ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕೌನ್ಸಿಲರ್ ಮತ್ತು ಒಂದು ಬಾರಿ ಉಪ ಮೇಯರ್ ಸ್ಥಾನವನ್ನು ಹೊಂದಿದ್ದ ಮೊಹಮ್ಮದ್ ಕುಂಜತ್ತಬೈಲ್ ರವರು ಇಂದು ನಿಧನರಾಗಿದ್ದು,ಅವರ ನಿಧನಕ್ಕೆ ಮಾಜಿ ಮೇಯರ್ ಕೆ.ಅಶ್ರಫ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಕೆ.ಮೊಹಮ್ಮದ್ ಕುಂಜತ್ತಬೈಲ್ ರವರು ಓರ್ವ ಕಾಂಗ್ರೆಸ್ ಮುಂದಾಳು ಆಗಿದ್ದು, ಕಾನೂನಾತ್ಮಕ ಮತ್ತು ಶಿಸ್ತು, ಶಿಷ್ಟಾಚಾರ ಬಗ್ಗೆಗಿನ ವಿಷಯಗಳಲ್ಲಿ ಹೆಚ್ಚಿನ ಜ್ಞಾನ ಹೊಂದಿದ ಓರ್ವ ನಿಷ್ಠಾವಂತ ಕಾರ್ಯಕರ್ತ ಕೂಡಾ ಆಗಿದ್ದರು. ಸರ್ವರೊಂದಿಗೆ ಮುಕ್ತವಾಗಿ ಬೆರೆಯುವ ವ್ಯಕ್ತಿತ್ವದ ಮೊಹಮ್ಮದ್ ಕುಂಜತ್ತಬೈಲು
ಅವರ ನಿಧನದಿಂದಾಗಿ ಪಕ್ಷದ ಓರ್ವ ಪ್ರಮುಖ ವ್ಯಕ್ತಿಯನ್ನು ಕಳೆದು ಕೊಂಡಂತಾಗಿದೆಂದು
ಮಾಜಿ ಮೇಯರ್ ಕೆ.ಅಶ್ರಫ್ ಸಂತಾಪ ಸೂಚಿಸಿದ್ದಾರೆ.
























































































































































































