜೆಯ ನಂತರ ಚರ್ಚ್‌ ಆವರಣದಲ್ಲಿರುವ ಫಾತಿಮಾ ಮಾತೆಯ ಪ್ರತಿಮೆಯ ಮುಂದೆ ಪ್ರಾರ್ಥನೆ ನಡೆಯಿತು.
ಬಲಿಪೂಜೆಯಲ್ಲಿ ಶಿವಮೊಗ್ಗ ಧರ್ಮಪ್ರಾಂತ್ಯದ ವಂ. ಲಾರೆನ್ಸ್‌ ಡಿಸೋಜ, ಗೋವಾದ ಧರ್ಮಗುರು ವಂ. ಜೊಸ್ಸಿ ಮಸ್ಕರೇನಸ್‌ ಹಾಗೂ ಪೆರುವಾಯಿ ಚರ್ಚ್‌ನ ಧರ್ಮಗುರು ವಂ. ಸೈಮನ್‌ ಡಿಸೋಜಾ ಅವರು ಭಾಗವಹಿಸಿದ್ದರು.

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top