ನಾಯಕರ ಹೆಸರು ಹೇಳಿ ಓಟು ಕೇಳುವವರು ಗೆದ್ದ ನಂತರ ಕ್ಷೇತ್ರದ ಕಡೆ ಮುಖವೆತ್ತಿಯೂ ನೋಡುವುದಿಲ್ಲ. ನನ್ನ ಬಗ್ಗೆ ಜನರಿಗೆ ಗೊತ್ತಿದೆ. ಖಂಡಿತ ಗೆಲ್ಲಿಸುತ್ತಾರೆ : ಜಯಪ್ರಕಾಶ್ ಹೆಗ್ಡೆ.

94.8K Views 23 Mar 2024

ಉಡುಪಿ : ಉಡುಪಿ -ಚಿಕ್ಕ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಪ್ರಕಾಶ್ ಹೆಗ್ಡೆ ಅವರು ಸ್ಪರ್ಧಿಸುತ್ತಿದ್ದಾರೆ. ಮಾಧ್ಯಮಗಳ ಜೊತೆಗೆ ಈ ಬಗ್ಗೆ ಮಾತನಾಡಿದ ಅವರು, ನಾನು ಪ್ರತಿಸ್ಪರ್ಧಿ ಅಭ್ಯರ್ಥಿಯನ್ನು ಟೀಕಿಸುವುದಿಲ್ಲ. ಜನರಿಗೆ ಗೊತ್ತಿದೆ ಯಾರಿಗೆ ಓಟು ಕೊಡಬೇಕು. ಯಾರನ್ನು ಗೆಲ್ಲಿಸಬೇಕೆಂಬ ಸ್ಪಷ್ಟತೆ. ನನಗೆ ನಾಯಕರ ಹೆಸರಲ್ಲಿ ಓಟು ಕೇಳಬೇಕಾದ ಅನಿವಾರ್ಯತೆ ಇಲ್ಲ. ನಾನು ಇಲ್ಲಿ ಒಂದು ಅವಧಿಗೆ ಸಂಸದನಾಗಿದ್ದೆ. ವಾರಾಹಿ ಯೋಜನೆ ಸೇರಿದಂತೆ ಅಭಿವೃದ್ಧಿ ಕೆಲಸ ಮಾಡಿದ್ದೆ. ನಾನು ಬಂಟನೆಂದ ಮಾತ್ರಕ್ಕೆ ಬಂಟರೆಲ್ಲರೂ ಓಟು ಹಾಕುತ್ತಾರೆಂಬ ಗ್ಯಾರಂಟಿ ಇಲ್ಲ. ಅವರಿಗೆ ಬಿಲ್ಲವರೆಲ್ಲರೂ ಓಟು ಹಾಕುತ್ತಾರೆಂದು ಹೇಳಲಾಗುವುದಿಲ್ಲ. ಜಾತಿ ರಾಜಕೀಯ ಇಲ್ಲಿ ನಡೆಯವುದಿಲ್ಲ. ನಾನು ಜಾತ್ಯತೀತ ರಾಜಕಾರಣಿ. ಇಲ್ಲಿನ ಜನ ನನ್ನನ್ನು ಒಪ್ಪಿದ್ದಾರೆ. ನನ್ನ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿದೆ. ನನಗೆ ಇನ್ನೊಬ್ಬರ ಹೆಸರಲ್ಲಿ ಓಟು ಕೇಳುವ ಅಗತ್ಯತೆ ಬೀಳುವುದಿಲ್ಲ.ನಾಯಕರ ಹೆಸರಲ್ಲಿ ಓಟು ಕೇಳುವವರು ಗೆದ್ದ ನಂತರ ಕ್ಷೇತ್ರದ ಕಡೆಗೆ ಮುಖವೆತ್ತಿಯೂ ನೋಡುವುದಿಲ್ಲವೆಂದು ಜಯಪ್ರಕಾಶ್ ಹೆಗ್ಡೆ ಟೀಕಿಸಿದರು

Read More News

Scroll to Top