ಅಡ್ಡೂರು: ಶ್ರೀ ಈಶ್ವರೀ ಭಜನಾ ಮಂಡಳಿಯ ದಶಮ ಸಂಭ್ರಮವು ಫೆಬ್ರವರಿ 6 ರಿಂದ 8 ರವರೆಗೆ ಶ್ರೀ ಮುಖ್ಯ ಪ್ರಾಣ ದೇವಸ್ಥಾನ ದಲ್ಲಿ ನಡೆಯಲಿದೆ. ಫೆಬ್ರವರಿ 6 ರಂದು ಸಂಜೆ 5 ಗಂಟೆಗೆ ಕಾಂಜಿಲ ಕೋಡಿ ನಮ್ಮ ಮಂಡಳಿ ಯಿಂದ ಮೆರವಣಿಗೆ ಮೂಲಕ ಶ್ರೀ ಮುಖ್ಯ ಪ್ರಾಣ ದೇವರಿಗೆ ರಜತ ಗದೆ ಸಮರ್ಪಣೆ ನಡೆಯಲಿದೆ. ಅದೇ ದಿನ ಸಂಜೆ 6:30 ರಿಂದ ಏಕಹಾ ಭಜನಾ ಪ್ರಾರಂಭವಾಗಿ ಮರುದಿನ ಸಂಜೆ ಸೂರ್ಯಾಸ್ತ ದವರೆಗೆ ಭಜನಾ ಮಂಗಳೋತ್ಸವ ಸಮಾಪ್ತಿ ಗೊಳ್ಳಲಿದೆ. ಫೆಬ್ರವರಿ 7 ರಂದು ಶ್ರೀ ಮುಖ್ಯ ಪ್ರಾಣ ದೇವರಿಗೆ 108 ಸೀಯಾಳ ಅಭಿಷೇಕ, ಪವನಮಾನ ಅಭಿಷೇಕ, ಪವಮಾನ ಹೋಮ, ರಂಗಪೂಜೆ ಯು ನಡೆಯಲಿದೆ. ಫೆಬ್ರವರಿ 8 ರಂದು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ಅಂತರ್ ಜಿಲ್ಲಾ ಮಟ್ಟದ ಹಾಗೂ ಗ್ರಾಮೀಣ ಮಟ್ಟದ ಕುಣಿತ ಭಜನಾ ಸ್ಪರ್ಧೆ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ನಡೆಯುವ ಉದ್ಘಾಟನೆ ಸಮಾರಂಭದಲ್ಲಿ ದ್ವೀಪ ಪ್ರಜ್ವಲನೆ ಯನ್ನು ಮಾಧವ ಭಟ್ ಪೊಳಲಿ, ಚಂದ್ರಶೇಖರ ಭಟ್ ನಡು ಮನೆ ನೆರೆವೇರಿಸಲ್ಲಿದ್ದಾರೆ. ಆಶೀರ್ವಾಚನವನ್ನು ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕಾ ಚೈತನ್ಯಾನಂದ ಸ್ವಾಮೀಜಿ, ನಳಿನ್ ಕುಮಾರ್ ಕಟೀಲ್, ರವಿಶಂಕರ್ ರಾವ್ ನೂಯಿ, ಧನಂಜಯ್ ಭಟ್ ಗಂದಾಡಿ, ನೂಯಿ ಬಾಲಕೃಷ್ಣ ರಾವ್, ಯಶವಂತ್ ಕುಮಾರ್ ಶೆಟ್ಟಿ, ವೆಂಕಟೇಶ್ ನಾವಡ ಪೊಳಲಿ, ಗುಣಾಕರ ಎಂ ಸಾಲ್ಯಾನ್, ಜಿ. ಎಂ ಉದಯಭಟ್, ನವೀನ್ ಮೂಡು ಶೆಡ್ಡೆ, ಪವನ್ ಆಮೀನ್ ಬರ್ಕೆ,ಮತ್ತಿತರು ಭಾಗವಹಿಸಿಲಿದ್ದಾರೆ. ಸಂಜೆ 6 ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಾಚನ ನೀಡಲಿದ್ದಾರೆ. ಅಧ್ಯಕ್ಷತೆ ಯನ್ನು ಶಾಸಕರಾದ ವೈ. ಭರತ್ ಶೆಟ್ಟಿಯವರು ವಹಿಸಲ್ಲಿದ್ದಾರೆ..ದಾಮೋದರ ಶರ್ಮರವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.. ಮುಖ್ಯ ಅತಿಥಿಯಾಗಿ ಸಂಸದ ರಾದ ಬ್ರಿಜೇಶ್ ಚೌಟ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ,ಮಾಜಿ ಸಚಿವರಾದ ರಮಾನಾಥ ರೈ, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು, ಶ್ರೀ ಮುಖ್ಯ ಪ್ರಾಣ ದೇವಸ್ಥಾನದ ವ್ಯವಸ್ಥಾನ ಸಮಿತಿಯ ಅಧ್ಯಕ್ಷರಾದ ಹರಿಶ್ಚಂದ್ರ ಆಮೀನ್ ಬರ್ಕೆ, ಮಾದುಕೋಡಿ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯ ದ ವಿಜಯ ಸುವರ್ಣ ಗುರೂಜಿ, ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಓಂ ಪ್ರಕಾಶ್ ಶೆಟ್ಟಿ, ಲಂಚು ಲಾಲ್ ಕೆ ಎಸ್, ಚಂದ್ರಹಾಸ್ ಪಲ್ಲಿಪಾಡಿ, ಭುವನೇಶ್ ಪಚಿನಡ್ಕ, ಚಂದ್ರಹಾಸ್ ನಾರಾಳ, ಕಿರಣ್ ಪಕ್ಕಳ ಪೆರ್ಮೆoಕಿ ಗುತ್ತು, ಬಜಪೆ ಪೊಲೀಸ್ ನಿರೀಕ್ಷಕ ರಾದ ಸಂದೀಪ್ ಜಿ ಎಸ್, ಸಂತೋಷ್ ಶೆಟ್ಟಿ ಕಾಂಜಿಲ ಕೋಡಿ ಭಾಗವಹಿಸಲ್ಲಿದ್ದಾರೆ.


























































































































































































