ಸಮಾಜ ಮುಖೀ ವೈದ್ಯಕೀಯ ಸೇವೆಯ ಜೊತೆಗೆ, ಆರೋಗ್ಯ ಜಾಗೃತಿ, ನಾಡು ನುಡಿ ನೆಲ ಜಲ ಪರಿಸರ ಕಾಳಜಿ, ಗಡಿನಾಡ ಜಾಗೃತಿ ಹೋರಾಟ ಸಂಘಟನೆ ಸಾಹಿತ್ಯ ಭಾಷಣ ಪ್ರಾಯೋಜಕತ್ವ ಗಳಿಂದ ನಾಡಿನ ಉದ್ದಗಲಕ್ಕೂ ಗಟ್ಟಿ ಧ್ವನಿಯ ನೇರ ನಡೆ ನುಡಿಯ ಮೂಲಕ ಚಿರಪರಿಚಿತರಾಗಿರುವ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಉಪಾಧ್ಯಕ್ಷರೂ, ಪ್ರತಿಷ್ಠಿತ ಡಾ ಬಿ ಸಿ ರಾಯ್ ರಾಷ್ಟ್ರೀಯ ಸೇವಾ ಪುರಸ್ಕಾರ ಹಾಗೂ ದೇವರಾಜ ಅರಸು ರಾಜ್ಯ ಪುರಸ್ಕಾರ ಪಡೆದಿರುವ “ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು” ಅವರನ್ನು ವಿದೇಶದ ಖ್ಯಾತ “ಕನ್ನಡ ಸಂಘ ಬೆಹರೈನ್ “ ತನ್ನ 48 ನೇ ವರ್ಷದ ಕನ್ನಡ ವೈಭವ ಸಾಂಸ್ಕೃತಿಕ ಸಮ್ಮೇಳನಕ್ಕೆ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಿದೆ.






























































































































