Author name: editor

ಪ್ರಾದೇಶಿಕ ವಾರ್ತೆಗಳು

ಈ ಸಲದ ಜಿಲ್ಲಾ ಪ್ರಶಸ್ತಿಯಲ್ಲಿ ಪತ್ರಕರ್ತರಿಗೆ ಅನ್ಯಾಯ

ಬ್ರೇಕಿಂಗ್ ನ್ಯೂಸ್, ಮಂಗಳೂರು: ಈ ಸಲದ ಜಿಲ್ಲಾ ಪ್ರಶಸ್ತಿಯಲ್ಲಿ ಪತ್ರಕರ್ತರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಹಲವು ಮಂದಿ ಪತ್ರಕರ್ತರಿಂದ ವ್ಯಾಪಕ ಖಂಡನೆಗಳು ವ್ಯಾಪ್ತವಾಗುತ್ತಿವೆ. ನಾಲ್ಕು ಮಂದಿ ಪತ್ರಕರ್ತರ ಹೆಸರನ್ನು ಸಂಘ ಶಿಫಾರಸ್ಸು ಮಾಡಿದ್ದರೂ ಒಬ್ಬರನ್ನು ಮಾತ್ರ ಪ್ರಶಸ್ತಿಗೆ ಆಯ್ಕೆ ಮಾಡಿ ಮೂವರನ್ನು ನಿರ್ಲಕ್ಷಿಸಿದ ಜಿಲ್ಲಾಡಳಿತವು ದೃಶ್ಯ ಮಾಧ್ಯಮದವರು ನಾಳೆ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕುತ್ತೇವೆಂದಾಗ ಎಚ್ಛೆತ್ತುಕೊಂಡು ಇನ್ನೊಬ್ಬ ಟಿ. ವಿ. ವರದಿಗಾರನ್ನು ಆಯ್ಕೆ ಪಟ್ಟಿಯಲ್ಲಿ ಸೇರಿಸಿದೆ. ಹೀಗಿದ್ದರೂ ಇನ್ನಿಬ್ಬರನ್ನು ನಿರ್ಲಕ್ಷಿಸಲಾಗಿದೆ. ಜಿಲ್ಲಾಡಳಿತದ ಕತ್ತರಿ ಪ್ರಯೋಗ ಖಂಡನೀಯ. ಇದನ್ನು Mpmla’s news ತೀವ್ರವಾಗಿ ಖಂಡಿಸುತ್ತದೆ. ಇಷ್ಟೆಲ್ಲ ನಡೆಯುವಾಗ ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದರು? ಕತ್ತರಿ ಪ್ರಯೋಗದ ಸೂತ್ರಧಾರಿ ದಿನೇಶ್ ಗುಂಡೂರಾವ್ ಅವರೇ ಇರಬಹುದೇ? ಡಿ. ಸಿ. ಯವರೇ ಪತ್ರಕರ್ತರಿಗೆ ಅನ್ಯಾಯವನ್ನು ತಕ್ಷಣ ಸರಿಪಡಿಸಿ.

ಪ್ರಾದೇಶಿಕ ವಾರ್ತೆಗಳು

“ಪಿಲಿಪಂಜ” ತುಳು ಸಿನಿಮಾದ ಶಿರ್ಷಿಕೆ ಬಿಡುಗಡೆ

ಮಂಗಳೂರು: ಎಸ್ ಬಿ ಗ್ರೂಪ್ಸ್ ಅರ್ಪಿಸುವ, ಶಿಯಾನ ಪ್ರೊಡಕ್ಷನ್ ಹೌಸ್ ನಿರ್ಮಾಣದ, ಪಿಲಿಪಂಜ ಸಿನಿಮಾದ ಶಿರ್ಷಿಕೆ ಬಿಡುಗಡೆ ಕಾರ್ಯಕ್ರಮವು ಶ್ರೀ ನಿತ್ಯಾನಂದ ಸೇವಾಶ್ರಮ ಬಂದರು, ಮಂಗಳೂರು ಇಲ್ಲಿ ನಡೆಯಿತು..ಹಿರಿಯ ತುಳು ರಂಗಭೂಮಿ ಹಾಗೂ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಶಿರ್ಷಿಕೆ ಬಿಡುಗಡೆ ಮಾಡುತ್ತಾ, “ಪಿಲಿಪಂಜ” ಒಂದು ವಿಭಿನ್ನ ಹಾಗೂ ಕುತೂಹಲ ಮೂಡಿಸುವ ಟೈಟಲ್..ಇದೊಂದು ವಿಭಿನ್ನ ಚಿತ್ರವಾಗಿ ಮೂಡಿಬರುವುದರಲ್ಲಿ ಸಂಶಯವಿಲ್ಲ..ಒಂದೊಳ್ಳೆ ಕಥೆಯೊಂದಿಗೆ ಚಿತ್ರ ತಂಡ ನಮ್ಮ ಮುಂದೆ ಬರುತ್ತಿದೆ, ತುಳುನಾಡಿನಜನತೆ ಈ ಚಿತ್ರವನ್ನು ಗೆಲ್ಲಿಸಿ ಕೊಡ ಬೇಕು. ಗುರು ನಿತ್ಯಾನಂದರ ಆಶೀರ್ವಾದ ಚಿತ್ರ ತಂಡದ ಮೇಲಿರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಿಯಾನ ಪ್ರೊಡಕ್ಷನ್ ಹೌಸ್ ನ ಪ್ರತೀಕ್ ಪೂಜಾರಿ, ಚಿತ್ರದ ನಿರ್ದೇಶಕ ಭರತ್ ಶೆಟ್ಟಿ, ಎಕ್ಸಿಕ್ಯುಟಿವ್ ಪ್ರೊಡ್ಯುಷರ್ ರಮೇಶ್ ರೈ ಕುಕ್ಕುವಳ್ಳಿ, ಮುಂಬಯಿಯ ರಂಗ ನಿರ್ದೇಶಕ, ಭ್ರಾಮರಿ ಸುದ್ದಿವಾಹಿನಿಯ ರೂವಾರಿ ಬಾಬಾ ಪ್ರಸಾದ್ ಅರಸ, ಪ್ರಕಾಶ್ ಶೆಟ್ಟಿ ಧರ್ಮನಗರ, ರಾಜೇಶ್ ಕಣ್ಣೂರು, ರಕ್ಷಣ್ ಮಾಡೂರು, ಅಕ್ಷತ್ ವಿಟ್ಲ, ಸುರೇಶ್ ಬಲ್ಮಠ,ಅಭಿಷೇಕ್ ಕುಲಾಲ್, ಚಿತ್ರದ ಸಂಕಲನಕಾರ ಶ್ರೀನಾಥ್ ಪವರ್ ಮುಂತಾದವರು ಉಪಸ್ಥಿತರಿದ್ದರು..ನವೆಂರ್ 7ಕ್ಕೆ ಮಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ.ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ರವಿ ರಾಮಕುಂಜ, ಸುಂದರ್ ರೈ ಮಂದಾರ, ಶಿವಪ್ರಕಾಶ್ ಪೂಂಜ, ರೂಪಾಶ್ರೀ ವರ್ಕಾಡಿ, ಪ್ರಕಾಶ್ ಶೆಟ್ಟಿ ಧರ್ಮನಗರ, ರಕ್ಷಣ್ ಮಾಡೂರು, ಪ್ರವೀಣ್ ಕೊಡಕ್ಕಲ್, ರಂಜನ್ ಬೋಳಾರ್ , ದಿಶಾ ರಾಣಿ ಮುಂತಾದವರು ನಟಿಸಲಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಸುರತ್ಕಲ್ ಕೃಷ್ಣಾಪುರ ಫ್ಯಾರಡೈಸ್ ಮೈದಾನದಲ್ಲಿ ಮತ್ತು ಮಂಗಳೂರಿನ ಪದವು ಹೈಸ್ಕೂಲ್ ನ ಕಾಂಚನ ಗಂಗಾ ಮೈದಾನದಲ್ಲಿ ಪಟಾಕಿ ಉತ್ಸವ.

ಸುರತ್ಕಲ್: ಶಿವಕಾಶಿಯಿಂದ ನೇರ ಮಾರಾಟದ ಪಟಾಕಿ ಮಳಿಗೆ ಕೃಷ್ಣಾಪುರದ ಫ್ಯಾರಡೈಸ್ ಮೈದಾನದಲ್ಲಿದ್ದು ವಿಶಾಲ್ ಮತ್ತು ವಾಸುದೇವ ಸ್ಟಾಲ್‌ನಲ್ಲಿದೆ ಹಾಗೂ ಮಂಗಳೂರಿನ ಪದವು ಹೈಸ್ಕೂಲ್ ಮೈದಾನದ ಕಾಂಚನ ಗಂಗಾ ಟ್ರೇಡಿಂಗ್‌ನಲ್ಲಿ ಪಟಾಕಿ ಮಾರಾಟಕ್ಕಿದೆ. ಈ ಸಲದ ದೀಪಾವಳಿ ಹಬ್ಬವನ್ನು ಹಸಿರು ಪಟಾಕಿಯೊಂದಿಗೆ ಆಚರಿಸೋಣ. ನಾವು ಬೆಳೆಯೋಣ. ಪರಿಸರ ಸಂರಕ್ಷಿಸೋಣ. ಮಂಗಳೂರಿನಲ್ಲಿ ಎಂದೆಂದೂ ಕೇಳರಿಯದ ಕೆಲವು ಸಂಸ್ಥೆಗಳ ಸಹಯೋಗದೊಂದಿಗೆ ಪಟಾಕಿ ಮೇಳವನ್ನು ಅಕ್ಟೋಬರ್ 29ರಿಂದ ನವೆಂಬರ್ 2 ಮತ್ತು ನವೆಂಬರ್ 12ರಿಂದ ನವೆಂಬರ್ 13ರವರೆಗೆ ಹಮ್ಮಿಕೊಳ್ಳಲಾಗಿದೆ. ಕಡಿಮೆ ಬೆಲೆ ಉತ್ತಮ ಗುಣಮಟ್ಟದ ಪಟಾಕಿಗಳು ಮೇಲೆ ತಿಳಿಸಿದ ಜಾಗದಲ್ಲಿ ಲಭ್ಯವಿದೆ. ಕಡಿಮೆ ಹಣಕೊಟ್ಟು ಹೆಚ್ಚು ಆನಂದಿಸಿ. ಪ್ರತೀ 1,000ದ ಖರೀದಿಗೆ 1 ಕೂಪನ್ ಉಚಿತ. 2 ಮಳಿಗೆಗಳಲ್ಲಿ ಪ್ರತ್ಯೇಕ ಡ್ರಾ ಮತ್ತು ಪ್ರತ್ಯೇಕ 50+50 ಬಹುಮಾನ ಒಟ್ಟು 100 ಬಹುಮಾನಗಳು. ಇದರ ಡ್ರಾ. ಎರಡೂ ಮೈದಾನಗಳಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ನವೆಂಬರ್ 13ರ ರಾತ್ರಿ 8 ಗಂಟೆಗೆ ನಡೆಯಲಿದೆ. ಫಲಿತಾಂಶವನ್ನು ನವೆಂಬರ್ 19ರ ವಿಜಯಕರ್ನಾಟಕದಲ್ಲಿ ಪ್ರಕಟಿಸಲಾಗುವುದು. ಪಟಾಕಿ ಉತ್ಸವದ ಹೆಚ್ಚಿನ ಮಾಹಿತಿಗಾಗಿ 8792594085, 9113268480, 7406630999, 8971546444 ಈ ನಂಬರಿಗೆ ಸಂಪರ್ಕಿಸಬಹುದಾಗಿದೆ.

ಪ್ರಾದೇಶಿಕ ವಾರ್ತೆಗಳು

ಐಕಳ ಪಾಂಪೈ ಕಾಲೇಜಿನಲ್ಲಿ “ರೀಡಿಂಗ್ ಗಾಂಧಿ” ವಿಶೇಷ ಉಪನ್ಯಾಸ : ಗಾಂಧೀಜಿಯವರ ವ್ಯಕ್ತಿತ್ವವೇ ಆದರ್ಶ: ಎಂ.ಜಿ.ಹೆಗಡೆ

ಮೂಲ್ಕಿ: ಗಾಂಧಿಜೀಯವರ ಆದರ್ಶಗಳಾದ ಸತ್ಯ, ಅಹಿಂಸೆ, ಸತ್ಯಾಗ್ರಹ ನಡೆಸಿದ್ದ ಗಾಂಧಿಜೀಯವರನ್ನು “ಮಹಾತ್ಮ” ಎಂದು ಕರೆದದ್ದು ರವೀಂದ್ರನಾಥ ಟಾಗೋರ್ ಅವರು. ಗಾಂಧಿಜೀಯವರು ತಮ್ಮ ಉನ್ನತ ವ್ಯಕ್ತಿತ್ವದಿಂದಾಗಿ ಮಹಾತ್ಮರೆನಿಸಿಕೊಂಡವರು ಎಂದು ವಿಮರ್ಷಕ ಎಮ್.ಜಿ. ಹೆಗಡೆ ಹೇಳಿದರು.ಅವರು ಕಿನ್ನಿಗೋಳಿ ಬಳಿಯ ಐಕಳ ಪಾಂಪೈ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗ ಮತ್ತು ಭಾಷಾ ಸಂಘದ ಜಂಟಿ ಆಶ್ರಯದಲ್ಲಿ “ರೀಡಿಂಗ್ ಗಾಂಧೀಜಿ” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತಾಡಿದರು.ನಿವೃತ್ತ ಪ್ರಾಂಶುಪಾಲ ಉದಯಕುಮಾರ ಹಬ್ಬು ಮಾತನಾಡಿ, ಗಾಂಧಿಜೀಯವರ ಹೋರಾಟದ ಕಥೆಗಳೇ ರೋಚಕವಾಗಿದೆ. ಅದರನ್ನು ಇಂದಿಗೂ ವಿಶ್ವವೇ ಗೌರವಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ ಎಂದರು.ಕಾಲೇಜಿನ ಪ್ರಾಂಶುಪಾಲ ಡಾ. ಪುರುಷೋತ್ತಮ ಕೆ. ಅಧ್ಯಕ್ಷತೆಯನ್ನು ವಹಿಸಿದ್ದರು.ಇಂಗ್ಲಿಷ್ ವಿಭಾಗದ ಡಾ. ವಿಕ್ಟರ್ ವಸಜ್, ವಿದ್ಯಾರ್ಥಿ ನಾಯಕರುಗಳು ಮತ್ತಿತರರು ಇದ್ದರು. -0-

ಪ್ರಾದೇಶಿಕ ವಾರ್ತೆಗಳು

ಮಂಗಳೂರು: ಪಾಲ್ದನೆ ಚರ್ಚ್ ನಲ್ಲಿ ಹಿರಿಯ ನಾಗರಿಕರ ದಿನಾಚರಣೆ

ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಯಿತು. ಚರ್ಚ್ ವ್ಯಾಪ್ತಿಯ 10 ವಾರ್ಡ್ ಗಳ 82 ಮಂದಿ ಹಿರಿಯ ನಾಗರಿಕರು ಭಾಗವಹಿಸಿದ್ದರು. ಪ್ರಾರಂಭದಲ್ಲಿ ಬಲಿ ಪೂಜೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ವಂದನೀಯ ಫಾ. ರಿಚಾರ್ಡ್ ಕ್ವಾಡ್ರಸ್ ಅವರು ಹಿರಿಯ ನಾಗರಿಕರು ನಮಗೆ ದಾರಿ ದೀಪವಾಗಿದ್ದಾರೆ ಎಂದು ಹೇಳಿದರು. ಚರ್ಚಿನ ಪ್ರದಾನ ಧರ್ಮ ಗುರು ವಂದನೀಯ ಫಾ. ಆಲ್ಬನ್ ಡಿ ಸೋಜಾ ಅವರು ಹಿರಿಯ ನಾಗರಿಕರಿಗೆ ಹಿತ ವಚನ ನೀಡಿದರು.ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಪ್ಯಾಟ್ಸಿ ಮೊಂತೇರೊ, ಸ್ವಾಗತಿಸಿದರು. ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಉಪಸ್ಥಿತರಿದ್ದರು. ಹಿರಿಯ ನಾಗರಿಕರ ಪರವಾಗಿ ಚಾರ್ಲ್ಸ್ ಡಿಮೆಲ್ಲೊ ತಮ್ಮ ಅನಿಸಿಕೆ ಹೇಳಿದರು. ಪ್ಲಾವಿಯಾ ಡಿ ಸೋಜಾ ಕಾರ್ಯಕ್ರಮ ನಿರ್ವಹಿಸಿದರು. ಸಿರಿಲ್ ಫೆರ್ನಾಂಡಿಸ್ ಮತ್ತು ತಂಡದವರು ಕಿರು ನಾಟಕ ಪ್ರದರ್ಶಿಸಿದರು. ಚಾರ್ಲ್ಸ್ ಫೆರ್ನಾಂಡಿಸ್ ನಗೆ ಹನಿ ಪ್ರದರ್ಶನ ನೀಡಿದರು.ಕ್ಲಿಫರ್ಡ್ ಅವರು ವಂದಿಸಿದರು

ಪ್ರಾದೇಶಿಕ ವಾರ್ತೆಗಳು

ನ.17; ರಥಬೀದಿ ಶ್ರೀ ಗೋಕರ್ಣ ಮಠದಲ್ಲಿ ಶ್ರೀರಾಮನಾಮ ಜಪ ಮಹಾ ಅಭಿಯಾನ, ನ.3 – 21: ಮಂಗಳೂರಿನಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರ ಮೊಕ್ಕಾಂ

ಮಂಗಳೂರು, ಅ.29;ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ, ಗೋವಾದ ಪರಮಪೂಜ್ಯ ಶ್ರೀಮತ್ ವಿದ್ಯಾಧೀಶ ತೀರ್ಥ ಶ್ರೀ ಪಾದ ಒಡೇರಾ ಸ್ವಾಮೀಜಿಯವರು ಮಂಗಳೂರು ರಥಬೀದಿ ಶ್ರೀ ಗೋಕರ್ಣ ಮಠದ ಶಾಖಾ ಮಠದಲ್ಲಿ ನ.3 ರಿಂದ ನ.21ರವರೆಗೆ ಮೊಕ್ಕಾಂ ಹೂಡಲಿದ್ದಾರೆ.ಈ ಹಿನ್ನೆಲೆಯಲ್ಲಿ ನ.17ರಂದು ಒಂದೇ ದಿನದಲ್ಲಿ 55ಲಕ್ಷ ಜಪ ಸಂಖ್ಯೆಯ ಗುರಿ ಹೊಂದಿರುವ ಶ್ರೀ ರಾಮನಾಮ ಜಪ ಮಹಾ ಅಭಿಯಾನ ಮಂಗಲರಾಮಃ ಕೇಂದ್ರದಲ್ಲಿ ನಡೆಯಲಿದೆ. ಎಪ್ರಿಲ್ 17 ರಂದು ಆರಂಭಿಸಲಾದ ಶ್ರೀ ರಾಮನಾಮ ಜಪ ಅಭಿಯಾನದಲ್ಲಿ , ಮಂಗಲರಾಮಃ ಕೇಂದ್ರದಲ್ಲಿ ಈಗಾಗಲೇ10.50 ಕೋಟಿ ಶ್ರೀ ರಾಮನಾಮ ಜಪ ನಡೆದಿದೆ. ನ 18,2025 ರೊಳಗೆ 25ಕೋಟಿ ಶ್ರೀ ರಾಮನಾಮ ಜಪ ತಲುಪುವ ಉದ್ದೇಶ ಹೊಂದಲಾಗಿದೆ.ಪರಮಪೂಜ್ಯ ಶ್ರೀ ಸ್ವಾಮೀಜಿಯವರು ಎರಡನೇ ಬಾರಿಯ ಈ ಐತಿಹಾಸಿಕ ಮೊಕ್ಕಾಂ ನ ಸಂದರ್ಭದಲ್ಲಿ ಸಮಾಜದ ಭಕ್ತ ಬಾಂಧವರು ಆಗಮಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಶ್ರೀರಾಮ ವೀರ ವಿಠಲ ದೇವರ ಕೃಪೆಗೆ ಪಾತ್ರರಾಗ ಬೇಕಾಗಿ ಹಾಗೂ ಪರಮಪೂಜ್ಯ ಶ್ರೀ ಸ್ವಾಮೀಜಿಗಳ ಆಶೀರ್ವಾದ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

‘ಅಂಗನವಾಡಿ ಕೇಂದ್ರದಿಂದ ಶಿಕ್ಷಣಕ್ಕೆ ಅಡಿಪಾಯ’ ಸಿಎ ಶಾಂತಾರಾಮ ಶೆಟ್ಟಿ

ಮಂಗಳೂರು: ಎಳೆಯ ಮಕ್ಕಳನ್ನು ಪೋಷಿಸಿ ಅಕ್ಷರಜ್ಞಾನ ನೀಡುವ ಅಂಗನವಾಡಿ ಕೇಂದ್ರಗಳು ಶಿಕ್ಷಣಕ್ಕೆ ಅಡಿಪಾಯವಿದ್ದಂತೆ. ಕಲಿಕೆ ಇಲ್ಲಿಂದಲೇ ಆರಂಭವಾಗುವುದರಿಂದ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರ ಸೇವೆ ಮಹತ್ತರವಾದುದು ಎಂದು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಬಿಜೈ ಕಾಪಿಕಾಡ್‌ನ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ನಡೆದ ಪುಟಾಣಿಗಳ ಜತೆ ಹಣತೆಯೊಂದಿಗೆ ದೀಪಾವಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸಮರ್ಪಕ ಕುಡಿಯುವ ನೀರು, ಶೌಚಾಲಯ ಸಹಿತ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಅವಶ್ಯ. ಈ ನಿಟ್ಟಿನಲ್ಲಿ ಅಗತ್ಯ ನೆರವು ನೀಡಲು ರೆಡ್‌ಕ್ರಾಸ್ ಸಂಸ್ಥೆ ಬದ್ಧವಾಗಿದೆ ಎಂದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಹಿರಿಯ ಪತ್ರಕರ್ತ ಕೇಶವ ಕುಂದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಂಗನವಾಡಿ ಶಿಕ್ಷಕಿ ನಂದಾ ಸುರೇಶ್, ಸಹಾಯಕಿ ಲಕ್ಷ್ಮಿ, ಆಶಾ ಕಾರ್ಯಕರ್ತೆ ಪ್ರಭಾ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್.ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ವಿಶ್ವ ಟೇಕ್ವಾಂಡೋ: ಸಂಹಿತಾಗೆ ಎರಡು ಕಂಚಿನ ಪದಕ

ಮಂಗಳೂರು: ಬ್ಯಾಂಕಾಕ್‌ನಲ್ಲಿ ನಡೆದ ಟೇಕ್ವಾಂಡೋ ವಿಶ್ವ ಚಾಂಪಿಯನ್‌ ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮಂಗಳೂರಿನ ಸಂಹಿತಾ ಅಲೆವೂರಾಯ ಕೆ.ವಿ. ಎರಡು ಕಂಚಿನ ಪದಕ ಗಳಿಸಿದ್ದಾರೆ. ಸೀನಿಯರ್‌ ವಿಭಾಗದಲ್ಲಿ ಸ್ಪರ್ಧಿಸಿ ಪೂಮ್ಸೆ ಮತ್ತು ಕ್ಯೂರೋಗಿ ವಿಭಾಗದಲ್ಲಿ ಪದಕ ಗಳಿಸಿದರು.೨೦೨೧ರಲ್ಲಿ ನೇಪಾಳದಲ್ಲಿ ನಡೆದ ಜೂನಿಯರ್‌ ಚಾಂಪಿಯನ್‌ಶಿಪ್‌ ನಲ್ಲಿ ಚಿನ್ನದ ಪದಕ, ೨೦೨೨ರಂದು ಮಲೇಷ್ಯಾದಲ್ಲಿ ಬೆಳ್ಳಿ ಪದಕ, ೨೦೨೩ರಲ್ಲಿ ಮಲೇಷ್ಯಾದಲ್ಲಿ ಚಿನ್ನದ ಮತ್ತು ಕಂಚಿನ ಪದಕ ಗಳಿಸಿದ್ದರು.ಈ ಬಾರಿ ಸೀನಿಯರ್‌ ವಿಭಾಗದಲ್ಲಿ ಸ್ಪರ್ಧಿಸಿ ಸಾಧನೆ ಮಾಡಿದ್ದಾರೆ. ನಿಟ್ಟೆ ಎನ್‌ಎಂಎಎಐಟಿ ಯಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿರುವ ಸಂಹಿತಾ, ಕದ್ರಿಯ ವಾಸುದೇವ ಭಟ್‌ ಮತ್ತು ದೀಪಾ ಕೆ.ಎಸ್.‌ ದಂಪತಿ ಪುತ್ರಿ. ಗುರುರಾಜ್‌ ಇಟಗಿ ಮತ್ತು ನಿಖಿಲ್‌ ಶೆಟ್ಟಿ ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ.

ಪ್ರಾದೇಶಿಕ ವಾರ್ತೆಗಳು

ಐಎಂಎ ಮಂಗಳೂರು ಇವರ ಆಶ್ರಯದಲ್ಲಿ ಪ್ರಥಮ ಭಾರಿಗೆ ಕನ್ನಡ ಪುಸ್ತಕ ಬಿಡುಗಡೆ, ರಾಜ್ಯೋತ್ಸವ. ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಉಪನ್ಯಾಸಗಳು.

ಮಂಗಳೂರು: ನವೆಂಬರ್ 1 ರಂದು ಬೆಳಿಗ್ಗೆ 1೦:3೦ಕ್ಕೆ ಸರಿಯಾಗಿ ನಾಡಿನ ಹಿರಿಯ ವೈದ್ಯ ಡಾ ಶಾಂತಾರಾಮ ಶೆಟ್ಟಿಯವರ ಅಮೃತ ಹಸ್ತಗಳಿಂದ ನಾಡ ಧ್ವಜಾರೋಹಣ ಜರುಗಲಿದ್ದು, ಡಾ. ಶಾಂತಾರಾಮ ಶೆಟ್ಟಿ ಯವರು ಬರೆದ ಕನ್ನಡ ಪುಸ್ತಕಗಳನ್ನ ಮಾಜಿ ರಾಜ್ಯ ಕಸಾಪ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಬಿಡುಗಡೆ ಮಾಡಲಿದ್ದಾರೆವೈದ್ಯಕೀಯ. ಸಾಹಿತ್ಯ, ಶಿಕ್ಷಣ ಹಾಗೂ ಸಾಮಾಜಿಕ ಸೇವೆಯ ಜೊತೆಗೆ ನಾಡು ನುಡಿ ನೆಲ ಜಲ ಪರಿಸರಕ್ಕಾಗಿ ಸಂಘಟನೆಗಳ ಮೂಲಕ ಹೋರಾಟ ಮಾಡಿ ಜನಜಾಗೃತಿ ಮೂಡಿಸಿದ ರಾಜ್ಯ ಮಟ್ಟದ ಐಎಂಎ ಯ ವೈದ್ಯ ರೋರ್ವರಿಗೆ ಈ ವರ್ಷದಿಂದ ಐಎಂಎ ಮಂಗಳೂರು ವತಿಯಿಂದ ಐಎಂಎ ಮಂಗಳೂರು ರಾಜ್ಯೋತ್ಸವ ಪ್ರಶಸ್ತಿಯನ್ನು ನಾಡೋಜ ಜೀ ಶಂಕರ್ ಪ್ರದಾನ ಮಾಡಲಿದ್ದು,ನಿಟ್ಟೆ ವಿವಿಯ ವಿಶ್ರಾಂತ ವೈಸ್ ಚಾನ್ಸಲರ್ ಡಾ ಸತೀಶ್ ಭಂಡಾರಿಯವರು ಶುಭಾಶಯ ನುಡಿ ಸಲ್ಲಿಸಲಿದ್ದು, ಬಹುಭಾಷಾ ನಟ ಸುಮನ್ ತಲ್ವಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ದಕ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ನ ಹಾಲಿ ಹಾಗೂ ಮಾಜಿ ಅಧ್ಯಕ್ಷರುಗಳಾದ ಶ್ರೀನಾಥ್ ಹಾಗೂ ಪ್ರದೀಪ್ ಕುಮಾರ್ ಕಲ್ಕೂರ ಅವರುಗಳು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ವೈದ್ಯೋ ನಾರಾಯಣ ಹರಿ ಇದೆಲ್ಲಾ ಯೆಸ್ಟು ಸರಿ. ಎಂಬ ಕನ್ನಡ ಉಪನ್ಯಾಸವನ್ನ ಹಿರಿಯ ವೈದ್ಯ ಸಾಹಿತಿ, ಸಮಾಜವಿಜ್ಞಾನಿ, ಸಂಘಟಕ ಡಾ ಎಂ ಅಣ್ಣಯ್ಯ ಕುಲಾಲ್ ನಡೆಸಿಕೊಡಲಿದ್ದಾರೆ. ಜೊತೆಗೆ ರಕ್ತ ಸಂಬಂಧಿತ ಕಾಯಿಲೆಗಳ ತಜ್ಞ ವೈದ್ಯರಾದ ಕೆ ಎಂ ಸಿ ಯ ಡಾ ಪ್ರಶಾಂತ್ ಬಿ ಯವರು ಹಿರಿಯರಲ್ಲಿ ರಕ್ತ ಹೀನತೆ ಯೆಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದು ಐಎಂಎ ಮಂಗಳೂರು ಇದರ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಖಜಾಂಜಿ ಗಳಾದ ಡಾ ರಂಜಾನ್, ಡಾ ಆವಿನ್ ಆಳ್ವ ಹಾಗೂ ಡಾ ಪ್ರಶಾಂತ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

ಪ್ರಾದೇಶಿಕ ವಾರ್ತೆಗಳು

ಈ ಸಲ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಇಲ್ಲ. ಬದಲಾಗಿ, ಜಿಲ್ಲಾ ಪ್ರಶಸ್ತಿ ಕೊಡಲಾಗುವುದು-ಜಿ. ಸಂತೋಷ್ ಕುಮಾರ್, ಅಪರ ಜಿಲ್ಲಾಧಿಕಾರಿ.

ವರದಿ: ಡಾ. ಅಶೋಕ್ ಶೆಟ್ಟಿ.ಬಿ. ಎನ್. ಮಂಗಳೂರು: ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರವು ಕೊಡುತ್ತಿದ್ದರಿಂದ ಜಿಲ್ಲಾ ಮಟ್ಟದಲ್ಲಿ ಕೊಡಲಾಗುವ ಪ್ರಶಸ್ತಿಯನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಎನ್ನುವ ಬದಲು ಜಿಲ್ಲಾ ಪ್ರಶಸ್ತಿಯೆಂದು ಕೊಡಲಾಗುವುದೆಂದು ಅಪರ ಜಿಲ್ಲಾಧಿಕಾರಿ ಜಿ.ಸಂತೋಷ್ ಕುಮಾರ್ ಹೇಳಿದ್ದಾರೆ. ನಾಳೆ ಸಂಜೆಯೊಳಗೆ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾದ ಸಾಧಕರ ಹೆಸರು ಬಿಡುಗಡೆಯಾಗಲಿದೆ.

Scroll to Top