ಬ್ರೇಕಿಂಗ್ ನ್ಯೂಸ್. ಬೆಂಗಳೂರು :ರೇಣುಕಾಸ್ವಾಮಿ ಕೊಲೆ ಕೇಸಲ್ಲಿ A2 ಆರೋಪಿಯಾಗಿರುವ ದರ್ಶನ್ ಗೆ 57ನೇ CCH ಕೋರ್ಟ್ ಜಾಮೀನು ನಿರಾಕರಿಸಿದೆ. ಈ ಹಿನ್ನಲೆಯಲ್ಲಿ ದರ್ಶನ್ ಪರ ವಕೀಲರು ಹೈಕೋರ್ಟ್ ಗೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಲಿದ್ದಾರೆ. ಅಲ್ಲಿ ತನಕ ಅಂದರೆ ಇನ್ನು 15 ದಿನಗಳ ಕಾಲ ದರ್ಶನ್ ಗೆ ಜೈಲೇ ಗತಿ!. ದರ್ಶನ್ ಪರವಾಗಿ ಸಿ.ವಿ. ನಾಗೇಶ್ ಮತ್ತು ದಿವಾಕರ್ ವಾದಿಸಿದ್ದರು. ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ದರ್ಶನ್ ನೀರ್ದೋಷಿ. ರೇಣುಕಾಸ್ವಾಮಿ ಯಾರೆಂದೇ ದರ್ಶನ್ ಗೆ ಗೊತ್ತಿಲ್ಲ. ಇದು ಪೊಲೀಸರೇ ಕಟ್ಟಿದ ಕಟ್ಟು ಕಥೆವೆಂಬುದು ದರ್ಶನ್ ಪರ ವಕೀಲರ ವಾದವಾಗಿತ್ತು. ಆದರೆ, ಕೋರ್ಟ್ ದರ್ಶನ್ ಗೆ ಸದ್ಯ ಬೇಲ್ (ನಿರೀಕ್ಷಣಾ ಜಾಮೀನು) ನಿರಾಕರಿಸಿದೆ.
























































































































































































