ಇತ್ತೀಚೆಗೆ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಅವರ ಸಾಧನೆ ಸಹಿತ ಪರಿಚಯವನ್ನು Mp mlas news tv ಅಂತರ ಜಾಲ ಸುದ್ದಿ ಮಾಧ್ಯಮದಲ್ಲಿ ಪ್ರಕಟಿಸಲಾಗಿತ್ತು. ಈ ಬಗ್ಗೆ mp mlas news ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್ ಅವರೊಂದಿಗೆ ಮಾತನಾಡಿದ ಸಂತೋಷ್ ಶೆಟ್ಟಿಯವರು ತನ್ನ ಸಾಧನೆಗೆ ಸ್ಫೂರ್ತಿ ತುಂಬಿದವರಲ್ಲಿ ಉಪೇಂದ್ರ ಶೆಟ್ಟಿಯವರು ಪ್ರಮುಖರು. ಅವರು ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಅನನ್ಯವಾಗಿದೆ. ಬೆಂಗಳೂರಿನಲ್ಲಿ ಯೂನಿವರ್ಸಲ್ ಕೋಚಿಂಗ್ ಸೆಂಟರ್ ಎನ್ನುವ ಜನಪ್ರಿಯ ಶಿಕ್ಷಣ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿರುವ ಅವರು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುವ ಮಹಾನ್ ವಿದ್ಯಾ ದಾನಿಯೆಂದು ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ಉಪೇಂದ್ರ ಶೆಟ್ಟಿಯವರ ಕುರಿತಾಗಿ mp mlas news ನಲ್ಲಿ 4 ವರ್ಷಗಳ ಹಿಂದೆಯೇ ನೇರ ನಡೆ ನುಡಿಯ ನಿರ್ಭಿತ ನಾಯಕ, ದಾನ ಶೂರ ಕರ್ಣನೆಂದು ಬೆಳಕು ಚೆಲ್ಲಿದ್ದನ್ನು mp mla’s ನ್ಯೂಸ್ ಸಂಪಾದಕರು ನೆನಪಿಸಿಕೊಂಡರು. ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಅವರು ಸಾಧನೆಯ ಹಾದಿಯಲ್ಲಿ ಕಠಿಣ ಪರಿಶ್ರಮದಲ್ಲಿ ಸಾಗಿ ಯಶಸ್ಸು ಸಾಧಿಸಿದ್ದಾರೆ. ಆದರೆ, ಅವರಿಗೆ ಸ್ಫೂರ್ತಿಯಾದ ಬಂಟ ನಾಯಕರನ್ನು ಅವರು ಮರೆತಿಲ್ಲ. ಅದು ಅವರ ದೊಡ್ಡ ಗುಣ. ಇದು ಎಲ್ಲರಿಗೂ ಬರುವುದಿಲ್ಲ. ಸಂತೋಷ್ ಶೆಟ್ಟಿಯವರು ಉಪೇಂದ್ರ ಶೆಟ್ಟಿಯವರಂತೆ ದೂರಗಾಮಿ ನಾಯಕ, ನೇರ ನಡೆ ನುಡಿಯ ಸ್ವಚ್ಛ ಮನಸ್ಸಿನ ಸಮಾಜ ಸೇವಕ ಮತ್ತು ಬಡವರ ಬಂಧು.
























































































































































































