ಅಯೋಧ್ಯೆ: ಧರ್ಮದರ್ಶಿ ಮತ್ತು ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ತನ್ನ ಸುಪುತ್ರ ದೇವಪ್ರಸಾದ್ ಪುನರೂರು ಅವರ ಜತೆಗೆ ಅಯೋಧ್ಯೆಗೆ ತೆರಳಿ, ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದಲ್ಲಿ ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಮಂಡಲೋತ್ಸವದಲ್ಲಿ ರಾಮ ತಾರಕ ಯಜ್ಞ ಹಾಗೂ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡರು.

ಈ ಹಿಂದೆ ಹರಿಕೃಷ್ಣ ಪುನರೂರು ಅವರು ನೇಪಾಳದ ಪಶುಪತಿ ದೇವಸ್ಥಾನ, ವಾರಣಾಸಿ, ಬದರಿನಾಥ, ಕೇದರನಾಥ, ಕೈಲಾಸ, ಮಾನಸ ಸರೋವರ ಮೊದಲಾದ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು.

























































































































































































