ಮಂಗಳೂರು: ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾಗಿ ಜಿತೇಂದ್ರ ಜೆ. ಸುವರ್ಣ ಪುನರಾಯ್ಕೆಯಾಗಿದ್ದಾರೆ. ರವಿವಾರ ನಡೆದ ಸಂಘದ ಮಹಾಸಭೆಯಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಪದಾಧಿಕಾರಿಗಳ ಪಟ್ಟಿ ಇಂತಿವೆ: ರಂಜನ್ ಮಿಜಾರ್ (ಗೌರವಾಧ್ಯಕ್ಷ), ಸುರೇಶ್ ಪೂಜಾರಿ ಕುಳಾಯಿ (ಪ್ರಧಾನ ಕಾರ್ಯದರ್ಶಿ), ಶ್ರೀನಿವಾಸ್ (ಜೊತೆ ಕಾರ್ಯದರ್ಶಿ), ಪ್ರಜ್ವಲ್ (ಸಂಘಟನಾ ಕಾರ್ಯದರ್ಶಿ), ಶೋಭಾ ಕೇಶವ್ (ಕೋಶಾಧಿಕಾರಿ), ಉಪಾಧ್ಯಕ್ಷರಾಗಿ ಸುರೇಶ್ಚಂದ್ರ ಕೋಟ್ಯಾನ್, ಅವಿನಾಶ್ ಪಾಲ್ದಾನೆ, ಮೀನಾಕ್ಷಿ ಆರ್.ಕೆ., ವೆಂಕಟೇಶ್ ದಾಸ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರವಿಚಂದ್ರ, ಪದ್ಮನಾಭ ಮರೋಳಿ, ತುಕರಾಮ, ಲಕ್ಷ್ಮಣ ಸಾಲ್ಯಾನ್, ಸಾಧು ಪೂಜಾರಿ, ಸುನೀತಾ ಗೋಪಾಲಕೃಷ್ಣ ಪಾರ್ವತಿ ಅಮಿನ್, ಕೇಶವ, ಸಲಹೆಗಾರರಾಗಿ ಚರಣ್ ಕೆ., ರಾಘವ ಕೆ., ರಾಮಚಂದ್ರ ಸಾಲ್ಯಾನ್, ಮೋಹಿತ್ ಸುವರ್ಣ, ಅಶೋಕ್ ಕುಮಾರ್, ಪುರುಷೋತ್ತಮ ಪೂಜಾರಿ, ಲೋಕನಾಥ್ ಪೂಜಾರಿ ಆಯ್ಕೆಯಾಗಿದ್ದಾರೆ.



















































































































































































