ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಸರಕಾರಿ ಆಸ್ಪತ್ರೆಗಳಲ್ಲಿ ರೇಬಿಸ್ ತಡೆಗಟ್ಟಲು ನೀಡುವ ERIG ಇಂಜೆಕ್ಷನ್ ಕಳಪೆ ಗುಣಮಟ್ಟದ ಔಷಧವಲ್ಲ -ಡಿಎಂಒ ಡಾ. ಶಿವಪ್ರಕಾಶ್ ಸ್ಪಷ್ಟನೆ. ಅದು ಓಕೆ, ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಬೆಲೆ ಬಾಳುವ ರಿಸ್ಕ್ ರಹಿತ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್ ಗಳ ಬಳಕೆಗೆ mpmlasnewstv ಒತ್ತಾಯ

ಸರ್ಕಾರಿ ಆಸ್ಪತ್ರೆಗಳಲ್ಲಿ ಬಳಸಲಾಗುವ Equine Rabies Immunoglobulin (ERIG) ಯಾವುದೇ ರೀತಿಯ ಕಳಪೆ ಗುಣಮಟ್ಟದ ಔಷಧವಲ್ಲ. ಇದು ಭಾರತ ಸರ್ಕಾರದ ನಿಯಮಾನುಸಾರ ಗುಣಮಟ್ಟ ಪರೀಕ್ಷೆಗೊಳಪಟ್ಟು ಅನುಮೋದಿತವಾಗಿರುವ ಸುರಕ್ಷಿತ ಹಾಗೂ ಪರಿಣಾಮಕಾರಿ ಔಷಧವಾಗಿದೆ.ERIG ನೀಡಿದ ನಂತರ ಅಪರೂಪದಲ್ಲಿ ಅಲರ್ಜಿ ಅಥವಾ ತೀವ್ರ ಅಲರ್ಜಿ (Anaphylaxis) ಉಂಟಾಗುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ರೋಗಿಯನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಕೆಲವು ಸಮಯ ಇರಿಸುವುದು ಉತ್ತಮ ವೈದ್ಯಕೀಯ ಪದ್ಧತಿಯಾಗಿದೆ. ಅಗತ್ಯವಿದ್ದಲ್ಲಿ ಹೆಚ್ಚಿನ ಅವಧಿಯ ನಿಗಾ ವಹಿಸುವ ನಿರ್ಧಾರವನ್ನು ರೋಗಿಯ ಆರೋಗ್ಯ ಸ್ಥಿತಿ ಹಾಗೂ ವೈದ್ಯರ ವೈದ್ಯಕೀಯ ನಿರ್ಧಾರದ ಆಧಾರದ ಮೇಲೆ ಕೈಗೊಳ್ಳಲಾಗುತ್ತದೆ. ರೋಗಿಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬೆಳಗಿನ ವೇಳೆಯಲ್ಲಿ ERIG ಪಡೆದ ರೋಗಿಗೆ ಮೇಲ್ವಿಚಾರಣೆಯ ನಂತರ ಯಾವುದೇ ತೊಂದರೆ ಇಲ್ಲದಿದ್ದರೆ ಅದೇ ದಿನ ಮನೆಗೆ ತೆರಳಲು ಅವಕಾಶ ನೀಡಲಾಗುತ್ತದೆ. ಆದರೆ ಸಂಜೆಯ ವೇಳೆಯಲ್ಲಿ ERIG ಪಡೆದ ರೋಗಿಗಳಲ್ಲಿ, ವಿಶೇಷವಾಗಿ ಮಕ್ಕಳಲ್ಲಿ, ರಾತ್ರಿ ವೇಳೆ ಯಾವುದೇ ತುರ್ತು ತೊಂದರೆ ಉಂಟಾದರೆ ತಕ್ಷಣ ಚಿಕಿತ್ಸೆ ನೀಡಲು ಅನುಕೂಲವಾಗುವ ದೃಷ್ಟಿಯಿಂದ ವೈದ್ಯರ ವಿವೇಚನೆಯಂತೆ ಮರುದಿನದವರೆಗೆ ಆಸ್ಪತ್ರೆಯಲ್ಲೇ ಮೇಲ್ವಿಚಾರಣೆಯಲ್ಲಿ ಇರಿಸಬಹುದು. ಇದು ರೋಗಿಯ ಸುರಕ್ಷತೆಯನ್ನು ಹೆಚ್ಚಿಸುವ ಮುನ್ನೆಚ್ಚರಿಕಾ ಕ್ರಮವಾಗಿದ್ದು, ಔಷಧದ ಗುಣಮಟ್ಟಕ್ಕೆ ಸಂಬಂಧಪಟ್ಟ ವಿಷಯವಲ್ಲ.ಆದ್ದರಿಂದ, ERIG ನೀಡಿದ ನಂತರ ರೋಗಿಯನ್ನು ವೈದ್ಯಕೀಯ ನಿಗಾದಲ್ಲಿ ಇರಿಸುವುದು ಔಷಧದ ಗುಣಮಟ್ಟ ಕಳಪೆಯಾಗಿದೆ ಎಂಬುದಕ್ಕೆ ಸಾಕ್ಷಿಯಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವ ERIG ಸುರಕ್ಷಿತ, ಪರಿಣಾಮಕಾರಿ ಮತ್ತು ರೇಬಿಸ್ ತಡೆಗಟ್ಟುವಲ್ಲಿ ಅತ್ಯಂತ ಪ್ರಮುಖವಾದ ಚಿಕಿತ್ಸೆಯಾಗಿದೆ ಎಂದು ವೆನ್ ಲಾಕ್ ಆಸ್ಪತ್ರೆ ಡಿಎಂಒ ಡಾ. ಶಿವಪ್ರಕಾಶ್ ಅವರು ಸ್ಪಷ್ಟನೆ ನೀಡಿದ್ದಾರೆ.ಇತ್ತೀಚಿಗೆ mpmlasnewstvಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಕಳಪೆ ಗುಣ ಮಟ್ಟದ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್ ಕೊಡಲಾಗುತ್ತದೆ. ಇದರಿಂದ ಮಕ್ಕಳು 24ಗಂಟೆ ಐಸಿಯುನಲ್ಲಿ ಇರಬೇಕಾಗುತ್ತದೆ ಎಂದು ವರದಿ ಪ್ರಕಟಿಸಲಾಗಿತ್ತು. ಅದನ್ನು ಡಿಎಂಒ ಅವರು ಅಲ್ಲಗಳೆದು ಮೇಲಿನ ವಿವರಣೆ ಕಳುಹಿಸಿದ್ದಾರೆ. ಆದರೆ, ಸಂಪಾದಕರ ಮಗನಿಗೆ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್ ಕೊಡಲು ಬಂದಾಗ 24 ಗಂಟೆ ಐಸಿಯುನಲ್ಲಿ ಇರಬೇಕಾಗುತ್ತದೆ ಎಂದು ಸರಕಾರಿ ಮಕ್ಕಳ ಆಸ್ಪತ್ರೆ ವೈದ್ಯರು ತಿಳಿಸಿದ್ದರು.ಅಲ್ಲಿ ರಿಸ್ಕ್ ಬೇಡವೆಂದು ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ಮಗನಿಗೆ 4,200 ರೂಪಾಯಿ ಬೆಲೆಯ ಇಂಜೆಕ್ಷನ್ ಕೊಟ್ಟಾಗ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಕೇವಲ ಅರ್ಧ ಗಂಟೆ ಮಾತ್ರ ಆಸ್ಪತ್ರೆಯಲ್ಲಿ ಕೂರಿಸಿ ಸುರಕ್ಷಿತವಾಗಿ ಮನೆಗೆ ಕಳುಹಿಸಲಾಯಿತು. ಅದು ಹೇಗೆ ಸಾಧ್ಯವೆಂದು ವಿಚಾರಿಸಿದಾಗ ಸರಕಾರಿ ಆಸ್ಪತ್ರೆಗಳಲ್ಲಿ ಇಂಥ ದುಬಾರಿ ಇಂಜೆಕ್ಷನ್ ಗಳನ್ನು ಇರಿಸಲು ಸಾಧ್ಯವಿಲ್ಲವೆಂದು ಖ್ಯಾತ ಮಕ್ಕಳ ತಜ್ಞರಾದ ಡಾ. ಸಂತೋಷ್ ಟಿ. ಸೋನ್ಸ್, ಡಾ. ಸುಧಾಕರ್ ಶೆಟ್ಟಿ ಸೇರಿದಂತೆ ಹಲವು ಮಂದಿ ವೈದ್ಯರು ಹೇಳಿದರು. ಈಗಿನ ಡಿಎಂಒ ಡಾ. ಶಿವಪ್ರಕಾಶ್ ಮತ್ತು ಜಿಲ್ಲಾ ಅರೋಗ್ಯ ಅಧಿಕಾರಿ ಡಾ. ತಿಮ್ಮಯ್ಯ ಅವರು ಪ್ರಾಮಾಣಿಕ, ಸಮರ್ಥ, ದಕ್ಷ ವೈದ್ಯಾಧಿಕಾರಿಗಳು. ಇವರ ಅವಧಿಯಲ್ಲಿ ವೆನ್ ಲಾಕ್ ಆಸ್ಪತ್ರೆ ಉತ್ತಮವಾಗಿದೆ ಮತ್ತು ಅರೋಗ್ಯ ಇಲಾಖೆ ಸಮರ್ಪಕವಾಗಿ, ಕ್ಷಿಪ್ರಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.ಈ ಇಬ್ಬರು ಅಧಿಕಾರಿಗಳು ಬರೇ ಸಂಬಳವನ್ನೇ ನಂಬಿ ಕೆಲಸ ಮಾಡುವ ನಮ್ಮ ಜಿಲ್ಲೆಯ ಹೆಮ್ಮೆ ಅಧಿಕಾರಿಗಳು ಎಂಬುದು mpmlasnewstv ಗೆ ಕಂಡು ಬಂದ ಸತ್ಯ.ಇವರಿಬ್ಬರು ಅಧಿಕಾರಿಗಳು ಇಂಜೆಕ್ಷನ್ ರಿಸ್ಕ್ ಕಡಿಮೆ ಮಾಡುವ ಹಿತದೃಷ್ಟಿಯಿಂದ ಈ ಬಗ್ಗೆ ಅರೋಗ್ಯ ಸಚಿವ ಡಾ. ಯು. ಟಿ. ಖಾದರ್ ಅವರ ಗಮನಕ್ಕೆ ತಂದು ಸರಕಾರಿ ಆಸ್ಪತ್ರೆಗಳಲ್ಲಿ ಕೂಡಾ ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ದುಬಾರಿ ಬೆಲೆಯ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್ ಗೆ ಶಿಫಾರಸ್ಸು ಮಾಡಿ ಇಂಜೆಕ್ಷನ್ ರಿಸ್ಕ್ ನ್ನು ಕಡಿಮೆ ಮಾಡಿಸುವಂತೆ mpmlasnewstv ಒತ್ತಾಯಿಸುತ್ತದೆ. ಇದು ಆರೋಗ್ಯ ಸಚಿವರು ಮಕ್ಕಳ ಅರೋಗ್ಯ ಹಿತದೃಷ್ಟಿಯಿಂದ ಮೊದಲು ಮಾಡಬೇಕಾದ ಕರ್ತವ್ಯವೂ ಹೌದು.

ಪ್ರಾದೇಶಿಕ ವಾರ್ತೆಗಳು

ಸಾಹಿತ್ಯ ಕೃತಿಗಳಿಗೆ ಪ್ರೋತ್ಸಾಹ ಅಗತ್ಯ

ಮಹಾನಗರ: ಬಿ. ಸಂಜೀವ ಕೆ.ಬಿ. ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿರುವ ‘ಶ್ರೀ ಗುರುಚರಣಾಮೃತ’ ಹಾಗೂ ‘ತೀಯಾ ಕುಲತಿಲಕ ಕುಲರತ್ನ ಮಹಾದಾನಿ ರೋಹಿದಾಸ ಬಂಗೇರ’ ಪುಸ್ತಕ ಬಿಡುಗಡೆ ಸಮಾರಂಭ ನಗರದ ಪತ್ರಿಕಾಭವನದಲ್ಲಿ ಇತ್ತೀಚೆಗೆ ನಡೆಯಿತು.‘ಶ್ರೀ ಗುರುಚರಣಾಮೃತ’ ಪುಸ್ತಕದಲ್ಲಿ ಕೊಂಡೆವೂರು ಕ್ಷೇತ್ರ ಪರಿಚಯ ಹಾಗೂ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ಪೂರ್ವಾಶ್ರಮ, ಅವರು ಆಧ್ಯಾತ್ಮಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ವಿಷಯಗಳಿವೆ. ‘ತೀಯಾ ಕುಲತಿಲಕ ಕುಲರತ್ನ ಮಹಾದಾನಿ ರೋಹಿದಾಸ ಬಂಗೇರ’ ಪುಸ್ತಕ ರೋಹಿದಾಸ ಬಂಗೇರ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳ ವಿವರ ಒಳಗೊಂಡಿದೆ.ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ| ಹರಿಕೃಷ್ಣ ಪುನರೂರು, ಸಾಹಿತ್ಯ ಕೃತಿಗಳಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ಶುಭ ಹಾರೈಸಿದರು.ಅತಿಥಿಯಾಗಿದ್ದ ಮುಂಬಯಿಯ ಸಮಾಜ ಸೇವಕ ಶಂಕರ ಸುವರ್ಣ, ತೀಯಾ ವೆಲ್ಫೇರ್ ಸ್ಥಾಪಕ ಅಧ್ಯಕ್ಷ ಗೋವಿಂದ ಮಂಜೇಶ್ವರ ಮಾತನಾಡಿದರು.ಎರಡೂ ಪುಸ್ತಕಗಳ ಸಂಪಾದಕ ಬಿ. ಸಂಜೀವ ಕೆ.ವಿ., ಪತ್ರಕರ್ತೆ ಮಾಲತಿ ಶೆಟ್ಟಿ ಮಾಣೂರು ಉಪಸ್ಥಿತರಿದ್ದರು.ಜಯಂತಿ ಸುವರ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಧಾರ್ಮಿಕ ಸಾಮಾಜಿಕ ಮುಂದಾಳು ಎನ್ ಟಿ ರೈ ಯವರಿಗೆ ಶ್ರದ್ದಾಂಜಲಿ ಸಭೆ

ಮುಡಿಪು :ಆನೆಕಲ್ಲು ಛತ್ರ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ದಾರ, ಬ್ರಹ್ಮಕಲಶ ಹಾಗೂ ಸಭಾಂಗಣ ಇತ್ಯಾದಿಗಳ ನಿರ್ಮಾಣದಲ್ಲಿ ನಾನಿಲ್ತಡಿ ತಿಮ್ಮಪ್ಪ ರೈ ಯವರ ಪಾತ್ರ ಹಿರಿದಾಗಿದೆ.ಧಾರ್ಮಿಕ ಕರ‍್ಯಗಳಲ್ಲಿ ಅಪಾರ ಶ್ರದ್ದೆಯಿದ್ದ ಅವರು ಹಲವಾರು ದಾನಿಗಳನ್ನು ಜೋಡಿಸಿಕೊಂಡು ರಾತ್ರಿ ಹಗಲೆನ್ನದೆ ದುಡಿದು ಪ್ರತಿಫಲವಾಗಿ ಇಂತಹ ಸುಂದರ ದೇವಸ್ಥಾನ ನಿರ್ಮಾಣವಾಗಿದೆ ಎಂದು ನಿವೃತ್ತ ಶಿಕ್ಷಕ ಎಸ್.ಎನ್ ಭಟ್ ಹೇಳಿದ್ದಾರೆ.ಅವರು ಇತ್ತೀಚೆಗೆ ನಿಧನರಾದ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾದ ಎನ್.ಟಿ.ರೈ ಯವರಿಗೆ ನುಡಿನಮನ ಸಲ್ಲಿಸಿ ಮಾತನಾಡುತ್ತಿದ್ದರು.ಪತ್ರಕರ್ತ ಶಶಿಧರ್ ಪೊಯ್ಯತ್ತಬೈಲ್ ಮಾತನಾಡಿ ಟೀಕೆಗಳನ್ನು ಮೂಟೆಕಟ್ಟಿ ಅದರ ಮೇಲೆ ನಿಂತು ತಮ್ಮ ಕರ್ತವ್ಯ ನಿರ್ವಹಿಸಿದಾಗ ಯಶಸ್ಸು ಸಾಧ್ಯ ಎಂಬುದಕ್ಕೆ ಎನ್ ಟಿ ರೈ ಸದಾ ಮಾದರಿಯಾಗಿದ್ದರು ಎಂದರು.ಈ ಸಂದರ್ಭದಲ್ಲಿ ದೇವಸ್ಥಾನ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದ ಎನ್ ಆರ್ ಐ ಮಲ್ಲಿಕಾ ಆರ್ ಚೌಟ ಅವರ ಸಂದೇಶ ವಾಚಿಸಲಾಯಿತು.ಆಡಳಿತ ಮೊಕ್ತೇಸರರಾದ ಕೃಷ್ಣನಾಯ್ಕ ಸೊಡಂಕೂರು, ರಾಮ ನೋಂಡ, ಜಯಂತ ಗಾಂಭೀರ್ ಪಾವೂರುಗುತ್ತು. ಮಹಾಲಿಂಗ ನಾಯ್ಕ ಪಜ್ವ, ಮಾತೃ ಮಂಡಳಿ ಅಧ್ಯಕ್ಷೆ ಉಷಾ ಕಜೆ ಮುಂತಾದವರಿದ್ದರು.ಕಾರ್ತಿಕ್ ನಾಣಿಲ್ತಡಿ ಸ್ವಾಗತಿಸಿ ವಂದನಾರ್ಪಣೆಯಿತ್ತರು.

ಪ್ರಾದೇಶಿಕ ವಾರ್ತೆಗಳು

ಆರೋಗ್ಯ ಸಚಿವರ ತವರೂರು ಮಂಗಳೂರಿನ ವೆನ್ ಲಾಕ್ ಬಳಿಯ ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕಳಪೆ ಗುಣಮಟ್ಟದ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್. ರೇಬಿಸ್ ತಡೆಗಟ್ಟುವ ಈ ಇಂಜೆಕ್ಷನ್ ಚುಚ್ಚಿದರೆ ಅಂಥ ಮಕ್ಕಳು 24 ಗಂಟೆ ಐಸಿಯುನಲ್ಲಿ ಇರಬೇಕು. ತುಂಬಾ ರಿಸ್ಕ್. ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಆರೋಗ್ಯ ಸಚಿವರೇ ಉತ್ತರ ನೀಡಬೇಕು. ಖಾದರ್ ಸಾಹೇಬ್ರೆ, ಬಡ ಮಕ್ಕಳು ಏನು ತಪ್ಪು ಮಾಡಿದ್ದಾರೆ. ಅವರಿಗೇಕೆ ಇಂಥ ಕಳಪೆ ಇಂಜೆಕ್ಷನ್?

ಪ್ರತ್ಯಕ್ಷ ವರದಿ:ಡಾ. ಅಶೋಕ್ ಶೆಟ್ಟಿ ಬಿ. ಎನ್.ಮಂಗಳೂರು: ಮಂಗಳೂರಿನ ವೆನ್ಲಾಕ್ ಬಳಿಯ ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ, ಸಿಬ್ಬಂದಿಗಳ ಕಾರ್ಯವೈಖರಿ, ಶುಚಿತ್ವ ಉತ್ತಮವಾಗಿದ್ದರೂ ಇಲ್ಲಿರುವ ರೇಬಿಸ್ ಚುಚ್ಚುಮದ್ದುವೊಂದರ ಬಗ್ಗೆ mpmlasnewstvಗೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ. ಇಲ್ಲಿ ಮಕ್ಕಳಿಗೆ ರೇಬಿಸ್ ತಡೆಗಟ್ಟುವ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್ ಕೊಟ್ಟರೆ 24 ಗಂಟೆ ಐಸಿಯುನಲ್ಲಿ ತೀವ್ರ ನಿಗಾದಲ್ಲಿ ಇರಬೇಕಾಗುತ್ತದೆ. ಯಾಕೆಂದರೆ, ಇದು ಕಳಪೆ ಗುಣ ಮಟ್ಟದ್ದಾಗಿದ್ದು ಇಂಜೆಕ್ಷನ್ ಕೊಟ್ಟ ಮೇಲೆ ಮಕ್ಕಳನ್ನು ಐಸಿಯುನಲ್ಲಿ ತೀವ್ರ ನಿಗಾದಲ್ಲಿ ಇರಿಸಲಾಗುತ್ತದೆ. ಆದರೆ, ಖಾಸಗಿ ಆಸ್ಪತ್ರೆಯಲ್ಲಿ ಇದೇ 2 ಇಂಜೆಕ್ಷನ್ ಗೆ 4,200 ರೂಪಾಯಿ ತನಕ ರೇಟ್ ಇರುತ್ತದೆ. ಆದರೆ,ಇದು ಉತ್ತಮ ಗುಣಮಟ್ಟದ್ದು ಆಗಿದ್ದು ಯಾವುದೇ ಅಪಾಯವಿಲ್ಲ. ಇಂಜೆಕ್ಷನ್ ಕೊಟ್ಟು ಅರ್ಧ ಗಂಟೆ ನಂತರ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಬಹುದಾಗಿದೆ. ಉಚಿತವೆಂದು ಸರಕಾರಿ ಆಸ್ಪತ್ರೆಗೆ ಹೋದರೆ ಮಕ್ಕಳ ಆರೋಗ್ಯದಲ್ಲಿ ಚೆಲ್ಲಾಟವಾಡುತ್ತಾರೆ. ನಮ್ಮ ಆರೋಗ್ಯ ಸಚಿವರಿಗೆ ಈ ಸಣ್ಣ ವಿಷಯ ಗೊತ್ತಿಲ್ಲವೇ. ಅವರೇಕೆ ಸುಮ್ಮನಿದ್ದಾರೆ. 2ನೇ ಬಾರಿಗೆ ಆರೋಗ್ಯ ಸಚಿವರಾಗಿರುವ ಡಾ. ಯು.ಟಿ. ಖಾದರ್ ಅವರ ತವರೂರು ಮಂಗಳೂರಿನ ವೆನ್ಲಾಕ್ ಬಳಿಯ ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ಈ ರೀತಿಯ ಅವ್ಯವಸ್ಥೆಗಳಿದ್ದು ಖಾದರ್ ಸಾಹೇಬ್ರರ ಹೆಸರಲ್ಲಿ ಕೆಲವು ಉಳ್ಳಾಲದ ಅಬ್ಬೇಪಾರಿಗಳು ವೆನ್ ಲಾಕ್ ಸೇರಿದಂತೆ ಸರಕಾರಿ ಆಸ್ಪತ್ರೆಗಳ ಸಿಬ್ಬಂದಿಗಳಿಗೆ ಬೆದರಿಸುವುದು.ನಾವು ಈಗ ಖಾದರ್ ಗೆ ಫೋನ್ ಮಾಡುತ್ತೇವೆ ಎಂದು ಶೋ ಮಾಡುವುದನ್ನು mpmlasnewstv ಪ್ರತ್ಯಕ್ಷವಾಗಿ ಕಂಡಿದೆ ಸರಕಾರ ಯಾಕೆ ಇಂತಹ ಕಳಪೆ ಇಂಜೆಕ್ಷನ್ ನ್ನು ಬಡ ಮಕ್ಕಳಿಗೆ ನೀಡಲು ಶಿಫಾರಸ್ಸು ಮಾಡಿದೆ. ಗ್ಯಾರಂಟಿಗೆ ಹಣವಿಲ್ಲವೆಂದು ಉಳಿತಾಯವೇ. ಖಾದರ್ ಸಾಹೇಬ್ರೇ, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಬಡ ಮಕ್ಕಳನ್ನು ಅರೋಗ್ಯದ ವಿಷಯದಲ್ಲಿ ತಾರತಮ್ಯ ಮಾಡುವುದನ್ನು, ನಿಮ್ಮ ಹೆಸರಲ್ಲಿ ಕೆಲ ಚೇಲಾಗಳು ಸಿಬ್ಬಂದಿಗಳಿಗೆ ಬೆದರಿಸಿ ದರ್ಬಾರ್ ಮಾಡುವುದನ್ನು ನಿಲ್ಲಿಸಲು ಎಚ್ಚರಿಕೆ ನೀಡಿ.

ಪ್ರಾದೇಶಿಕ ವಾರ್ತೆಗಳು

ನಿಧನ

ಮಂಗಳೂರು :ಬಂಟ್ವಾಳದ ವಾಮದಪದವು ನಿವಾಸಿ ಹಾಗೂ ಉದ್ಯಮಿ ಎಡ್ಕಂಡ್ ಡಿ’ಸೋಜಾ (ಬಾಬ್ಬಿ ದಟ್ಟು) (79 ವರ್ಷ) ಹೃದಯಾಘಾತದಿಂದ ಜುಲೈ 8ರಂದು ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಶ್ರೀಯುತರ ನಿಧನಕ್ಕೆ ಮಂಗಳೂರಿನ ಜಾಹೀರಾತು ಸಂಸ್ಥೆ ಫೋರ್ ವಿಂಡ್ಸ್‌ನ ನಿರ್ದೇಶಕರಾದ ಎಲಿಯಾಸ್ ಫೆನಾರ್ಂಡಿಸ್ ಅವರು ಸಂತಾಪ ಸೂಚಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

The prestigious Mavericks summer Nationals 2026

The prestigious Mavericks Summer Nationals 2026 will be held from 4th June 2026 to 13 th June 2026 at St. Sebastian Centenary Auditorium, Mangaluru. The tournament is organised by the Karavali Bridge Association, Mangaluru under the aegis of The Bridge Federation of India and Karnataka State Bridge Association. This prestigious Annual National Championship is expected to witness 450 participants from across India and from Poland, Mr Buras Krzysztof Jerzy, a world champion along with Mr Dominic Filopowicz, Mr Jakob Pathrehua and Mr Patrik Pathrehua. This event has put Mangaluru on the Bridge Map of India and the World too. Mangaluru’s connectivity to airport and rail travel and also the excellent hospitality it offers with delectable cuisine was the perfect choice for the Bridge Federation of India to have the National Tournament here. The organising Secretary Mr Derek Rego has left no stone unturned to make all the arrangements . Mrs Marjorie Texeira, the President of Karavali Bridge Association, Mangaluru mentioned that the game of Bridge which is a mind sport is being played in Mangaluru for over 60 years. Presently the number of players in Mangaluru has reduced considerably as the present generation is not keen to learn this sport. She hopes that the youth of this city takes interest to learn and play this game as it is part of Asian and Common Wealth Games.

ಪ್ರಾದೇಶಿಕ ವಾರ್ತೆಗಳು

ಮ್ಯಾವೆರಿಕ್ಸ್ ಸಮರ್ ನ್ಯಾಷನಲ್ 2026 ಬ್ರಿಡ್ಜ್ ಪಂದ್ಯಾವಳಿ 2026

ಪ್ರತಿಷ್ಠಿತ ‘ಮ್ಯಾವೆರಿಕ್ಸ್ ಸಮರ್ ನ್ಯಾಷನಲ್ಸ್ 2026’ (Mavericks Summer Nationals 2026) ಬ್ರಿಡ್ಜ್ ಪಂದ್ಯಾವಳಿಯು 2026ರ ಜೂನ್ 4 ರಿಂದ ಜೂನ್ 13 ರವರೆಗೆ ಮಂಗಳೂರಿನ ಸೆಂಟ್ ಸೆಬಾಸ್ಟಿಯನ್ ಸೆಂಟಿನರಿ ಸಭಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯನ್ನು ಭಾರತೀಯ ಬ್ರಿಡ್ಜ್ ಫೆಡರೇಷನ್ (Bridge Federation of India) ಮತ್ತು ಕರ್ನಾಟಕ ರಾಜ್ಯ ಬ್ರಿಡ್ಜ್ ಅಸೋಸಿಯೇಷನ್ ತತ್ವಾವಧಾನದಲ್ಲಿ, ಮಂಗಳೂರಿನ ಕರಾವಳಿ ಬ್ರಿಡ್ಜ್ ಅಸೋಸಿಯೇಷನ್ ಆಯೋಜಿಸಿದೆ. ಈ ಪ್ರತಿಷ್ಠಿತ ವಾರ್ಷಿಕ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾರತದಾದ್ಯಂತ ಹಾಗೂ ಪೋಲೆಂಡ್‌ನಿಂದ ವಿಶ್ವ ಚಾಂಪಿಯನ್ ಆಗಿರುವ ಶ್ರೀ ಬುರಾಸ್ ಕ್ರಿಸ್ತೋಫ್ ಜೆರ್ಜಿ, ಶ್ರೀ ಡೊಮಿನಿಕ್ ಫಿಲೋಪೋವಿಚ್, ಶ್ರೀ ಜಾಕೋಬ್ ಪಾತ್ರೆಹುವಾ ಮತ್ತು ಶ್ರೀ ಪ್ಯಾಟ್ರಿಕ್ ಪಾತ್ರೆಹುವಾ ಸೇರಿದಂತೆ ಸುಮಾರು 450ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ಕ್ರೀಡಾಕೂಟವು ಮಂಗಳೂರನ್ನು ಭಾರತದ ಮತ್ತು ವಿಶ್ವದ ಬ್ರಿಡ್ಜ್ ನಕಾಶೆಯಲ್ಲಿ ಗುರುತಿಸುವಂತೆ ಮಾಡಿದೆ. ಮಂಗಳೂರಿನ ಉತ್ತಮ ವಿಮಾನ ಹಾಗೂ ರೈಲು ಪ್ರಯಾಣದ ಸಂಪರ್ಕ ವ್ಯವಸ್ಥೆ, ಅತ್ಯುತ್ತಮ ಆತಿಥ್ಯ ಮತ್ತು ಇಲ್ಲಿನ ವೈವಿಧ್ಯಮಯ ರುಚಿಕರವಾದ ಆಹಾರ ಪದ್ಧತಿಯು, ಭಾರತೀಯ ಬ್ರಿಡ್ಜ್ ಫೆಡರೇಷನ್ ಈ ರಾಷ್ಟ್ರೀಯ ಪಂದ್ಯಾವಳಿಯನ್ನು ಇಲ್ಲಿಯೇ ನಡೆಸಲು ಸೂಕ್ತ ಆಯ್ಕೆಯಾಗಿದೆ. ಪಂದ್ಯಾವಳಿಯ ಯಶಸ್ಸಿಗಾಗಿ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಡೆರೆಕ್ ರೇಗೊ ಅವರು ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಕರಾವಳಿ ಬ್ರಿಡ್ಜ್ ಅಸೋಸಿಯೇಷನ್‌ನ ಅಧ್ಯಕ್ಷರಾದ ಶ್ರೀಮತಿ ಮಾರ್ಜೋರಿ ಟೆಕ್ಸೇರಾ ಅವರು ಮಾತನಾಡಿ, “ಮನಸ್ಸಿನ ಆಟವಾಗಿರುವ (ಮೈಂಡ್ ಸ್ಪೋರ್ಟ್) ‘ಬ್ರಿಡ್ಜ್’ ಕ್ರೀಡೆಯನ್ನು ಮಂಗಳೂರಿನಲ್ಲಿ ಕಳೆದ 60 ವರ್ಷಗಳಿಂದ ಆಡಲಾಗುತ್ತಿದೆ. ಆದರೆ ಪ್ರಸ್ತುತ ತಲೆಮಾರಿನ ಯುವಕರು ಈ ಕ್ರೀಡೆಯನ್ನು ಕಲಿಯಲು ಹೆಚ್ಚಿನ ಆಸಕ್ತಿ ತೋರಿಸದ ಕಾರಣ, ಮಂಗಳೂರಿನಲ್ಲಿ ಇದರ ಆಟಗಾರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಈ ಆಟವು ಏಷ್ಯನ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನ ಭಾಗವಾಗಿರುವುದರಿಂದ, ನಗರದ ಯುವಜನತೆ ಇದನ್ನು ಕಲಿಯಲು ಮತ್ತು ಆಡಲು ಆಸಕ್ತಿ ವಹಿಸುತ್ತಾರೆ ಎಂದು ನಂಬಿದ್ದೇನೆ,” ಎಂದು ಆಶಯ ವ್ಯಕ್ತಪಡಿಸಿದರು.

ಪ್ರಾದೇಶಿಕ ವಾರ್ತೆಗಳು

ಎಂಪಿ ಎಂಎಲ್ ಎ ನ್ಯೂಸ್ ಮಹಾಪೋಷಕರಾಗಿ ಅಜಿತ್ ಕುಮಾರ್ ರೈ ಮಾಲಾಡಿ ಶುಭಾಶೀರ್ವಾದ.

ಮಂಗಳೂರು -ಎಂಪಿ ಎಂಎಲ್ ಎ ನ್ಯೂಸ್ ಮತ್ತು mpmlasnewstv 24*7 ನ್ಯೂಸ್ ಪೋರ್ಟಲ್ ನ ಮಹಾಪೋಷಕರಾಗಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ ಅವರು ಶುಭಾಶೀರ್ವಾದ ಮಾಡಿದ್ದಾರೆ. ಅವರಿಗೆ ಎಂಪಿ ಎಂಎಲ್ ಎ ನ್ಯೂಸ್ ಮತ್ತು mpmlasnewstv 24*7 ನ್ಯೂಸ್ ಪೋರ್ಟಲ್ ನ ಸಂಪಾದಕರಾದ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಎಂಪಿ ಎಂಎಲ್ ಎ ನ್ಯೂಸ್ ಮತ್ತು mpmlasnewstv 24*7 ನ್ಯೂಸ್ ಪೋರ್ಟಲ್ ದೇಶ-ವಿದೇಶಗಳಲ್ಲಿ 1.5 ಲಕ್ಷ ಓದುಗರನ್ನು, ಅಪಾರ ಅಭಿಮಾನಿ ಬಳಗವನ್ನು ಹೊಂದಿದೆ. ಈಗಾಗಲೇ 13 ಸೌಹಾರ್ದ ಸಂಗಮಗಳನ್ನು ಯಶಸ್ವಿಯಾಗಿ ಸಂಘಟಿಸಿ 300 ಕ್ಕೂ ಅಧಿಕ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕಾಗಿ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರಿಗೆ ಕರ್ನಾಟಕ ಸರಕಾರದಿಂದ ರಾಜ್ಯ ಪ್ರಶಸ್ತಿ ಮತ್ತು ಜಿಲ್ಲಾಡಳಿತದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.

ಪ್ರಾದೇಶಿಕ ವಾರ್ತೆಗಳು

ಎಂಪಿ ಎಂಎಲ್ ಎ ನ್ಯೂಸ್ ಮಹಾಪೋಷಕರಾಗಿ ಮಾಲಾಡಿ ಅಜಿತ್ ಕುಮಾರ್ ರೈ ಶುಭಾಶೀರ್ವಾದ.

ಮಂಗಳೂರು -ಎಂಪಿ ಎಂಎಲ್ ಎ ನ್ಯೂಸ್ ಮತ್ತು mpmlasnewstv 24*7 ನ್ಯೂಸ್ ಪೋರ್ಟಲ್ ನ ಮಹಾಪೋಷಕರಾಗಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಮಾಲಾಡಿ ಅಜಿತ್ ಕುಮಾರ್ ರೈ ಅವರು ಶುಭಾಶೀರ್ವಾದ ಮಾಡಿದ್ದಾರೆ. ಅವರಿಗೆ ಎಂಪಿ ಎಂಎಲ್ ಎ ನ್ಯೂಸ್ ಮತ್ತು mpmlasnewstv 24*7 ನ್ಯೂಸ್ ಪೋರ್ಟಲ್ ನ ಸಂಪಾದಕರಾದ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಎಂಪಿ ಎಂಎಲ್ ಎ ನ್ಯೂಸ್ ಮತ್ತು mpmlasnewstv 24*7 ನ್ಯೂಸ್ ಪೋರ್ಟಲ್ ದೇಶ-ವಿದೇಶಗಳಲ್ಲಿ 1.5 ಲಕ್ಷ ಓದುಗರನ್ನು, ಅಪಾರ ಅಭಿಮಾನಿ ಬಳಗವನ್ನು ಹೊಂದಿದೆ. ಈಗಾಗಲೇ 13 ಸೌಹಾರ್ದ ಸಂಗಮಗಳನ್ನು ಯಶಸ್ವಿಯಾಗಿ ಸಂಘಟಿಸಿ 300 ಕ್ಕೂ ಅಧಿಕ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕಾಗಿ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರಿಗೆ ಕರ್ನಾಟಕ ಸರಕಾರದಿಂದ ರಾಜ್ಯ ಪ್ರಶಸ್ತಿ ಮತ್ತು ಜಿಲ್ಲಾಡಳಿತದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.

ಪ್ರಾದೇಶಿಕ ವಾರ್ತೆಗಳು

ಇಂದು ಎಸ್ ಸಿಡಿಸಿಸಿ ಬ್ಯಾಂಕ್ ನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಂಗಳೂರು: “ಸಹಕಾರಿ ಪಿತಾಮಹ” ದಿ. ಮೊಳಹಳ್ಳಿ ಶಿವರಾವ್‌ ಸ್ಮರಣಾರ್ಥವಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಎಸ್ ಸಿಡಿಸಿಸಿ ಬ್ಯಾಂಕ್ ಪ್ರಧಾನ ಕಛೇರಿಯ ಮೊಳಹಳ್ಳಿ ಶಿವರಾವ್ ಸಭಾಭವನದಲ್ಲಿ ಜುಲೈ -4ರಂದು ಅಪರಾಹ್ನ 3.00 ಗಂಟೆಗೆ ನಡೆಯಲಿದೆ.2025-2026ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹತ್ತನೇ ತರಗತಿ ಹಾಗೂ ಪದವಿಪೂರ್ವ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿ ಸಾಧನೆಗೈದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಮತ್ತು ಬ್ಯಾಂಕಿನ ಸಿಬ್ಬಂದಿಗಳ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ ವಿತರಣೆ ಈ ಸಮಾರಂಭದಲ್ಲಿ  ನಡೆಯಲಿದೆ.ಕರ್ನಾಟಕ ಸರ್ಕಾರದ ಮಾಜಿ ಸಚಿವರು ಹಾಗೂ ವಿಕಾಸ್ ಎಜ್ಯುಕೇಶನ್ ಟ್ರಸ್ಟ್ ಸಂಸ್ಥಾಪಕರಾದ ಶ್ರೀ ಕೃಷ್ಣ ಜೆ.ಪಾಲೇಮಾರ್ ಇವರು ಗೌರವ ಪುರಸ್ಕಾರ ಹಾಗೂ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಿ, ಉತ್ತಮ ಸಾಧನೆಗೈದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸಲಿರುವರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್‌ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು.ಪತ್ರಿಕಾ ಮಾಧ್ಯಮದ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿನಂತಿ

Scroll to Top