ವರದಿ: ಡಾ. ಅಶೋಕ್ ಶೆಟ್ಟಿ ಬಿ. ಎನ್.
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲ್ ಸೇರಿರುವ ದರ್ಶನ್, ಪವಿತ್ರಗೌಡ ಸಹಿತ 7 ಮಂದಿ ಆರೋಪಿಗಳಿಗೆ ಹೈಕೋರ್ಟ್ ರೆಗ್ಯುಲರ್ ಜಾಮೀನು ಮಂಜೂರು ಮಾಡಿದೆ. ಇದು ಶರ್ತಬದ್ದ ಜಾಮೀನು ಆಗಿದ್ದು, ದರ್ಶನ್ ಬೆನ್ನು ನೋವಿನ ಕಾರಣವೊಡ್ಡಿ ಬೆನ್ನು ಶಸ್ತ್ರ ಚಿಕಿತ್ಸೆ ಮಾಡಲಿಕ್ಕಿದೆಯೆಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೂ, ಮಧ್ಯಾoತರ ಜಾಮೀನು ಮೇಲೆ ಹೊರಗಿದ್ದಾರೆ. ರೆಗ್ಯುಲರ್ ಜಾಮೀನು ಇವತ್ತು ಸಿಕ್ಕಿರುವುದ್ದರಿಂದ ಅವರಿನ್ನೂ ಬೆನ್ನು ಆಪರೇಷನ್ ಮಾಡುವುದು ಡೌಟ್ ಎನ್ನಲಾಗುತ್ತಿದೆ. ದರ್ಶನ್ ಗೆ ಜಾಮೀನು ಸಿಕ್ಕ ಕೂಡಲೇ ಪೊಲೀಸ್ ಇಲಾಖೆ ಸಭೆ ಸೇರಿ ಮೇಲ್ಮನವಿ ಸಲ್ಲಿಸುವ ಕುರಿತು ಮುಂದಿನ ಹೆಜ್ಜೆಗಳ ಬಗ್ಗೆ ರೂಪುರೇಷೆ ಹಾಕಿ ಕೊಂಡಿದೆ. ಈ ಮದ್ಯೆ ರೇಣುಕಾಸ್ವಾಮಿ ಪತ್ನಿಗೆ ಸರಕಾರಿ ಉದ್ಯೋಗ ನೀಡಬೇಕೆಂದು ರೇಣುಕಾಸ್ವಾಮಿಯ ಚಿಕ್ಕಪ್ಪ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ.


























































































































































































