Author name: editor

ಪ್ರಾದೇಶಿಕ ವಾರ್ತೆಗಳು

ಬೋಂದೆಲ್ ಚರ್ಚ್ ಮತ್ತು ಪುಣ್ಯ ಕ್ಷೇತ್ರದಲ್ಲಿ ಸಂತ ಲಾರೆನ್ಸರ ಹಬ್ಬದ ನೊವೆನಾ ಆರಂಭ. ಹಬ್ಬದ ವಿಷಯ: “ನಾನು ನಿಮ್ಮನ್ನು ಪ್ರೀತಿಸಿದಂತೆಯೇ ಒಬ್ಬರನ್ನೊಬ್ಬರು ಪ್ರೀತಿಸೋಣ” (ಯೋಹಾನ 15:12). ಸಂದೇಶ: “ಸಂತ ಲಾರೆನ್ಸರಂತೆ ನಾವು ಬಡವರನ್ನು ಪ್ರೀತಿಸೋಣ ಮತ್ತು ಸೇವೆ ಮಾಡೋಣ.”

ಮಂಗಳೂರು: ಮಂಗಳೂರಿನ ಬೋಂದೆಲ್ ಸಂತ ಲಾರೆನ್ಸ್ ಚರ್ಚ್ ಮತ್ತು ಪುಣ್ಯ ಕ್ಷೇತ್ರದ ವಾರ್ಷಿಕ ಹಬ್ಬದ ಆಚರಣೆಗಳು ಮಂಗಳೂರು ನಗರ ವಲಯದ ವಿಕಾರ್ ವಾರ್ ಹಾಗೂ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರ ವಿಧ್ಯುಕ್ತ ಧ್ವಜಾರೋಹಣದೊಂದಿಗೆ ಪ್ರಾರಂಭವಾಯಿತು. ಅವರನ್ನು ಬೋಂದೆಲ್ ಚರ್ಚ್ ಮತ್ತು ಪುಣ್ಯ ಕ್ಷೇತ್ರದರೆಕ್ಟರ್ ವಂದನೀಯ ಫಾ. ಬೇಸಿಲ್ ವಾಸ್ ಅವರು ಪುಷ್ಪಗುಚ್ಛ ಮತ್ತು ಶಾಲು ಹೊದಿಸಿ ಆತ್ಮೀಯವಾಗಿ ಸ್ವಾಗತಿಸಿದರು.ತಮ್ಮ ಸಂದೇಶದಲ್ಲಿ, ಫಾ.ರಿಚಾರ್ಡ್ ಕುವೆಲ್ಲೊ ಅವರು ಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು ಮತ್ತು ಸಂತ ಲಾರೆನ್ಸರಂತೆ ನಾವು ಬಡವರನ್ನು ಪ್ರೀತಿಸೋಣ ಮತ್ತು ಸೇವೆ ಮಾಡೋಣ” ಎಂಬ ಹಬ್ಬದ ಸಂದೇಶವನ್ನು ನೀಡಿದರು. ಬಡವರನ್ನು ಪ್ರೀತಿಸುವುದು ಮತ್ತು ಸೇವೆ ಮಾಡುವುದು ಪ್ರತಿಯೊಬ್ಬ ಕ್ರೈಸ್ತನ ಧ್ಯೇಯ ಮತ್ತು ಕ್ಯಾಥೊಲಿಕರನಂಬಿಕೆಯ ಅತ್ಯಗತ್ಯ ಅಭಿವ್ಯಕ್ತಿ ಯಾಗಿದೆ ಎಂದು ಹೇಳಿದರು.ಸ್ವಾಗತಿಸಿದ ವಂದನೀಯಫಾ. ಬೇಸಿಲ್ ವಾಸ್ ಅವರು ಒಂಬತ್ತು ದಿನಗಳ ನೊವೆನಾದಲ್ಲಿ ಭಾಗವಹಿಸಲು ಮತ್ತು ಸಂತ ಲಾರೆನ್ಸ್ ಅವರ ಆಶೀರ್ವಾದವನ್ನು ಪಡೆಯಲು ಎಲ್ಲರನ್ನೂ ಆಹ್ವಾನಿಸಿದರು. ಹಬ್ಬದ ವಿಷಯವನ್ನು ಉಲ್ಲೇಖಿಸಿ, ಈ ವರ್ಷ ರೋಗಿಗಳು ಮತ್ತು ಅಶಕ್ತರಿಗೆ ವೈದ್ಯಕೀಯ ನಿಧಿ ಆರಂಭಿಸಲು ಉದ್ದೇಶಿಸಿದ್ದು, ಈ ಯೋಜನೆಗೆ ಜನರು ಬೆಂಬಲಿಸ ಬೇಕೆಂದರು.ಸಮಾರಂಭದಲ್ಲಿ ಸಹಾಯಕ ಧರ್ಮಗುರು ವಂದನೀಯ ಫಾ. ಲಾರೆನ್ಸ್ ಕುಟಿನ್ಹಾ; ಸೇಂಟ್ ಲಾರೆನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂದನೀಯ ಫಾ. ಪೀಟರ್ ಗೊನ್ಸಾಲ್ವಿಸ್, ವಂದನೀಯ ಫಾ. ಬಿಜು ಬೆತ್ರಮ್, ವಂದನೀಯ ಫಾ. ಜೇಮ್ಸ್ ಬ್ರಿಟ್ಟೊ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷಜಾನ್ ಡಿ’ಸಿಲ್ವಾ; ಕಾರ್ಯದರ್ಶಿ ಅಲ್ವಿನ್ ಸಲ್ಡಾನ್ಹಾ; ಸರ್ವ ಆಯೋಗಗಳ ಸಂಯೋಜಕಿ ಅವಿತಾ ಮಸ್ಕರೇನ್ಹಸ್; ಪುಣ್ಯಕ್ಷೇತ್ರದ ಸಂಚಾಲಕ ಜೇಸನ್ ಫೆರ್ನಾಂಡಿಸ್; ಮತ್ತು ಮಾಧ್ಯಮ ಸಂಚಾಲಕಿ ಮೀನಾ ಬಾರ್ಬೋಜಾ, ಮಾಧ್ಯಮ ಸಲಹೆಗಾರ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ರಿಯಾ ವೇಗಸ್ ನಿರೂಪಿಸಿದರು.ಧ್ವಜಾರೋಹಣದ ಬಳಿಕ ವಂದನೀಯ ಫಾ . ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಪರಮ ಪ್ರಸಾದದ ಆರಾಧನೆಯನ್ನು ಮುನ್ನಡೆಸಿದರು ಮತ್ತು ಎಲ್ಲಾ ಭಕ್ತರ ಇಷ್ಟಾರ್ಥಗಳಿಗಾಗಿ ಪ್ರಾರ್ಥಿಸಿದರು. ಬಳಿಕ ಅವರು ಮೊದಲ ದಿನದ ನೊವೆನಾ ಪ್ರಾರ್ಥನೆಯನ್ನು ನಡೆಸಿಕೊಟ್ಟರು. “ಮಕ್ಕಳು ದೇವರ ರಾಜ್ಯದ ಫಲಗಳು” ಎಂಬ ವಿಷಯದ ಕುರಿತು ಪ್ರಬೋಧನೆ ನೀಡಿದ ಅವರು ಪೋಷಕರು ತಮ್ಮ ಮಕ್ಕಳನ್ನು ನಿಯಮಿತವಾಗಿ ಚರ್ಚ್‌ಗೆ ಕರೆತರ ಬೇಕು. ಇದರಿಂದ ಅವರು ದೇವರ ಪ್ರೀತಿ ಮತ್ತು ಉಪಸ್ಥಿತಿಯನ್ನು ಅನುಭವಿಸ ಬಹುದು. ಮಕ್ಕಳು ದೇವರಿಂದ ಬಂದ ಅಮೂಲ್ಯ ಉಡುಗೊರೆ. ಅವರನ್ನು ನಂಬಿಕೆ ಮತ್ತು ಕ್ರಿಶ್ಚಿಯನ್ ಮೌಲ್ಯಗಳಲ್ಲಿ ಬೆಳೆಸಬೇಕು ಎಂದು ಅವರು ಪೋಷಕರಿಗೆ ನೆನಪಿಸಿದರು.ಪಾಲ್ದನೆ ಚರ್ಚ್ ನ ಲೀಝಿ ಫೆರ್ನಾಂಡಿಸ್ ನೇತೃತ್ವದ ಗಾಯನ ತಂಡವು ಪರಮ ಪ್ರಸಾದದ ಆರಾಧನೆ ಮತ್ತು ಬಲಿಪೂಜೆಯ ಸಂದರ್ಭ ಭಕ್ತಿ ಗಾಯನದೊಂದಿಗೆ ಸಹಕರಿಸಿತು.

ಪ್ರಾದೇಶಿಕ ವಾರ್ತೆಗಳು

ಆಂಜೆಲೋರ್ ಚರ್ಚ್ ನಲ್ಲಿ ನಾಯಕತ್ವ ತರಬೇತಿ ಶಿಬಿರ

ಮಂಗಳೂರು: ಮಂಗಳೂರಿನ ನಾಗುರಿ ಯಲ್ಲಿ ಇರುವ ಆಂಜೆಲೋರ್ ಚರ್ಚ್ ನಲ್ಲಿ ಕ್ಯಾಥೋಲಿಕ್ ಸಭಾ ಆಂಜೆಲೋರ್ ಘಟಕ ಮತ್ತು ಯುವಜನ ಆಯೋಗದ ನೇತೃತ್ವದಲ್ಲಿ ನಾಯಕತ್ವ ತರಬೇತಿ ಶಿಬಿರ ನಡೆಯಿತು.ಚರ್ಚ್ ನ ಯುವಜನರಿಗೆ ನಾಯಕತ್ವ ಮತ್ತು ಕಾರ್ಯಕ್ರಮ ನಿರ್ವಹಣೆ ಕುರಿತಂತೆ ತರಬೇತಿ, ಸರಕಾರಿ ನೌಕರಿಗೆ ಸೇರುವ ಬಗ್ಗೆ ಪ್ರೇರೇಪಣೆ ನೀಡಲಾಯಿತು.ಉದ್ಘಾಟನಾ ಕಾರ್ಯಕ್ರಮದಲ್ಲಿಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ಫೆಡ್ರಿಕ್ ಮೊಂತೇರೊ, ವಂದನೀಯ ಫಾ . ಅವಿಲ್ ಮಸ್ಕರೇನ್ಹಸ್, ಚರ್ಚ್ ಉಪಾಧ್ಯಕ್ಷ ಮತ್ತು ಕಾರ್ಯದರ್ಶಿ, ಕ್ಯಾಥೋಲಿಕ್ ಸಭಾ ಅಧ್ಯಕ್ಷ ಪಾವ್ಲ್ ರೊಡ್ರಿಗಸ್ ಅವರು ಉಪಸ್ಥಿತರಿದ್ದರು.ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮನು ಬಂಟ್ವಾಳ್, ಡೆನ್ನಿಸ್ ಡಿ ಸಿಲ್ವಾ, ಸುರೇಶ್ ಎಂ. ಎಸ್., ಜೂಲಿಯೆಟ್ ಫೆರ್ನಾಂಡಿಸ್ ಅವರು ಭಾಗವಹಿಸಿ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಾದೇಶಿಕ ವಾರ್ತೆಗಳು

ಆ.3ರಿಂದ ಮೂಳೆ ಮತ್ತು ಕೀಲುಗಳ ಆರೋಗ್ಯ ಜಾಗೃತಿ ಸಪ್ತಾಹ -ಕೆಒಎ ಅಧ್ಯಕ್ಷ ಡಾ.ಬಿ.ಸಚ್ಚಿದಾನಂದ ರೈ ಮಾಹಿತಿ

ಮಂಗಳೂರು: ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಶನ್ (ಕೆಒಎ) ವತಿಯಿಂದ ಸಾರ್ವಜನಿಕರಲ್ಲಿ ಮೂಳೆ ಮತ್ತು ಕೀಲುಗಳ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆ.3ರಿಂದ 8ರವರೆಗೆ ರಾಜ್ಯಾದ್ಯಂತ ಬೋನ್ ಮತ್ತು ಜಾಯಿಂಟ್ ವೀಕ್ – 2026 ಆಚರಣೆ ವಿವಿಧ ಜಾಗೃತಿ ಕಾರ್ಯಕ್ರಮಗಳ ಮೂಲಕ ನಡೆಯಲಿದೆಜಿಲ್ಲಾ ಆರ್ಥೋಪೆಡಿಕ್ ಅಸೋಸಿಯೇಶನ್‌ಗಳು, ಶಾಲೆಗಳು, ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದುಕೆಒಎ ಅಧ್ಯಕ್ಷ ಡಾ.ಬಿ.ಸಚ್ಚಿದಾನಂದ ರೈ ತಿಳಿಸಿದ್ದಾರೆ.ಆ.3ರಂದು ಶಾಲಾಮಕ್ಕಳಲ್ಲಿ ಬೆನ್ನುಮೂಳೆ ಮತ್ತು ದೇಹದ ಭಂಗಿ ತಪಾಸಣೆ, ಆ.4ರಂದು ಆಸ್ಟಿಯೋಪೊರೋಸಿಸ್ ತಡೆ ಹಾಗೂ ಹಾರ್ಮೋನ್ ಆರೋಗ್ಯದ ಅರಿವು, ಆ.5ರಂದು ಸರಿಯಾದ ಕುಳಿತುಕೊಳ್ಳುವಿಕೆ, ನಿಲ್ಲುವಿಕೆ ಹಾಗೂ ಕೆಲಸದ ಭಂಗಿಯ ಕುರಿತು ಜಾಗೃತಿ, ಆ.6ರಂದು ಅಪಘಾತ ಮತ್ತು ಗಾಯಗಳ ತಡೆ ಕುರಿತು ಸಾರ್ವಜನಿಕ ಶಿಕ್ಷಣ, ಆ.7ರಂದುಹಿರಿಯ ನಾಗರಿಕರಲ್ಲಿ ಬೀಳುವಿಕೆ ತಡೆ ಹಾಗೂ ಸುರಕ್ಷಿತ ಜೀವನ ಶೈಲಿ ಜಾಗೃತಿ ಹಾಗೂ ಆ.8ರಂದು ಅಸ್ಥಿ ಚಿಕಿತ್ಸಕರ ಆರೋಗ್ಯ, ಸುರಕ್ಷತೆ ಹಾಗೂ ವೃತ್ತಿಪರ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಮೂಳೆ ಮತ್ತು ಕೀಲುಗಳ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ನಮ್ಮ ಹೊಣೆಗಾರಿಕೆಯಾಗಿದೆ. ಜಿಲ್ಲಾ ಆರ್ಥೋಪೆಡಿಕ್ ಅಸೋಸಿಯೇಶನ್‌ಗಳು,ವೈದ್ಯಕೀಯ ಕಾಲೇಜುಗಳು ಹಾಗೂ ಆಸ್ಪತ್ರೆಗಳು ಸಪ್ತಾಹದ ಅಂಗವಾಗಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ನಡೆಸುವ ಮೂಲಕ ಆರೋಗ್ಯಕರ ಕರ್ನಾಟಕ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕೆಒಎ ಅಧ್ಯಕ್ಷ ಡಾ.ಬಿ.ಸಚ್ಚಿದಾನಂದ ರೈ ವಿನಂತಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

Lion Amala Maria Isabella Quadros PMJF *Humanitarian | Leader | Centennial Club Mangalore

Professional BackgroundA retired Cosmetologist and General Manager with over 25 years of leadership experience in Dubai, Lion Amala Maria Isabella Quadros brings with her a global perspective, grace, and a heart for service.Service & Social CommitmentA true philanthropist, she has dedicated her life to serving the poor and downtrodden.She served as Secretary of the Mangalore District for Human Rights for Women & Children for 2 years, where she became a strong voice for dignity, justice, and empowerment.Having traveled the world, she chose to return and invest her time, talent, and energy in her community.Lions JourneyHer Lions journey began with Lions Club Mangalore Centennial as President, and since then there has been no looking back.In her very first year itself, she was honored as an MJF, and went on to receive the prestigious Melvin Jones Trophy and was conferred the title of PMJF in the same year — a rare and remarkable achievement.Her dynamic leadership and commitment to service earned Centennial Club 4 major district awards:Best Club Award | Best President Award | Best Service Activity Award | Membership Growth AwardIn a NutshellLion Amala Maria Isabella Quadros is not just a leader — she is an inspiration.A woman who turned compassion into action, and titles into service.“She leads with grace, serves with heart, and leaves every life she touches a little brighter.”

ಪ್ರಾದೇಶಿಕ ವಾರ್ತೆಗಳು

Lions Club Mangalore Centennial Installation Ceremony

The installation ceremony of the newly elected office-bearers of Lions Club Centennial for the year 2026–27 was held at Lions Ashoka Bhavan, near Kadri Park.At the ceremony, Ln.Amal Maria Isabella Quadros,PMJF assumed office as the new President. The installation proceedings were conducted by Ln.Swaroop N. Shetty,PMJF who officially inducted the new office-bearers and also welcomed five new members into the Lions family. She appreciated the club’s activities and wished the club continued success in carrying out service projects that benefit society. The new executive committee includes Ln.Richard Pinto as Secretary, Ln.Suresh Montero as Treasurer, Ln.Harold D’Cunha and Ln. Lawrence Lobo as Vice Presidents,Ln. Diana Shanbhog,Ln. Vincent Pereira as PRO,Ln. Tejakshi Suvarna, Ln.Hilda Urva ,Ln.Jacinta Lobo, Ln.Sriram Rai,Ln. Andrea Fernandes and Ln.Ujwal D’Cunha, who took the oath of office for various positions.Immediate Past Governor Ln.Kudpi Aravind Shenoy PMJF, Regional Chairperson Ln.Jayaraj Prakash and Zone Chairperson Ln.Ganesh Salian congratulated the newly elected office-bearers and praised the club’s community service initiatives. As part of the event, various service activities worth ₹2,50,000 were undertaken. Zone Envoy Ln.Lawrence Lobo assisted in organizing the programme. On the occasion of Kargil Vijay Diwas, Subedar Bharat Kumar was honoured. The programme was compered by PRO Ln.Vincent Pereira, while Ln.Suresh Montero delivered the vote of thanks. Region club office-bearers and members attended the function and congratulated the new team. The event concluded with a musical programme presented by Ms.Pratibha and her group.

ಪ್ರಾದೇಶಿಕ ವಾರ್ತೆಗಳು

ಲಯನ್ಸ್ ಕ್ಲಬ್ ಸೆಂಟೆನಿಯಲ್ ನೂತನ ಪದಾಧಿಕಾರಿಗಳ ಪದಗ್ರಹಣ

ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಸೆಂಟೆನಿಯಲ್‌ನ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಗರದ ಕದ್ರಿ ಪಾರ್ಕ್ ಸಮೀಪದ ಲಯನ್ಸ್ ಅಶೋಕ ಭವನದಲ್ಲಿ ನಡೆಯಿತು. ಸಮಾರಂಭದಲ್ಲಿ ಲಯನ್ ಅಮಲ್ ಮರಿಯಾ ಇಸಬೆಲ್ಲಾ ಕ್ವಾಡ್ರೋಸ್ (PMJF) ಅವರು ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಲಯನ್ ಸ್ವರೂಪ್ ಎನ್. ಶೆಟ್ಟಿ (PMJF) ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರದ ಪ್ರಮಾಣವಚನ ಬೋಧಿಸಿ, ಐವರು ನೂತನ ಸದಸ್ಯರನ್ನು ಲಯನ್ಸ್ ಕುಟುಂಬಕ್ಕೆ ಸೇರ್ಪಡೆಗೊಳಿಸಿದರು. ಕ್ಲಬ್ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದ ಅವರು, ಮುಂದೆಯೂ ಇನ್ನಷ್ಟು ಅರ್ಥಪೂರ್ಣ ಸೇವಾ ಕಾರ್ಯಗಳನ್ನು ಕೈಗೊಳ್ಳುವಂತೆ ಶುಭ ಹಾರೈಸಿದರು.ನೂತನ ಕಾರ್ಯಕಾರಿ ಸಮಿತಿಯಲ್ಲಿ ರಿಚರ್ಡ್ ಪಿಂಟೋ ಕಾರ್ಯದರ್ಶಿಯಾಗಿ, ಸುರೇಶ್ ಮೊಂತೇರೊ ಖಜಾಂಚಿಯಾಗಿ, ಹೆರಾಲ್ಡ್ ಡಿ’ಕುನ್ಹಾ ಹಾಗೂ ಲಾರೆನ್ಸ್ ಲೋಬೊ ಉಪಾಧ್ಯಕ್ಷರಾಗಿ, ಡಯಾನಾ ಶಾನ್‌ಭೋಗ್, ವಿನ್ಸೆಂಟ್ ಪಿರೇರಾ (ಜನಸಂಪರ್ಕಾಧಿಕಾರಿ), ತೇಜಾಕ್ಷಿ ಸುವರ್ಣ, ಹಿಲ್ಡಾ ಉರ್ವಾ, ಜಸಿಂತಾ ಲೋಬೊ, ಶ್ರೀರಾಮ್ ರೈ, ಆಂಡ್ರಿಯಾ ಫೆರ್ನಾಂಡಿಸ್ ಹಾಗೂ ಉಜ್ವಲ್ ಡಿ’ಕುನ್ಹಾ ವಿವಿಧ ಹುದ್ದೆಗಳಿಗೆ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ್ ಶೆಣೈ (PMJF), ಪ್ರಾದೇಶಿಕ ಅಧ್ಯಕ್ಷ ಜಯರಾಜ್ ಪ್ರಕಾಶ್ ಹಾಗೂ ವಲಯ ಅಧ್ಯಕ್ಷ ಗಣೇಶ್ ಸಾಲ್ಯಾನ್ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ, ಕ್ಲಬ್‌ನ ಸಮಾಜಮುಖಿ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.ಈ ಸಂದರ್ಭದಲ್ಲಿ ಸುಮಾರು ₹2.50 ಲಕ್ಷ ಮೌಲ್ಯದ ವಿವಿಧ ಸೇವಾ ಯೋಜನೆಗಳಿಗೆ ಚಾಲನೆ ನೀಡಲಾಯಿತು. ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಸುಬೇದಾರ್ ಭರತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಆಯೋಜನೆಯಲ್ಲಿ ವಲಯ ಎನ್ವಾಯ್ ಲಾರೆನ್ಸ್ ಲೋಬೊ ಸಹಕರಿಸಿದರು. ಜನಸಂಪರ್ಕಾಧಿಕಾರಿ ವಿನ್ಸೆಂಟ್ ಪಿರೇರಾ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಮೊಂತೇರೊ ವಂದನಾರ್ಪಣೆ ಸಲ್ಲಿಸಿದರು. ವಿವಿಧ ಲಯನ್ಸ್ ಕ್ಲಬ್‌ಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು ನೂತನ ತಂಡಕ್ಕೆ ಶುಭ ಹಾರೈಸಿದರು. ಬಳಿಕ ಪ್ರತಿಭಾ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ಪತ್ರಕರ್ತ ಸುರೇಶ್ ಡಿ. ಪಳ್ಳಿಗೆ ‘ನಾರದ ಪುರಸ್ಕಾರ’ ಪ್ರಶಸ್ತಿ

ಮಂಗಳೂರು: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿ ಗ್ರಾಮ ಭಾರತಿ ಟ್ರಸ್ಟ್ ಹಾಗೂ ಕಲಾದರ್ಶನ ಮಾಸಪತ್ರಿಕೆ ಆಶ್ರಯದಲ್ಲಿ ಪ್ರಥಮ ಸುದ್ದಿ ವಾಹಕ ಮಹರ್ಷಿ ನಾರದರ ಸಂಸ್ಮರಣೆಯಲ್ಲಿ ನೀಡಲಾಗುವ ‘ನಾರದ ಪುರಸ್ಕಾರ’ ಪ್ರಶಸ್ತಿಗೆ ‘ಹೊಸ ದಿಗಂತ ಪತ್ರಿಕೆ’ಯ ಮಂಗಳೂರು ಆವೃತ್ತಿಯ ಪ್ರಧಾನ ವರದಿಗಾರ ಸುರೇಶ್ ಡಿ. ಪಳ್ಳಿ ಅವರು ಭಾಜನರಾಗಿದ್ದಾರೆ.ಪ್ರಶಸ್ತಿ ಪ್ರದಾನ ಸಮಾರಂಭ ಆ.4 ರಂದು ಸಂಜೆ 4 ಗಂಟೆಗೆ ಕಾರಣಗಿರಿಯಲ್ಲಿರುವ ಶ್ರೀ ಸಿದ್ಧಿವಿನಾಯಕ ಸಭಾ ಭವನದಲ್ಲಿ ನಡೆಯಲಿದೆ.ಕಲಾದರ್ಶನ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಹಾದಿಗಲ್ಲು ಲಕ್ಷ್ಮೀನಾರಾಯಣ ಅವರು ಅಧ್ಯಕ್ಷತೆ ವಹಿಸಲಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಮಗ್ರ ಕರ್ನಾಟಕ ಪ್ರಾಂತದ ಪ್ರಚಾರ ಪ್ರಮುಖ್ ಅರುಣ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗ್ರಾಮ ಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ ಮತ್ತಿತರರು ಉಪಸ್ಥಿತರಿರುವರು.ಒಟ್ಟು ಒಂಭತ್ತು ಮಂದಿ ಪತ್ರಕರ್ತರಿಗೆ ನಾರದ ಪುರಸ್ಕಾರ ಪ್ರದಾನವಾಗಲಿದೆ.ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿರುವ ಸುರೇಶ್ ಡಿ. ಪಳ್ಳಿ ಅವರು ಕಳೆದ 19 ವರ್ಷಗಳಿಂದ ಹೊಸ ದಿಗಂತ ಪತ್ರಿಕೆಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ 2013ರಲ್ಲಿ ಅತ್ಯುತ್ತಮ ಗ್ರಾಮೀಣ ವರದಿಗಾಗಿ ಪದ್ಯಾಣ ಗೋಪಾಲಕೃಷ್ಣ ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ (ಪ.ಗೋ ಪ್ರಶಸ್ತಿ), ಸಮಾಜದಲ್ಲಿ ಸೌಹಾರ್ದತೆ ಪ್ರತಿಬಿಂಬಿಸುವ ವಿಶೇಷ ವರದಿಗಾಗಿ 2023ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ‘ಬ್ರ್ಯಾಂಡ್ ಮಂಗಳೂರು’ ಪ್ರಶಸ್ತಿ ಲಭಿಸಿದೆ.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ಧರ್ಮ ಕ್ಷೇತ್ರದ ಪಾಲನಾ ಪರಿಷತ್ ನೂತನ ಕಾರ್ಯದರ್ಶಿಯಾಗಿ ಝೀಟಾ ಉಷಾ ಫೆರ್ನಾಂಡಿಸ್ ಆಯ್ಕೆ

ಮಂಗಳೂರು: ಮಂಗಳೂರು ಧರ್ಮಕ್ಷೇತ್ರದ 2026-2028 ನೇ ಸಾಲಿನ ಪಾಲನಾ ಪರಿಷತ್ ನ ಕಾರ್ಯದರ್ಶಿಯಾಗಿ ಸಿಟಿ ವಲಯದ ನೀರು ರ್ಮಾರ್ಗ ಚರ್ಚ್ ನ ಝೀಟಾ ಉಷಾ ಫೆರ್ನಾಂಡಿಸ್ ಅವರು ಆಯ್ಕೆಯಾಗಿದ್ದಾರೆ.ಧರ್ಮಕ್ಷೇತ್ರದ ಪಾಲನಾ ಪರಿಷತ್ ನ ನೂತನ ಸಮಿತಿಯ ಚುನಾವಣೆ ಹಾಗೂ ಪದಗ್ರಹಣ ಕಾರ್ಯಕ್ರಮವು ಜುಲಾಯಿ 30ರಂದು ಗುರುವಾರ ಕೊಡಿಯಾಲ್ ಬೈಲಿನ ಬಿಷಪ್ಸ್ ಹೌಸ್ ಸಭಾಂಗಣದಲ್ಲಿ ನಡೆಯಿತು.ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಸಭೆಯ ಅಧ್ಯಕ್ಷತೆ ವಹಿಸಿ, ಹೊಸ ತ್ರೈವಾರ್ಷಿಕ ಅವಧಿಯ ಧ್ಯೇಯ- ದೃಷ್ಟಿಕೋನವನ್ನು ಮಂಡಿಸಿದರು ಹಾಗೂ ನೂತನ ಪರಿಷತ್ ಸದಸ್ಯರನ್ನು ಪರಿಚಯಿಸಿದರು.ಧರ್ಮಕ್ಷೇತ್ರದ ಶ್ರೇಷ್ಠ ಗುರು ವಂದನೀಯ ಫಾ. ಮ್ಯಾಕ್ಸಿಮ್ ಎಲ್. ನೊರೊನ್ಹಾ ಕಳೆದ ಅವಧಿಯ ಕಾರ್ಯಚಟುವಟಿಕೆಗಳ ವರದಿ ಹಾಗೂ ಮುಂದಿನ ಪಾಸ್ಟೋರಲ್ ಯೋಜನೆಗಳನ್ನು ಮಂಡಿಸಿದರು.ಬಳಿಕ 2026-2028ನೇ ಅವಧಿಯ ವಿವಿಧ ಪದಾಧಿಕಾರಿ ಹುದ್ದೆಗಳಿಗೆ ಚುನಾವಣೆ ನಡೆಸಲಾಯಿತು.ಚುನಾವಣೆಯಲ್ಲಿ ಸಿಟಿ ವಲಯದ ನೀರುರ್ಮಾರ್ಗ ಚರ್ಚ್ ನ ಝೀಟಾ ಉಷಾ ಫೆರ್ನಾಂಡಿಸ್ ಅವರು ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದರು.ಪುರುಷ ಪ್ರತಿನಿಧಿಯಾಗಿ ಸಿಟಿ ವಲಯದ ಕೆಲರಾಯ್ಚರ್ಚ್ ನ ಸಂತೋಷ್ ಡಿ ಕೋಸ್ತಾ , ಮಹಿಳಾ ಪ್ರತಿನಿಧಿಯಾಗಿ ಕಿರೆಂ ವಲಯದ ಬಳಕುಂಜೆ ಚರ್ಚ್ ನ ಡಾ. ಫ್ರೀಡಾ ಫ್ಲಾವಿಯಾ ಡಿ ಸೋಜಾ,ಕ್ಯಾಥೊಲಿಕ್ ಕೌನ್ಸಿಲ್ ಆಫ್ ಇಂಡಿಯಾ ಪ್ರತಿನಿಧಿಗಳಾಗಿಸಂತೋಷ್ ಡಿ ಸೋಜಾ ಮತ್ತು ಲಿನೆಟ್ ಫೆರ್ನಾಂಡಿಸ್,ಕ್ಯಾಥೊಲಿಕ್ ಕೌನ್ಸಿಲ್ ಆಫ್ ಕರ್ನಾಟಕ ಪ್ರತಿನಿಧಿಗಳಾಗಿ ಆಲ್ವಿನ್ ಜೆರೊಮ್ ಡಿ ಸೋಜಾ ಪಾನೀರ್ ಮತ್ತುಡೆನಿಸ್ ಡಿಸಿಲ್ವಾ ಕುಲಶೇಖರ ಅವರು ಆಯ್ಕೆಗೊಂಡರು.ಚುನಾವಣಾ ಪ್ರಕ್ರಿಯೆಯ ಬಳಿಕ ಸಿಬಿಸಿಐ ಲಿತರ್ಜಿಆಯೋಗದ ಪ್ರತಿನಿಧಿ ವಂದನೀಯ ಡಾ. ರುಡಾಲ್ಫ್ ರಾಜ್ ಪಿಂಟೊ ಅವರು “2026-2028ರ ಸಿನೋದ್ ಅನುಷ್ಠಾನದ ಮಾರ್ಗಸೂಚಿಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.ಅಧ್ಯಕ್ಷತೆ ವಹಿಸಿದ್ದಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ನೂತನ ಕಾರ್ಯದರ್ಶಿ ಹಾಗೂ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಿದರು.

ಪ್ರಾದೇಶಿಕ ವಾರ್ತೆಗಳು

ವನಮಹೋತ್ಸವ ಆಚರಣೆ

ಸಂತ ರೀಟಾ ಆಂಗ್ಲ ಮಾಧ್ಯಮ ಶಾಲೆ , ಜೆಪ್ಪುಜೆಪ್ಪು :ಸಂತ ರೀಟಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ ಅಂಗವಾಗಿ ಪಿ.ಟಿ.ಎ ಕಾರ್ಯಕಾರಿ ಸಮಿತಿ ಸದಸ್ಯರ ಸಹಯೋಗದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪಿ .ಟಿ.ಎ ಕಾರ್ಯಕಾರಿ ಸಮಿತಿ ಸದಸ್ಯರು ಶಾಲಾ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದರು. ಕಾರ್ಯಕ್ರಮದಲ್ಲಿ ಅವರು ಉತ್ಸಾಹದಿಂದ ಭಾಗವಹಿಸಿ, ವಿದ್ಯಾರ್ಥಿಗಳಿಗೂ ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸಿದರು. ವಿದ್ಯಾರ್ಥಿಗಳೂ ಸಹ ವಿವಿಧ ಬಗೆಯ ಹೂವಿನ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಪ್ರಕೃತಿ ಪ್ರೇಮ, ಪರಿಸರ ಸಂರಕ್ಷಣೆ ಮತ್ತು ಹಸಿರು ಪರಿಸರ ನಿರ್ಮಾಣದ ಬಗ್ಗೆ ಜಾಗೃತಿ ಮೂಡಿಸಿತು.ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಪಿ.ಟಿ.ಎ ಕಾರ್ಯಕಾರಿ ಸಮಿತಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಶಾಲೆಯ ವತಿಯಿಂದ ಹೃತ್ಪೂರ್ವಕ ಧನ್ಯವಾದ ಸಲ್ಲಿಸಲಾಯಿತು

Scroll to Top